ಆ್ಯಪ್ನಗರ

ತ್ರಿವಳಿಗೆ ಜನ್ಮ ನೀಡಿದ ಮಹಾತಾಯಿ

ಮಹಾಲಿಂಗಪುರ(ಬಾಗಲಕೋಟ): ಹೊಸ ತಲೆಮಾರಿನ ನಾರಿಗೆ ಸಹಜ ಹೆರಿಗೆಯೆಂಬುದೇ ಸವಾಲಿನ ವಿಷಯ ಎಂಬಂತಾಗಿದೆ. ಆದರೂ ಇಲ್ಲೊಬ್ಬ ಮಹಿಳೆ ಸಹಜ ಹೆರಿಗೆ ಮೂಲಕ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಮಹಾಲಿಂಗಪುರದ ಆರೋಗ್ಯಧಾಮ ಆಸ್ಪತ್ರೆಯಲ್ಲಿ ಮೇ 25ರಂದು ನಡೆದಿದೆ.

Vijaya Karnataka 26 May 2018, 5:00 am
ಮಹಾಲಿಂಗಪುರ(ಬಾಗಲಕೋಟ): ಹೊಸ ತಲೆಮಾರಿನ ನಾರಿಗೆ ಸಹಜ ಹೆರಿಗೆಯೆಂಬುದೇ ಸವಾಲಿನ ವಿಷಯ ಎಂಬಂತಾಗಿದೆ. ಆದರೂ ಇಲ್ಲೊಬ್ಬ ಮಹಿಳೆ ಸಹಜ ಹೆರಿಗೆ ಮೂಲಕ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಮಹಾಲಿಂಗಪುರದ ಆರೋಗ್ಯಧಾಮ ಆಸ್ಪತ್ರೆಯಲ್ಲಿ ಮೇ 25ರಂದು ನಡೆದಿದೆ.
Vijaya Karnataka Web mahathayi gave birth to a triple
ತ್ರಿವಳಿಗೆ ಜನ್ಮ ನೀಡಿದ ಮಹಾತಾಯಿ

ಬನಹಟ್ಟಿ ನಗರದ ಸವಿತಾ ಕಾಡಪ್ಪ ಚಿಂಚಖಂಡಿ(23) ಎರಡನೇ ಹೆರಿಗೆಗೆಂದು ಗುರುವಾರ ರಾತ್ರಿ ಆರೋಗ್ಯಧಾಮ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಅಹೋರಾತ್ರಿ ಸಕಾಲಕ್ಕೆ ಅಗತ್ಯ ಚಿಕಿತ್ಸೆ ನೀಡಿದ್ದರಿಂದ ಮರುದಿನ(ಶುಕ್ರವಾರ) ಬೆಳಗ್ಗೆ 9:30ಕ್ಕೆ ಸಹಜ ಹೆರಿಗೆಯಾಗಿದೆ. ಗರ್ಭಿಣಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಮೊದಲನೆ ಮಗು ಗಂಡು 2ಕೆಜಿ, 2ನೆಯದು ಹೆಣ್ಣು 1.7 ಕೆಜಿ, 3ನೆಯದು ಗಂಡು 1.8 ಕೆಜಿ ಇದ್ದು, ಮೂರೂ ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

2010ರಲ್ಲಿ ಸಂಗಾನಟ್ಟಿಯ ಮಹಿಳೆಯೊಬ್ಬಳು ಇದೇ ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ್ದಳು. 3 ವರ್ಷಗಳ ಹಿಂದೆ ಮಹಿಳೆಯೊಬ್ಬಳ ಗರ್ಭಕೋಶದಲ್ಲಿ ಬೆಳೆದಿದ್ದ 6 ಕೆಜಿ ಗಡ್ಡೆ ಹೊರತೆಗೆಯುವ ಅಪರೂಪದ ಯಶಸ್ವೀ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಪ್ರಾಣ ಉಳಿಸಲಾಗಿತ್ತು. ಈಗ ಗರ್ಭದಲ್ಲಿ ತ್ರಿವಳಿ ಮಕ್ಕಳನ್ನು ಹೊತ್ತು ಬಂದ ಮಹಿಳೆಗೆ ಚಿಕಿತ್ಸೆ ನೀಡಿ ಸಹಜ ಹೆರಿಗೆ ಮಾಡಿಸಿ ತಾಯಿ-ಮಕ್ಕಳ ಪ್ರಾಣ ಉಳಿಸಿದ್ದಾರೆ. ಸ್ತ್ರೀರೋಗ ತಜ್ಞರಾದ ಡಾ.ಮಹೇಂದ್ರ ವಾಳ್ವೇಕರ್‌, ಡಾ.ಸುರೇಖಾ ಚನ್ನಾಳ, ಡಾ. ಮಂಗೇಶ ವಾಳ್ವೇಕರ್‌, ಆರೋಗ್ಯಧಾಮ ಆಸ್ಪತ್ರೆಯ ಎಂಡಿ ಡಾ. ಎಂ.ಎಸ್‌. ಚನ್ನಾಳ ಸುರಕ್ಷಿತ ಹೆರಿಗೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

----

ಕೋಟ್‌...

ಧೈರ್ಯ ಮತ್ತು ಆತ್ಮವಿಶ್ವಾಸವಿದ್ದರೆ ಹೆರಿಗೆ ಸಹಜ ಮತ್ತು ಸುಲಭವಾಗುತ್ತದೆ. ಆದರೆ ಕೆಲವರು ಭಯದಿಂದಾಗಿ ಸಿಸೇರಿಯನ್‌ ಹೆರಿಗೆ ಮೊರೆ ಹೋಗುತ್ತಾರೆ. ಸವಿತಾ ಹೆರಿಗೆಗೆಂದು ನಮ್ಮ ಆಸ್ಪತ್ರೆಯಲ್ಲಿ ದಾಖಲಾಗಿದ್ದಳು. ಹೊಟ್ಟೆ ದೊಡ್ಡದಾಗಿತ್ತು. ಹೆರಿಗೆ ನೋವು ಅಧಿಕವಾಗಿತ್ತು. ಅಹೋರಾತ್ರಿ ನಿಗಾ ವಹಿಸಿ ಚಿಕಿತ್ಸೆ ನೀಡಿದೆವು. ಬೆಳಗ್ಗೆ 9:30ಕ್ಕೆ ಸಹಜ ಹೆರಿಗೆಯಾಯಿತು. ಮೂರು (ಅನುಕ್ರಮವಾಗಿ ಗಂಡು, ಹೆಣ್ಣು ಮತ್ತು ಗಂಡು) ಮಕ್ಕಳಿಗೆ ಜನ್ಮ ನೀಡಿದಳು. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ.

-ಡಾ.ಸುರೇಖಾ ಎಂ.ಚನ್ನಾಳ, ಸ್ತ್ರೀ ರೋಗತಜ್ಞೆ, ಆರೋಗ್ಯಧಾಮ ಆಸ್ಪತ್ರೆ, ಮಹಾಲಿಂಗಪುರ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ