ಆ್ಯಪ್ನಗರ

ಜವಾರಿ ಅಡುಗೆ ಮಾಡಿ ಮಕ್ಕಳ ಆರೋಗ್ಯ ಕಾಪಾಡಿ

ಇಳಕಲ್‌ : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಕಲಬೆರಕೆ ಆಹಾರ, ಕಲುಷಿತ ವಾತಾವರಣದಲ್ಲಿ ಆರೋಗ್ಯ ರಕ್ಷ ಣೆಗಾಗಿ ಕಸ ತಿನ್ನುವುದಕ್ಕಿಂತ ತುಸು ತಿನ್ನುವುದು ಲೇಸು. ಆದರೆ ಶುಚಿಯಾದ, ರುಚಿಯಾದ ಆಹಾರ ಸೇವಿಸಬೇಕಾದ ಅಗತ್ಯವಿದೆ ಎಂದು ಗುರುಮಹಾಂತ ಶ್ರೀಗಳು ಹೇಳಿದರು.

Vijaya Karnataka 12 Jul 2019, 5:00 am
ಇಳಕಲ್‌ : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಕಲಬೆರಕೆ ಆಹಾರ, ಕಲುಷಿತ ವಾತಾವರಣದಲ್ಲಿ ಆರೋಗ್ಯ ರಕ್ಷ ಣೆಗಾಗಿ ಕಸ ತಿನ್ನುವುದಕ್ಕಿಂತ ತುಸು ತಿನ್ನುವುದು ಲೇಸು. ಆದರೆ ಶುಚಿಯಾದ, ರುಚಿಯಾದ ಆಹಾರ ಸೇವಿಸಬೇಕಾದ ಅಗತ್ಯವಿದೆ ಎಂದು ಗುರುಮಹಾಂತ ಶ್ರೀಗಳು ಹೇಳಿದರು.
Vijaya Karnataka Web maintain child health by cooking jawari
ಜವಾರಿ ಅಡುಗೆ ಮಾಡಿ ಮಕ್ಕಳ ಆರೋಗ್ಯ ಕಾಪಾಡಿ


ಅವರು ಇಲ್ಲಿನ ಎಸ್‌.ವಿ.ಎಂ. ಕಾಲೇಜ್‌ ಕ್ಯಾಂಟೀನ್‌ ಉದ್ಘಾಟನೆ ನೆರವೇರಿಸಿ, ಉತ್ತರ ಕರ್ನಾಟಕದ ಜವಾರಿ ಊಟ, ಉಪಹಾರದ ವ್ಯವಸ್ಥೆಯನ್ನು ಕ್ಯಾಂಟೀನ್‌ದಲ್ಲಿ ಮಾಡಬೇಕಿದೆ. ಇಡ್ಲಿ, ವಡಾ, ದೋಸೆಯಂತಹ ಕರಿದ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ಕೊಡುವುದರಿಂದ ಉತ್ತಮ ಆರೋಗ್ಯ ಲಭಿಸದು. ಜೋಳದ ನುಚ್ಚು, ಹುರುಳಿ ಕಟ್ಟಿ ಸಾರು, ಗಂಜಿ, ಕಷಾಯ, ಅಂಬ್ಲಿ, ಅನ್ನ ಸಾಂಬಾರು ಮುಂತಾದ ಜವಾರಿ ಅಡಿಗೆಗಳನ್ನು ವಿದ್ಯಾರ್ಥಿಗಳಿಗೆ ವೇಳೆಗನುಸಾರ ನೀಡಿ ವಿದ್ಯಾರ್ಥಿಗಳ ಆರೋಗ್ಯ ಕಾಪಾಡಬೇಕೆಂದು ಹೊಟೇಲ್‌ ಮಾಲೀಕರಿಗೆ ಕಿವಿಮಾತು ಹೇಳಿದರು.

ಸಂಘದ ಚೇರಮನ್‌ ಎಂ.ಜಿ. ಪಟ್ಟಣಶೆಟ್ಟರ, ಆಯುರ್ವೇದ ಕಾಲೇಜ್‌ ಕೆ.ಎಸ್‌. ಕಂದಿಕೊಂಡ ಮಾತನಾಡಿಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಆಹಾರ ತಯಾರಿಕೆಗೆ ಕರಿದ ಎಣ್ಣೆಯನ್ನು ಪುನ: ಬಳಸಬಾರದು, ಸ್ವಚ್ಛತೆ ಕಾಪಾಡಬೇಕು, ಸ್ವಚ್ಛತೆಗೆ, ಗುಣಮಟ್ಟದ ಆಹರಕ್ಕೆ ಪ್ರಥಮ ಆದ್ಯತೆ ನೀಡಿರಿ ಎಂದರು.

ಎಂ.ವಿ. ಪಾಟೀಲ, ಡಾ.ಕೆ.ವಿ. ಅಕ್ಕಿ, ದಿಲೀಪ ದೇವಗಿರಿಕರ, ಆರ್‌.ಆರ್‌. ಸೂಡಿ, ಸಿ.ಪಿ. ಸಾಲಿಮಠ, ಪ್ರಾಚಾರ್ಯೆ ಡಾ.ಭಾರತಿ ನಾಯಕ, ಪ್ರಾಚಾರ್ಯ ಡಾ.ಕೆ.ಸಿ. ದಾಸ, ಪ್ರೊ. ಜಿ. ಮಲ್ಲಯ್ಯ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ