ಆ್ಯಪ್ನಗರ

ಮಕ್ಕಳಲ್ಲಿ ಯೋಗದ ಅರಿವು ಮೂಡಿಸಿ

ಮನುಷ್ಯನ ದೈಹಿಕ ಹಾಗೂ ಮಾನಸಿದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಯೋಗ ಇತ್ತೀಚೆಗೆ ಬಹಳಷ್ಟು ಮಹತ್ವ ಪಡೆದುಕೊಳ್ಳುತ್ತಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

Vijaya Karnataka 3 Jun 2019, 5:00 am
ಬಾಗಲಕೋಟ : ಮನುಷ್ಯನ ದೈಹಿಕ ಹಾಗೂ ಮಾನಸಿದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಯೋಗ ಇತ್ತೀಚೆಗೆ ಬಹಳಷ್ಟು ಮಹತ್ವ ಪಡೆದುಕೊಳ್ಳುತ್ತಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
Vijaya Karnataka Web make a sense of yoga in children
ಮಕ್ಕಳಲ್ಲಿ ಯೋಗದ ಅರಿವು ಮೂಡಿಸಿ


ವಿದ್ಯಾಗಿರಿಯ ಗ್ರಾಮೀಣ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಲ್ಲಿ ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆ, ಬೆಂಗಳೂರಿನ ಸಮ್ಮಿತ್‌ ಯೋಗ ಸಂಸ್ಥೆ ಹಾಗೂ ಬವಿವ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಯೋಗ ಕ್ರೀಡಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಯೋಗ ಕ್ರೀಡಾ ಶಿಬಿರದ ಮೂಲಕ ಶಿಬಿರಾರ್ಥಿಗಳು ಸಾಕಷ್ಟು ಪ್ರಯೋಜನ ಪಡೆದುಕೊಂಡಿದ್ದಾರೆ. ತಾವು ಪಡೆದುಕೊಂಡ ತರಬೇತಿಯ ಮೂಲಕ ಪ್ರತಿಯೊಂದು ಶಾಲೆಯಲ್ಲಿನ ಮಕ್ಕಳಿಗೆ ಯೋಗಾಭ್ಯಾಸದ ತರಗತಿ ತೆಗೆದುಕೊಳ್ಳಬೇಕು. ಆ ಮೂಲಕವಾಗಿ ಶಿಬಿರದ ಧ್ಯೇಯೋದ್ದೇಶಗಳು ಈಡೇರಬೇಕು ಎಂದರು.

ಬಸವೇಶ್ವರ ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯ ಸಿ.ಬಿ.ಸುರೇಶ ಹೆಗ್ಡೆ, ಸಮ್ಮಿತ್‌ ಯೋಗ ಸಂಸ್ಥೆಯ ಕಾರ್ಯದರ್ಶಿ ಹರೀಶಕುಮಾರ ಆರ್‌ಡಿಎಫ್‌ ಸಂಸ್ಥೆ ಮುಖ್ಯಸ್ಥ ಪಂಚಮುಖಿ ಹಾಗೂ ಉತ್ತರ ಕರ್ನಾಟಕದ ಯೋಗ ತರಬೇತಿಯ ಸಂಯೋಜಕ ಪರಶುರಾಮ ಕಲ್ಯಾಣಿ

30 ಶಾಲೆಗಳಿಂದ ಆಗಮಿಸಿದ 68 ಶಿಕ್ಷ ಕರು ಶಿಬಿರದ ಸದುಪಯೋಗ ಪಡೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ