ಆ್ಯಪ್ನಗರ

ನೇಕಾರ ಸಾಲಮನ್ನಾ ಚರ್ಚೆಗೆ ಸಮಯ ನಿಗದಿಯಾಗಲಿ

ರಬಕವಿ/ಬನಹಟ್ಟಿ: 2017ರಲ್ಲಿ ನೇಕಾರರ 50 ಸಾವಿರ ರೂ.ಗಳ ಸಾಲಮನ್ನಾಗೆ ಸಂಬಂಧ ಜವಳಿ, ಹಣಕಾಸು ಹಾಗೂ ಕೈಗಾರಿಕಾ ನಿಗಮಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ನಿರ್ದೇಶನದೊಂದಿಗೆ ಸಭೆ ನಡೆಸಿ ನೇಕಾರರ ಸಮಸ್ಯೆ ಇತ್ಯರ್ಥಗೊಳಿಸಬೇಕೆಂದು 3-4 ಬಾರಿ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ವಿದೇಶ ಪ್ರವಾಸದಲ್ಲಿರುವ ಕಾರಣ ಸಿಎಂ ಆಗಮನ ನಂತರ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಕಾರ್ಯದರ್ಶಿ ಚನಬಸಪ್ಪ ತಿಳಿಸಿದ್ದಾರೆಂದು ತೇರದಾಳ ಶಾಸಕ ಸಿದ್ದು ಸವದಿ ಪತ್ರಿಕೆಗೆ ತಿಳಿಸಿದರು.

Vijaya Karnataka 4 Jul 2019, 5:00 am
ರಬಕವಿ/ಬನಹಟ್ಟಿ: 2017ರಲ್ಲಿ ನೇಕಾರರ 50 ಸಾವಿರ ರೂ.ಗಳ ಸಾಲಮನ್ನಾಗೆ ಸಂಬಂಧ ಜವಳಿ, ಹಣಕಾಸು ಹಾಗೂ ಕೈಗಾರಿಕಾ ನಿಗಮಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ನಿರ್ದೇಶನದೊಂದಿಗೆ ಸಭೆ ನಡೆಸಿ ನೇಕಾರರ ಸಮಸ್ಯೆ ಇತ್ಯರ್ಥಗೊಳಿಸಬೇಕೆಂದು 3-4 ಬಾರಿ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ವಿದೇಶ ಪ್ರವಾಸದಲ್ಲಿರುವ ಕಾರಣ ಸಿಎಂ ಆಗಮನ ನಂತರ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಕಾರ್ಯದರ್ಶಿ ಚನಬಸಪ್ಪ ತಿಳಿಸಿದ್ದಾರೆಂದು ತೇರದಾಳ ಶಾಸಕ ಸಿದ್ದು ಸವದಿ ಪತ್ರಿಕೆಗೆ ತಿಳಿಸಿದರು.
Vijaya Karnataka Web make time for a weaker loan
ನೇಕಾರ ಸಾಲಮನ್ನಾ ಚರ್ಚೆಗೆ ಸಮಯ ನಿಗದಿಯಾಗಲಿ


ಮುಖ್ಯವಾಗಿ ಹಣಕಾಸು ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಇದಾಗಿದ್ದು, ನೇಕಾರರಿಗೆ ಸಾಲಮನ್ನಾಗೆ ಸರಳೀಕರಣ ಹಾಗೂ ವಿನಾಕಾರಣ ಹೇರಿರುವ ಸಮಸ್ಯೆಗಳನ್ನು ಹಣಕಾಸು ಪ್ರಧಾನ ಕಾರ್ಯದರ್ಶಿ ಡಿವಿಎನ್‌ ಪ್ರಸಾದ ಅವರೊಂದಿಗೆ ಚರ್ಚಿಸಬೇಕಾಗುತ್ತದೆ. ಈ ಮೊದಲು ನೇಕಾರರ ಸಾಲಮನ್ನಾ ಆಗಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿದ್ದಾಗ ಕ್ಯಾಶ್‌ ಕ್ರೆಡಿಟ್‌ ಸೇರಿದಂತೆ ಎಲ್ಲ ಸಾಲವೂ ಮನ್ನಾ ಆಗಿತ್ತು. ಈಗ ವಿಚಾರಣೆಯಲ್ಲಿಟ್ಟಿರುವುದು ಸಮಂಜಸವಲ್ಲ. ಅಲ್ಲದೆ ಜೂನ್‌ 30, 2017ರೊಳಗಾಗಿ ಬಾಕಿದಾರರಿಗೆ ಮಾತ್ರ ಸಾಲ ಮನ್ನಾ ಎಂಬುದು ಅವೈಜ್ಞಾನಿಕವಾಗಿದೆ. ಒಟ್ಟಾರೆ ಈ ಸಾಲಮನ್ನಾ ಯೋಜನೆ ಬಡನೇಕಾರ ಕುಟುಂಬಗಳಿಗೆ ತಲುಪುವಲ್ಲಿ ಸಂಪೂರ್ಣ ವಿಫಲಗೊಳ್ಳುತ್ತಿದೆ. ಕಾಟಾಚಾರಕ್ಕೆ ಯೋಜನೆಗಳನ್ನು ಕೇವಲ ಕಾಗದದಲ್ಲಿ ಮಾತ್ರ ಜಾರಿಗೊಳಿಸುವ ಮೂಲಕ ಯೋಜನೆಗೆ ಅರ್ಹ ವ್ಯಕ್ತಿಗಳಿಗೆ ತಲುಪುವಲ್ಲಿ ಸಾಧ್ಯವಾಗುತ್ತಿಲ್ಲವೆಂದು ಸವದಿ ಸರಕಾರದ ವಿರುದ್ಧ ಕಿಡಿಕಾರಿದರು.

ಕೈಮಗ್ಗ ನೇಕಾರರ ನಿರ್ಲಕ್ಷ ್ಯ:

ರಾಜ್ಯದಲ್ಲಿ ಅತ್ಯಂತ ಕಡಿಮೆ ಹಾಗೂ ಕಟ್ಟಕಡೆಯ ನೇಕಾರ ವರ್ಗವಾದ ಕೈಮಗ್ಗ ನೇಕಾರರ ಅಭಿವೃದ್ಧಿಗೆ ಕೆಎಚ್‌ಡಿಸಿ ನಿಗಮ ಸ್ಥಾಪಿಸಿ 4 ದಶಕಗಳೇ ಕಳೆದಿವೆ. ಇದರ ಪುನಶ್ಚೇತನಕ್ಕೆ ಸರಕಾರ ಯಾವುದೇ ಕ್ರಮ ಜರುಗಿಸದ ಕಾರಣ, ಸಮರ್ಪಕವಾದ ಕಚ್ಚಾ ನೂಲು ಪೂರೈಕೆ, ಪ್ರೋತ್ಸಾಹ ಧನ ಸೇರಿದಂತೆ ಯಾವುದೇ ಸೌಲಭ್ಯ ದೊರಕುವಲ್ಲಿ ವಿಫಲಗೊಂಡಿವೆ. ಇವೆಲ್ಲದರ ಕುರಿತು ಮಹತ್ವದ ಚರ್ಚೆಗೆ ಸಿಎಂ ನೇತೃತ್ವದಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಆಡಳಿತ ಹಾಗೂ ವಿಪಕ್ಷ ಗಳ ಜನಪ್ರತಿನಿಧಿಗಳ ಮಹತ್ವದ ಸಭೆಯನ್ನು ಮುಂದಿನ ವಾರ ನಡೆಯಲಿದೆ ಎಂದು ಸವದಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ