ಆ್ಯಪ್ನಗರ

ಕೇಂದ್ರ ಸಚಿವ ಸ್ಥಾನದ ಘನತೆ ಗಾಳಿಗೆ ತೂರಿದ ಅನಂತ್‌ಕುಮಾರ್‌ ಹೆಗಡೆ: ಸಚಿವರ ಟೀಕೆ

ಕೇಂದ್ರ ಸಚಿವರ ವಿರುದ್ಧ ಕಿಡಿಕಾರಿದ ತೋಟಗಾರಿಕೆ ಸಚಿವ ಮಲ್ಲಿಕಾರ್ಜುನ

Vijaya Karnataka Web 24 Dec 2017, 7:48 pm
ಬಾಗಲಕೋಟೆ: ಕೇಂದ್ರ ಸಚಿವ ಅನಂತ್‌ಕುಮಾರ್‌ ಹೆಗಡೆ ಅವರ ದುರ್ವರ್ತನೆ ಹಾಗೂ ಅವರ ವಿವಾದಾತ್ಮಕ ಹೇಳಿಕೆಗಳು ಆಕ್ಷೇಪಾರ್ಹ. ಅವರು ತಮ್ಮ ಹುದ್ದೆಯ ಘನತೆಯ ಗೌರವಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜು ತಿಳಿಸಿದ್ದಾರೆ.
Vijaya Karnataka Web mallikarjuna attacks ananth kumar hegde
ಕೇಂದ್ರ ಸಚಿವ ಸ್ಥಾನದ ಘನತೆ ಗಾಳಿಗೆ ತೂರಿದ ಅನಂತ್‌ಕುಮಾರ್‌ ಹೆಗಡೆ: ಸಚಿವರ ಟೀಕೆ


ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿರುವ ಅನಂತ್ ಕುಮಾರ್‌ ಹೆಗಡೆ ಅವರ ಬುದ್ಧಿ ಎಂತಹುದು ಎಂಬುದು ಗೊತ್ತಾಗುತ್ತದೆ ಎಂದು ಬಾಗಲಕೋಟೆಯಲ್ಲಿ ಮಲ್ಲಿಕಾರ್ಜುನ ತಿಳಿಸಿದರು.

ಎಲ್ಲ ಜಾತಿ ಪಂಗಡವನ್ನು ಒಟ್ಟಾಗಿ ಕರೆದೊಯ್ಯುವ ರಾಷ್ಟ್ರ ನಮ್ಮದು. ಗಾಂಧಿ, ನೆಹರು, ಬೋಸ್‌, ಅಂಬೇಡ್ಕರ್‌ ಭದ್ರವಾಗಿ ಹಾಕಿಕೊಟ್ಟ ಸಂವಿಧಾನದ ಬುನಾದಿಯ ಮೇರೆಗೆ ನಾವು ಮುನ್ನಡೆಯುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.

ವೀರಶೈವ, ಲಿಂಗಾಯತ ಒಂದೇ ಅಂಥ ಕೆಲವರು, ಅವು ಬೇರೆ ಬೇರೆ ಅಂಥ ಕೆಲವರು ಹೇಳುತ್ತಿದ್ದಾರೆ. ಆದರೆ ವೀರಶೈವ, ಲಿಂಗಾಯತ ಎಲ್ಲರೂ ಕೇಳುತ್ತಿರುವುದು ಅಲ್ಪಸಂಖ್ಯಾತ ಮಾನ್ಯತೆ ಬೇಕು ಎಂಬುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸರ್ಕಾರ ಧರ್ಮ ಒಡೆಯುತ್ತಿಲ್ಲ... ಎಲ್ಲವನ್ನು ಸೇರಿಸಿ ಕೂಲಂಕಶವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಲ್ಲಿಕಾರ್ಜುನ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ