ಬಾಗಲಕೋಟೆ: ಸಹೋದರಿಗೆ ಪದೇ ಪದೇ ಫೋನ್ ಮಾಡುತ್ತ ಕಿರುಕುಳ ನೀಡುತ್ತಿದ್ದಾನೆ ಎಂಬ ಕಾರಣಕ್ಕೆ 22 ವರ್ಷದ ಯುವಕನನ್ನು ಬಡಿಗೆ, ಕೋಲಿನಿಂದ ಹೊಡೆದು ಸಾಯಿಸಿದ ಘಟನೆ ಜಿಲ್ಲೆಯ ಸುನಗಾ ಕ್ರಾಸ್ ಬಳಿಯ ಕೆನಾಲ್ ನಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ನಬಿಸಾಬ್ ತಹಸೀಲ್ದಾರ ಕೊಲೆಯಾದ ಯುವಕ.
ತಾಯಿ ಮದುವೆ ಮುರಿದಳೆಂಬ ಶಂಕೆ; ಪ್ರತೀಕಾರಕ್ಕೆ ಬಾಲಕ ಬಲಿ
ಸುನಗಾ ಗ್ರಾಮದ ನಿವಾಸಿಯಾಗಿದ್ದ ನಬಿಸಾಬ್ ವಿಠ್ಠಲ ವಡವಾಣಿ ಎಂಬಾತನ ಸಹೋದರಿಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ.
ಇದರಿಂದ ಸಿಟ್ಟಿಗೆದ್ದ ವಿಠ್ಠಲ, ಮಂಜುನಾಥ ನರಿ ಎಂಬಾತನ ಜತೆ ಸೇರಿಕೊಂಡು ನಬಿಸಾಬ್ನನ್ನು ಸುನಗಾ ಕ್ರಾಸ್ ಬಳಿ ಬೈಕ್ ಮೇಲೆ ಕರೆದೊಯ್ದು ಬಡಿಗೆ, ಕೋಲಿನಿಂದ ಮನಬಂದಂತೆ ಹೊಡೆದಿದ್ದಾನೆ.
ಬೆನ್ನಿಗೆ,ಮೈಕಾಲಿಗೆ ,ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ ಬಳಿಕ, ಆತನ ಮನೆ ಬಳಿ ತಂದು ಬಿಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ನಬಿಸಾಬ್, ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಸಾವನ್ನಪ್ಪಿದ್ದಾನೆ.
ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಾಗಲಕೋಟೆ ಎಸ್.ಪಿ. ಲೋಕೇಶ ಜಗಲಾಸರ್ ಮಾಹಿತಿ ನೀಡಿದ್ದಾರೆ.
ನಬಿಸಾಬ್ ತಹಸೀಲ್ದಾರ ಕೊಲೆಯಾದ ಯುವಕ.
ತಾಯಿ ಮದುವೆ ಮುರಿದಳೆಂಬ ಶಂಕೆ; ಪ್ರತೀಕಾರಕ್ಕೆ ಬಾಲಕ ಬಲಿ
ಸುನಗಾ ಗ್ರಾಮದ ನಿವಾಸಿಯಾಗಿದ್ದ ನಬಿಸಾಬ್ ವಿಠ್ಠಲ ವಡವಾಣಿ ಎಂಬಾತನ ಸಹೋದರಿಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ.
ಇದರಿಂದ ಸಿಟ್ಟಿಗೆದ್ದ ವಿಠ್ಠಲ, ಮಂಜುನಾಥ ನರಿ ಎಂಬಾತನ ಜತೆ ಸೇರಿಕೊಂಡು ನಬಿಸಾಬ್ನನ್ನು ಸುನಗಾ ಕ್ರಾಸ್ ಬಳಿ ಬೈಕ್ ಮೇಲೆ ಕರೆದೊಯ್ದು ಬಡಿಗೆ, ಕೋಲಿನಿಂದ ಮನಬಂದಂತೆ ಹೊಡೆದಿದ್ದಾನೆ.
ಬೆನ್ನಿಗೆ,ಮೈಕಾಲಿಗೆ ,ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ ಬಳಿಕ, ಆತನ ಮನೆ ಬಳಿ ತಂದು ಬಿಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ನಬಿಸಾಬ್, ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಸಾವನ್ನಪ್ಪಿದ್ದಾನೆ.
ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಾಗಲಕೋಟೆ ಎಸ್.ಪಿ. ಲೋಕೇಶ ಜಗಲಾಸರ್ ಮಾಹಿತಿ ನೀಡಿದ್ದಾರೆ.