ಆ್ಯಪ್ನಗರ

'ಯಮಗುಂಡಿಗಳಿವೆ ಎಚ್ಚರ' ಬೋರ್ಡ್‌ ಹಿಡಿದು ಯುವಕನ ಪ್ರತಿಭಟನೆ

ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ನಗರದ ಯುವಕ ವಿನೂತನ ಪ್ರತಿಭಟನೆ ಕೈಗೊಂಡಿದ್ದಾರೆ. ಬಾಗಲಕೋಟದ ನವೀನ್ ಹಂಡರ್ ಗಲ್ಲ ಎಂಬ ಯುವಕ ಕೈಯಲ್ಲಿ ಭಿತ್ತಿಪತ್ರ ಹಿಡಿದುಕೊಂಡು ನಿಂತು ಆಡಳಿತಕ್ಕೆ ‌ಬಿಸಿ ಮುಟ್ಟಿಸಿದ್ದಾರೆ.

Vijaya Karnataka Web 27 Oct 2017, 2:03 pm
ಬಾಗಲಕೋಟ: ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ನಗರದ ಯುವಕ ವಿನೂತನ ಪ್ರತಿಭಟನೆ ಕೈಗೊಂಡಿದ್ದಾರೆ. ಬಾಗಲಕೋಟದ ನವೀನ್ ಹಂಡರ್ ಗಲ್ಲ ಎಂಬ ಯುವಕ ಕೈಯಲ್ಲಿ ಭಿತ್ತಿಪತ್ರ ಹಿಡಿದುಕೊಂಡು ನಿಂತು ಆಡಳಿತಕ್ಕೆ ‌ಬಿಸಿ ಮುಟ್ಟಿಸಿದ್ದಾರೆ.
Vijaya Karnataka Web man protest against potholes in road
'ಯಮಗುಂಡಿಗಳಿವೆ ಎಚ್ಚರ' ಬೋರ್ಡ್‌ ಹಿಡಿದು ಯುವಕನ ಪ್ರತಿಭಟನೆ


'ಇಲ್ಲಿ ಯಮಗುಂಡಿಗಳಿವೆ ಎಚ್ಚರ' ಎಂಬ ನಾಮಫಲಕ ಹಿಡಿದಿದ್ದ ನವೀನ್ ವಾಹನ ಸವಾರರ ಕುತೂಹಲಕ್ಕೆ ಕಾರಣರಾಗಿದ್ದಾರೆ. ನವನಗರದ ರಾಧಾಕೃಷ್ಣ ಮಂದಿರದ ಎದುರಿನ ರಸ್ತೆಯ ಗುಂಡಿಗಳ ಎದುರು ನಿಂತಿದ್ದ ಇವರು ಪ್ರತಿಭಟನೆ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ಅಧಿಕಾರಿಗಳು ಬಂದು ಭರವಸೆ ನೀಡುವವರೆಗೆ ಇಲ್ಲಿ ನಿಂತಿರುತ್ತೇನೆ ಎನ್ನುತ್ತಾರೆ ನವೀನ್. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಅವರು ' ಗುಂಡಿಗಳಲ್ಲಿ ಬಿದ್ದು ವಾಹನ ಸವಾರರು ಕೈ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ವಾಹನ ಸವಾರರು ಜೀವ ಕಳೆದುಕೊಳ್ಳುವ ಮೊದಲು ಆಡಳಿತ ಗುಂಡಿ ಮುಚ್ಚಬೇಕು' ಎಂದು ಆಗ್ರಹಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ