ಆ್ಯಪ್ನಗರ

ಕೇಂದ್ರ ಸರಕಾರ ವಿಶೇಷ ಸುಗ್ರೀವಾಜ್ಞೆ ಜಾರಿಮಾಡಲಿ

ಕೇಂದ್ರ ಸರಕಾರ ವಿಶೇಷ ಸುಗ್ರೀವಾಜ್ಞೆ ಜಾರಿಮಾಡಲಿವಿಕ ಸುದ್ದಿಲೋಕ ಇಳಕಲ್‌ ಕೊರೊನಾದಿಂದ ಬಂದ ಆರ್ಥಿಕ ವಿಪತ್ತನ್ನು ಎದುರಿಸುವ ಶಕ್ತಿ, ಸಂಕಷ್ಟವನ್ನು ಪರಿಹರಿಸಿಕೊಳ್ಳುವ ...

Vijaya Karnataka 16 Apr 2020, 5:00 am
ಇಳಕಲ್‌: ಕೊರೊನಾದಿಂದ ಬಂದ ಆರ್ಥಿಕ ವಿಪತ್ತನ್ನು ಎದುರಿಸುವ ಶಕ್ತಿ, ಸಂಕಷ್ಟವನ್ನು ಪರಿಹರಿಸಿಕೊಳ್ಳುವ ಗಟ್ಟಿತನವನ್ನು ಕೇಂದ್ರ ಸರಕಾರ ಇಂದು ಪ್ರದರ್ಶನ ಮಾಡಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್‌ ತಿಳಿಸಿದ್ದಾರೆ.
Vijaya Karnataka Web may the central government issue a special ordinance
ಕೇಂದ್ರ ಸರಕಾರ ವಿಶೇಷ ಸುಗ್ರೀವಾಜ್ಞೆ ಜಾರಿಮಾಡಲಿ


ದೇಶದ ಅರ್ಥ ವ್ಯವಸ್ಥೆಗೆ ಬಹುದೊಡ್ಡ ಗಂಡಾತರವನ್ನೇ ತಂದಿದೆ, ಜತೆಗೆ ಸಾಮಾಜಿಕ ಸ್ವಾಸ್ಥತ್ರ್ಯವನ್ನೂ ಹದಗೆಡಿಸಿದೆ ನಿಜ. ಆದರೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮುಂದೇನು ಮಾಡಬೇಕೆಂಬ ಕುರಿತು ನಮ್ಮ ಆರ್ಥಿಕ ಪರಿಸ್ಥಿತಿ ಏನೆಂದು ಧೃತಿಗೆಟ್ಟು ಕುಳಿತಿವೆ.ಇದಕ್ಕೆ ಪರಿಹಾರ ಎಲ್ಲೂಹುಡುಕಬೇಕಾದ ಅಗತ್ಯವಿಲ್ಲ, ಅದಕ್ಕೆ ಅಗತ್ಯವಾದ ಸಂಪನ್ಮೂಲ ನಮ್ಮ ದೇಶದಲ್ಲಿಯೇ ಇದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಾದಂತಹ ಚಾಕಚಕ್ಯತೆ ಇಲ್ಲವೇ ಗಟ್ಟಿತನವನ್ನು ಕೇಂದ್ರ ಸರಕಾರ ಪ್ರದರ್ಶಿಸಿ ತೋರಿಸಬೇಕಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿಸಾವಿರಾರು ಕೋಟಿಗಳ ಹಣ ಹೂಡಿಕೆ ಮಾಡಿ ಲಾಭಗಳಿಸುವ ಸಾಕಷ್ಟು ಕಂಪನಿಗಳಿವೆ. 2013ರಲ್ಲಿಕಂಪನಿಗಳ ಸಾಮಾಜಿಕ ಹೊಣೆಗಾರಿಕೆನಿಧಿ ಎಂಬ ಶಾಸನ ಜಾರಿ ಬಂತು. ಈ ಲಾಭಾಂಶದಲ್ಲಿಕನಿಷ್ಠ ಶೇ.2 ರಷ್ಟು ಮೊತ್ತವನ್ನು ಈ ನಿಧಿಗೆ ಕೊಡಬೇಕೆಂಬ ನಿಯಮ. 2014-15ರ ನಂತರ ಯಾವ್ಯಾವ ಕಂಪನಿಗಳು ಎಷ್ಟೆಷ್ಟು ಲಾಭ ಗಳಿಸಿವೆ? ಸಿ.ಎಸ್‌.ಆರ್‌.ಬಿ.ಗೆ ಎಷ್ಟೆಷ್ಟು ದೇಣಿಗೆ ಭರಿಸಿವೆ ಎಂಬುದನ್ನು ಆರ್ಥಿಕ ವ್ಯವಹಾರ ಇಲಾಖೆಗೆ ವರದಿ ಸಲ್ಲಿಸಿರುತ್ತವೆ. ಆ ವರದಿಯನ್ನು ಆಧರಿಸಿ 2018-19 ಹಾಗೂ 2019-20 ಸಾಲನ್ನು ಪರಿಗಣಿಸಿದರೆ ಸುಮಾರು 60 ಸಾವಿರ ಕೋಟಿ ಸಾಮಾಜಿಕ ಹೊಣೆಗಾರಿಕೆ ನಿಧಿ, ಇತರ ವಿಮಾ ಕಂಪನಿಗಳಲ್ಲಿವಾರಸುದಾರರಿಲ್ಲದ ಸುಮಾರು 15 ಸಾವಿರ ಕೋಟಿ ಮೊತ್ತ ಉಳಿದಿದೆ. ಹೀಗೆ ಒಟ್ಟು 75 ಸಾವಿರ ಕೋಟಿ ರೂ.ಗಳನ್ನು ಪರಿಗಣನೆಗೆ ತೆಗೆದುಕೊಂಡು, ಯಾರಿಗೂ ತೊಂದರೆ ಇಲ್ಲದಂತೆ ಅವರವರಿಗೇ ಕೊರೊನಾ ಸಂಬಂಧಿಸಿದ ಚಟುವಟಿಕೆಗೆ ಬಳಸಿಕೊಳ್ಳಲು ತಿಳಿಸದೇ ಆ ನಿಧಿಯನ್ನು ನೇರವಾಗಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ (ಬಳಸಿಕೊಳ್ಳದ ಸಾವಿರಾರು ಕೋಟಿ ಹಣ) ನೇರವಾಗಿ ವರ್ಗಾವಣೆ ಮಾಡಲು ವಿಶೇಷ ಕಾನೂನನ್ನಾದರೂ ರೂಪಿಸಬೇಕೆಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ