ಆ್ಯಪ್ನಗರ

ಸತ್ಯಾಗ್ರಹ ಸ್ಥಳಕ್ಕೆ ಮೇಘಣ್ಣವರ ಭೇಟಿ

ಲೋಕಾಪುರ : ಬಾಗಲಕೋಟ-ಕುಡಚಿ ರೈಲ್ವೆ ಮಾರ್ಗಕ್ಕಾಗಿ ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ 6 ನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಭೇಟಿ ನೀಡಿದರು.

Vijaya Karnataka 16 Dec 2018, 5:00 am
ಲೋಕಾಪುರ : ಬಾಗಲಕೋಟ-ಕುಡಚಿ ರೈಲ್ವೆ ಮಾರ್ಗಕ್ಕಾಗಿ ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ 6 ನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಭೇಟಿ ನೀಡಿದರು.
Vijaya Karnataka Web meghannas visit to satyagraha
ಸತ್ಯಾಗ್ರಹ ಸ್ಥಳಕ್ಕೆ ಮೇಘಣ್ಣವರ ಭೇಟಿ


ನಂತರ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿ ಶೀಘ್ರವಾಗಿ ಖಜ್ಜಿಡೋಣಿಯಿಂದ ಲೋಕಾಪುರವರೆಗೆ 100 ಎಕರೆ ಭೂ ಸ್ವಾಧೀನಕ್ಕೆ ಜಿಲ್ಲಾಧಿಕಾರಿ ಹಾಗೂ ಜಮಖಂಡಿ ಉಪವಿಭಾಗಾಧಿಕಾರಿಯವರಿಗೆ ಶೀಘ್ರದಲ್ಲಿ ರೈತರಿಂದ ನೇರವಾಗಿ ಖರೀದಿ ಮಾಡಲು ಕಟ್ಟು ನಿಟ್ಟಿನ ನಿರ್ದೇಶನ ನೀಡಲಾಗುವುದು ಎಂದರು.

ಖಜ್ಜಿಡೋಣಿಯಿಂದ ಲೋಕಾಪುರವರೆಗೆ ಜಮೀನಿನ ಮಾಲೀಕರ ಜೊತೆಗೆ ಸಭೆ ನಡೆಸಿ, ಭೂ ಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಿ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗುವುದು ಎಂದರು. ಭೂ ಸ್ವಾಧೀನ ಪಡಿಸಿಕೊಳ್ಳಲು ಅನುದಾನ ಕೊರತೆ ಇಲ್ಲ, ಹೆಚ್ಚಿನ ಅನುದಾನಕ್ಕೋಸ್ಕರ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ಧೀನ ಖಾಜಿ ಮಾತನಾಡಿ ರೈಲ್ವೆ ಮಾರ್ಗದ ಅವಶ್ಯಕತೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಸತ್ಯಾಗ್ರಹ ಸ್ಥಳಕ್ಕೆ ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ ಭೇಟಿ ನೀಡಿ ಹೋರಾಟಕ್ಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಮಾತನಾಡಿ ಸೋಮವಾರ ಸದನದಲ್ಲಿ ಧರಣಿ ಸತ್ಯಾಗ್ರಹದ ಹೋರಾಟದ ಕುರಿತು ಪ್ರಸ್ತಾಪಿಸಿ ಸರಕಾರ ಗಮನಕ್ಕೆ ತಂದು ಹೆಚ್ಚಿನ ಅನುದಾನ ತರಲು ಶ್ರಮಿಸುತ್ತೇನೆ ಎಂದರು.

ಸತ್ಯಗ್ರಹಕ್ಕೆ ಮುಧೋಳ ತಾಲೂಕು ವಕೀಲರ ಸಂಘ, ಜಮಖಂಡಿ ತಾಲೂಕು ಕರ್ನಾಟಕ ಪಿಂಜಾರ ನಧಾಪ ಸಂಘ ಸೇರಿದಂತೆ ದಿನದಿಂದ ದಿನಕ್ಕೆ ಹೆಚ್ಚಿನ ಸಂಘಟನೆಗಳು ಬೆಂಬಲವ್ಯಕ್ತ ಪಡಿಸುತ್ತಿದ್ದು ಹೋರಾಟದ ಕಾವು ಹೆಚ್ಚಾಗುತ್ತಿದೆ.

ಮುಧೋಳ ತಾಲೂಕಾ ವಕೀಲ ಸಂಘದ ಅಧ್ಯಕ್ಷ ಎಸ್‌.ಬಿ.ಮಾಸರಡ್ಡಿ, ನ್ಯಾಯವಾದಿ ಆನಂದ ಹಲಸಂಗಿಮಠ, ಎಚ್‌.ಕೆ.ಮುಳ್ಳೂರ, ಅರುಣ ಮುಧೋಳ, ದಶರಥ ದೊಡಮನಿ, ಅಬುಬಕರ ನಧಾಪ, ಗುಲಾಬಸಾಬ ಅತ್ತಾರ, ನಿಲೇಶ ಬನ್ನೂರ, ಬಿ.ಎಲ್‌.ಬಬಲಾದಿ, ಕೆ.ಕೆ.ಭಾಗವಾನ, ದುರ್ಗಪ್ಪ ಮಾದರ, ಜಿ.ಬಿ.ಜೋಶಿ, ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ