ಆ್ಯಪ್ನಗರ

ತಿಮ್ಮಾಪೂರಗೆ ಸಚಿವ ಸ್ಥಾನ: ರನ್ನ ನಾಡಲ್ಲಿ ಸಂಭ್ರಮ

ಮುಧೋಳ: ಬೆಂಗಳೂರದ ರಾಜಭವನದಲ್ಲಿ ರನ್ನ ನಾಡಿನ ಹೆಮ್ಮೆಯ ಆರ್‌.ಬಿ.ತಿಮ್ಮಾಪೂರ ಪ್ರಮಾಣ ಸ್ವೀಕರಿಸುತ್ತಿದ್ದಂತೆ ಎಲ್ಲೆಡೆ ಅಭಿಮಾನಿಗಳು, ಕಾರ್ಯಕರ್ತರು ಸಂಭ್ರಮ ಆಚರಿಸಿದರು.

Vijaya Karnataka 23 Dec 2018, 5:00 am
ಮುಧೋಳ: ಬೆಂಗಳೂರದ ರಾಜಭವನದಲ್ಲಿ ರನ್ನ ನಾಡಿನ ಹೆಮ್ಮೆಯ ಆರ್‌.ಬಿ.ತಿಮ್ಮಾಪೂರ ಪ್ರಮಾಣ ಸ್ವೀಕರಿಸುತ್ತಿದ್ದಂತೆ ಎಲ್ಲೆಡೆ ಅಭಿಮಾನಿಗಳು, ಕಾರ್ಯಕರ್ತರು ಸಂಭ್ರಮ ಆಚರಿಸಿದರು.
Vijaya Karnataka Web minister for thimmapura mdl sambrma
ತಿಮ್ಮಾಪೂರಗೆ ಸಚಿವ ಸ್ಥಾನ: ರನ್ನ ನಾಡಲ್ಲಿ ಸಂಭ್ರಮ


ಕಾಂಗ್ರೆಸ್‌ ಪಕ್ಷ ದ ಯುವ ಕಾರ್ಯಕರ್ತರು ಪಟಾಕಿ ಹಾಕಿ, ಗುಲಾಲ ಎರಚಿ ಸಂಭ್ರಮಪಟ್ಟರು.

ನಗರಸಭೆ ಸದಸ್ಯ ಸಂತೋಷ ಪಾಲೋಜಿ, ರಮೇಶ ಬಿಳ್ಳೂರ, ಪ್ರಶಾಂತ ಕಾಳೆ, ಸಿದ್ದು ದೇವಗೋಳ, ಮೈಹಿಬೂಬ ಬಿಸ್ತಿ, ಸಿದ್ದರಾಮ ಕುರಿ, ಶೋಭಾ ಜಿಗಜಿಣಗಿ, ಸುರೇಶ, ರಾಜು ಬೇಪಾರಿ, ಲಾಲಸಾಬ ನದಾಫ್‌, ನೂರಲಿ ಜಮಾದಾರ ನೂರಾರು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು. ರನ್ನ ಸರ್ಕಲ್‌, ಶಿವಾಜಿ ಸರ್ಕಲ್‌, ಗಾಂಧೀ ಸರ್ಕಲ್‌, ಬಸವೇಶ್ವರ ಸರ್ಕಲ್‌ ಹಾಗೂ ಉತ್ತರ ಗೇಟ್‌ ಬಳಿ ಯುವಪಡೆ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.

ಕಾಂಗ್ರೆಸ್‌ ಪಕ್ಷ ದ ಹೈಕಮಾಂಡ್‌ ಸಾಮಾಜಿಕ ನ್ಯಾಯ ನೀಡಿದೆ. ರಾಜ್ಯ ಹಾಗೂ ರಾಷ್ಟ್ರೀಯ ನಾಯಕರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನೀಡಿದ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.
ಆರ್‌.ಬಿ.ತಿಮ್ಮಾಪೂರ, ಸಚಿವರು, ಬೆಂಗಳೂರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ