ಆ್ಯಪ್ನಗರ

ಮಹಾರಾಷ್ಟ್ರ ನನಗೆ ಅನ್ನ ಕೊಟ್ಟಿದೆ, ಅದಕ್ಕಾಗಿ ಜೈಕಾರ: ಸಚಿವ ನಾರಾಯಣಗೌಡ

ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರಕ್ಕೆ ಜೈಕಾರ ಕೂಗಿದ್ದ ಸಚಿವ ಕೆ.ಸಿ.ನಾರಾಯಣಗೌಡ, ಬಾಗಲಕೋಟೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ವ್ಯಾಪಾರ ಎಲ್ಲಾ ಮುಂಬೈನಲ್ಲಿದೆ. ನನಗೆ ಮಹಾರಾಷ್ಟ್ರ ಅನ್ನ ಕೊಟ್ಟಿದೆ. ಎಲ್ಲಾ ರಾಜ್ಯಗಳನ್ನು ಹೊಗಳಿದ್ದೇನೆ. ಆದರೆ, ಕೇವಲ ಮಹಾರಾಷ್ಟ್ರದ ಹೇಳಿಕೆಯನ್ನು ತೋರಿಸುತ್ತಿದ್ದಾರೆ ಎಂದರು.

Vijaya Karnataka Web 28 Feb 2020, 12:29 pm
ಬಾಗಲಕೋಟೆ: ಮಹಾರಾಷ್ಟ್ರಕ್ಕೆ ಜೈಕಾರ ಕೂಗಿ ವಿವಾದ ಸೃಷ್ಟಿಸಿದ್ದ ಸಚಿವ ಕೆ.ಸಿ.ನಾರಾಯಣಗೌಡ ಬಾಗಲಕೋಟೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮಹಾರಾಷ್ಟ್ರ ನನಗೆ ಅನ್ನ ಕೊಟ್ಟಿದೆ, ನನ್ನ ವ್ಯಾಪಾರ ಎಲ್ಲ ಮುಂಬೈನಲ್ಲಿ ಇದೆ. ಅದಕ್ಕಾಗಿ ನಾನು ಜೈಕಾರ ಹಾಕಿದ್ದೇನೆ. ಅದೇ ಹೇಳಿಕೆಯನ್ನು ನನ್ನ ವಿರುದ್ಧ ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
Vijaya Karnataka Web NARAYANA GOWDA


ನಾನು ಬಡತನದಲ್ಲಿ ಹುಟ್ಟಿ ಜೀವನ ಕಟ್ಟಿಕೊಳ್ಳಲು ಮಹಾರಾಷ್ಟ್ರಕ್ಕೆ ಹೋದವನು. ಅದು ನನಗೆ ಅನ್ನ ಕೊಟ್ಟಿದೆ. ನಾನೊಬ್ಬನೇ ಅಲ್ಲ ಬಾಂಬೆಯಲ್ಲಿ ಜನ ಇದ್ದೇವೆ. ನನ್ನ ವ್ಯಾಪಾರ ಎಲ್ಲಾ ಮುಂಬೈನಲ್ಲಿಯೇ ಇದೆ. ಆ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಜೈ ಎಂದಿದ್ದೇನೆ ಎಂದು ಸ್ಪಷ್ಟನೆ ಕೊಟ್ಟರು.

ಬೆಳಗ್ಗೆ, ಸಾಯಂಕಾಲ ಕನ್ನಡದಲ್ಲೇ ಮಾತಾಡ್ತೀವಿ, ಕನ್ನಡವನ್ನೇ ಹೊಗಳ್ತೀವಿ. ನಾವು ಕನ್ನಡಿಗರೇ, ಆ ಕಾರ್ಯಕ್ರಮಕ್ಕೆ 17 ರಾಜ್ಯಗಳಿಂದ ಪ್ರತಿನಿಧಿಗಳು ಬಂದಿದ್ರು. ಸಾಂಸ್ಕೃತಿಕ ಕಾರ್ಯಕ್ರಮ ಆಗಿದ್ದರಿಂದ ಕಲ್ಕತ್ತಾ, ಕೇರಳ, ರಾಜಸ್ಥಾನ ಸೇರಿ ಎಲ್ಲ ಕಡೆಯಿಂದಲೂ ಜನ ಬಂದಿದ್ರು. ಎಲ್ಲರನ್ನೂ ಹೊಗಳಿ ಮಾತನಾಡಿದ್ದೇನೆ ಎಂದು ಸಚಿವರು ಹೇಳಿದರು.

ಈಗಿನ ಕಾಂಗ್ರೆಸ್‌ ತಿನ್ನುವ ಕಾಂಗ್ರೆಸ್‌: ರಮೇಶ್‌ ಕುಮಾರ್‌ ಭಾಷಣದ ವಿಡಿಯೋ ವೈರಲ್‌

ಆದರೆ, ಯಾರೋ ಕಿಡಿಗೇಡಿಗಳು ಮಹಾರಾಷ್ಟ್ರ ಹೊಗಳಿರುವ ವಿಡಿಯೋವನ್ನು ಮಾತ್ರ ರಾಜಕಾರಣಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾನು ಕರ್ನಾಟಕ, ನನ್ನ ರಕ್ತದಲ್ಲೇ ಕರ್ನಾಟಕ, ಕನ್ನಡ ಅನ್ನೋದು ಇದೆ. ಮಹಾರಾಷ್ಟ್ರದಲ್ಲಿ ನನ್ನ ವ್ಯಾಪಾರ ಇದೆ ಎಂದು ಹೇಳಿದರು.

ನಾವೇನು ಮಾಡಿದ್ರೂ ದೇಶದ್ರೋಹಿಗಳು; ಅವ್ರು ಗುಂಡಿಟ್ಟು ಹೊಡೀರಿ ಎಂದ್ರೂ ದೇಶಭಕ್ತರು

ಇದೇ ಸಂದರ್ಭದಲ್ಲಿ ತೋಟಗಾರಿಕೆ ವಿವಿಗೆ ಶಾಶ್ವತ ಕುಲಪತಿ ನೇಮಕ ಮಾಡದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ನಾರಾಯಣಗೌಡ, ನಾನು ಖಾತೆಯ ಚಾರ್ಜ್‌ ತೆಗೆದದುಕೊಂಡು ವಾರ ಆಗಿದೆಯಷ್ಟೇ, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಶೀಘ್ರದಲ್ಲಿಯೇ ಕುಲಪತಿ ನೇಮಕ ಮಾಡುತ್ತೇವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ