ಆ್ಯಪ್ನಗರ

ನಮ್ಮ ಯೋಧರು ಚೀನಾಗೆ ತಕ್ಕ ಉತ್ತರ ಕೊಡುತ್ತಾರೆ, ರಾಹುಲ್‌ ಗಾಂಧಿ ಟ್ವೀಟ್‌ಗೆ ಪೂಜಾರಿ ಟಾಂಗ್‌

ರಾಜ್ಯದಲ್ಲಿ ಜುಲೈ 1ರಿಂದ ದೇಗುಲ ಪ್ರವೇಶ ಆರಂಭಿಸುವ ವಿಚಾರವಿತ್ತು ಆದರೆ ಕೇಂದ್ರ ಸರಕಾರದ ಮಾರ್ಗಸೂಚಿ ಅನುಸಾರ ರಾಜ್ಯದಲ್ಲಿ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

Vijaya Karnataka Web 17 Jun 2020, 1:40 pm
ಬಾಗಲಕೋಟೆ: ಸೇನಾ ಪಡೆಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುವ ರೀತಿಯಲ್ಲಿ ಟ್ವೀಟ್‌ ಮಾಡುವುದು ಸರಿಯಲ್ಲ. ಕುತಂತ್ರಿ ಚೀನಾಗೆ ನಮ್ಮ ಯೋಧರು ತಕ್ಕ ಉತ್ತರ ನೀಡುತ್ತಾರೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
Vijaya Karnataka Web ಕೋಟಾ ಶ್ರೀನಿವಾಸ ಪೂಜಾರಿ
ಕೋಟಾ ಶ್ರೀನಿವಾಸ ಪೂಜಾರಿ


ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ದಳವಾಯಿಯಾದ ನಾನು ಬರೆದ ಈ ಪುಸ್ತಕ ಓದಿದ ಮೇಲೂ ನೆಹರೂ ಕುಟುಂಬದ ಬಗ್ಗೆ ಗೌರವವಿದ್ದರೆ ನಿಮ್ಮ ರಾಷ್ಟ್ರ ಭಕ್ತಿಗೆ ದಿಕ್ಕಾರ ಎಂದಿದ್ದಾನೆ ಸೈನಿಕ.. ಇದನ್ನು ನಾನು ಹೇಳಿಲ್ಲ ಯೋಧನೊಬ್ಬ ಹೇಳಿದ ಮಾತಿದು... ಅವತ್ತಿನ ಭಾರತವಲ್ಲ,ಇದು , ರಾಷ್ಟ್ರ ಭಕ್ತ ನರೇಂದ್ರ ಮೋದಿ ಭಾರತ ಎಂದು ರಾಹುಲ್ ಗಾಂಧಿಗೆ ಟಾಂಗ್ ನೀಡಿದರು.

ರಾಹುಲ್‌ ಗಾಂಧಿ ಟ್ವೀಟ್‌ ಬಗ್ಗೆ ಕೋಟಾ ಪೂಜಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಜುಲೈ 1ರಿಂದ ದೇಗುಲ ಪ್ರವೇಶ ಆರಂಭಿಸುವ ವಿಚಾರವಿತ್ತು ಆದರೆ ಕೇಂದ್ರ ಸರಕಾರದ ಮಾರ್ಗಸೂಚಿ ಅನುಸಾರ ರಾಜ್ಯದಲ್ಲಿ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದರು.

ಭಕ್ತರಿಗೆ ದೇಗುಲ ದರ್ಶನಕ್ಕೆ ಅವಕಾಶ ನೀಡಲಾಗಿದೆ... ದೇಗುಲದಲ್ಲಿ ಸಾಮಾಜಿಕ ಅಂತರ, ಸ್ವಚ್ಛತೆ ಕಾಪಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ