ಆ್ಯಪ್ನಗರ

ಲಿಂಗಾಯತ: ಸಚಿವ ಪಾಟೀಲ್‌ಗೆ ಸಚಿವ ಮಲ್ಲಿಕಾರ್ಜುನ ಟಾಂಗ್‌

ಒಂದು ಮನೆ ಅಂದಮೇಲೆ, ಮನೆ ಹಾಳು ಮಾಡುವವರು ,ಉದ್ದಾರ‌ ಮಾಡುವವರೂ ಇರುತ್ತಾರೆ. ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕು. ವೀರಶೈವ ಮಹಾಸಭಾ ಕೈಗೊಂಡ ನಿರ್ಣಯ ಸೂಕ್ತ ಎಂದು ಸಚಿವ ಮಲ್ಲಿಕಾರ್ಜುನ ಹೇಳಿದ್ದಾರೆ.

Vijaya Karnataka Web 24 Mar 2018, 3:28 pm
ಬಾಗಲಕೋಟ: ಪ್ರತ್ಯೇಕ ಲಿಂಗಾಯತ ಧರ್ಮ ಅಧಿಸೂಚನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ಸಚಿವ ಎಂ.ಬಿ ಪಾಟೀಲ್‌ಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
Vijaya Karnataka Web minister mallikarjun hits out minister patil
ಲಿಂಗಾಯತ: ಸಚಿವ ಪಾಟೀಲ್‌ಗೆ ಸಚಿವ ಮಲ್ಲಿಕಾರ್ಜುನ ಟಾಂಗ್‌


ಒಂದು ಮನೆ ಅಂದಮೇಲೆ, ಮನೆ ಹಾಳು ಮಾಡುವವರು ,ಉದ್ದಾರ‌ ಮಾಡುವವರೂ ಇರುತ್ತಾರೆ. ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕು. ವೀರಶೈವ ಮಹಾಸಭಾ ಕೈಗೊಂಡ ನಿರ್ಣಯ ಸೂಕ್ತ. ಹಿರಿಯರು ಅನಿಸಿಕೊಂಡವರು, ಮನೆತನ ಮುನ್ನೆಡೆಸಿಕೊಂಡು ಹೋಗಬೇಕು ಎಂದರು.

ಸಚಿವ ಎಂ.ಬಿ ಪಾಟೀಲ್ ಅವರ 'ವೀರಶೈವ ಹಾಗೂ ಲಿಂಗಾಯತರಿಗೆ ಸಂಬಂಧವಿಲ್ಲ,' ಎಂಬ ಹೇಳಿಕೆಗೆ ತಿರುಗೇಟು ನೀಡಿದ ಮಲ್ಲಿಕಾರ್ಜುನ್‌, ಅದು ಅವರವರ ಇಚ್ಛೆ. ಯಾರು ಮನೆ ಹಾಳು ಮಾಡುತ್ತಾರೆ ಅನ್ನುವುದನ್ನು ಕಾದು ನೋಡೋಣ ಎಂದು ಹೇಳಿದರು.

ವೀರಶೈವ ಮಹಾಸಭಾದವರು ಹಾಗೂ ಈಶ್ವರ ಖಂಡ್ರೆ , ಎಲ್ಲ ಮಠಾಧೀಶರು ಸೇರಿ ಸೂಕ್ತ ನಿರ್ಧಾರ ತಗೆದುಕೊಳ್ಳುತ್ತಾರೆ. ಪಕ್ಷ ಬೇರೆ, ಸಮಾಜ ರಾಜಕಾರಣವೇ ಬೇರೆ‌. ಸಮಾಜದಲ್ಲಿ ರಾಜಕಾರಣ ತರುವುದು ಬೇಡ. ಈ ಹಿಂದೆ ವೀರಶೈವ ಲಿಂಗಾಯತ ಪ್ರತೇಕ ಧರ್ಮದ ವಿಚಾರವಾಗಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದ ಅರ್ಜಿ ಇನ್ನೂ ರಿಜೆಕ್ಟ್ ಆಗಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ