ರವಿ ಕೆಲೂರ ಬಾಗಲಕೋಟ
ಒಬ್ಬರಿಗೆ ಟೆನ್ಶನ್ ಮತ್ತೊಬ್ಬರಿಗೆ ರಿಲ್ಯಾಕ್ಸ್, ಇದು ಜಮಖಂಡಿ ಉಪಚುನಾವಣೆಯ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಭಾನುವಾರದ ಮೂಡ್. !
ಚುನಾವಣೆಗೆ ಕಳೆದ ಒಂದೂವರೆ ತಿಂಗಳಿಂದ ಪ್ರಚಾರಕ್ಕಾಗಿ ಅಲೆದಾಡಿದ್ದ ಅಭ್ಯರ್ಥಿಗಳು ರಜಾ ದಿನವಾದ ಭಾನುವಾರ ವಿಶ್ರಾಂತಿ ಭಾವದಲ್ಲಿದ್ದರು. ಆದರೆ ಮತಗಳಿಕೆಯ ಲೆಕ್ಕಾಚಾರ ಅವರ ತಲೆಯಿಂದ ಹೋಗಿರಲಿಲ್ಲ. ಇಬ್ಬರೂ ಅಭ್ಯರ್ಥಿಗಳು ಕೊಂಚ ವಿರಾಮ ಪಡೆದರೂ ದಿನವಿಡೀ ಕಾರ್ಯಕರ್ತರೊಂದಿಗೆ ಮತಗಳ ಗುಣಾಕಾರ, ಭಾಗಾಕಾರ ನಡೆಸಿದರು.
ಕೊಂಚ ರಿಲ್ಯಾಕ್ಸ್:
ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಶನಿವಾರ ರಾತ್ರಿಯಿಡೀ ಮತದಾನಕ್ಕಾಗಿ ಓಡಾಡಿ ಬಳಲಿದ್ದರು. ಬೆಳಗ್ಗೆ ಕೊಂಚ ತಡವಾಗಿ ಏಳಬೇಕು ಎಂಬ ಬಯಕೆ ಈಡೇರಲಿಲ್ಲ. ಏಕೆಂದರೆ ಮನೆಯ ಎದುರು ನೂರಾರು ಕಾರ್ಯಕರ್ತರು ನೆರೆದಿದ್ದರು. ಬೆಳಗ್ಗೆ ಎದ್ದೇಳುತ್ತಲೇ ಕುಟುಂಬ ಸದಸ್ಯರೊಂದಿಗೆ ಉಭಯ ಕುಶಲೋಪರಿ ವಿಚಾರಿಸುವ ಮೂಲಕ ಕೊಂಚ ರಿಲ್ಯಾಕ್ಸ್ ಆದರು. ತಾಯಿ ಸುಮಿತ್ರಾ, ಪತ್ನಿ ಕೀರ್ತಿ ಹಾಗೂ ಮಕ್ಕಳೊಂದಿಗೆ ಕೆಲ ಹೊತ್ತು ಹರಟೆ ಹೊಡೆದರು. ನಂತರ ಟಿವಿ ವೀಕ್ಷಿಸಿದರು. ಆಮೇಲೆ ಮನೆಗೆ ಬಂದ ಕಾರ್ಯಕರ್ತರೊಂದಿಗೆ ಚುನಾವಣೆ ಬಗ್ಗೆ ಚರ್ಚೆ ನಡೆಯಿತು.
ನಾನಾ ಪ್ರದೇಶಗಳ ಕಾರ್ಯಕರ್ತರು ತಮ್ಮ ಕ್ಷೇತ್ರದಲ್ಲಿ ಪಡೆದ ಮತಗಳ ಬಗ್ಗೆ ಲೆಕ್ಕ ಒಪ್ಪಿಸುತ್ತಿದ್ದರು. ಟೆನ್ಶನ್ ಇದ್ದರೂ ರಿಲ್ಯಾಕ್ಸ್ ಆಗಿದ್ದ ಆನಂದ ಅವರು ಎಲ್ಲ ಕಾರ್ಯಕರ್ತರೊಂದಿಗೆ ನಗುತ್ತ ಮಾತನಾಡಿದರು. ಮಧ್ಯಾಹ್ನದವರೆಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರೊಂದಿಗೆ ಚರ್ಚೆ ನಡೆಯಿತು. ಆಗಾಗಾ ಬರುತ್ತಿದ್ದ ಫೋನ್ ಕರೆಗಳಿಗೆ ಉತ್ತರಿಸಿ ಕೃತಜ್ಞತೆ ಹೇಳುವುದನ್ನು ಮರೆಯಲಿಲ್ಲ. ತಾವು ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಮಖಂಡಿ ಶುಗರ್ಸ್ಗೆ ಸಂಜೆ ಭೇಟಿ ನೀಡಿದ ಆನಂದ ಅವರು ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಕಾರ್ಖಾನೆ ಪ್ರಕ್ರಿಯೆ ಕುರಿತು ಚರ್ಚೆ ನಡೆಸಿದರು. ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದ ಸಮಾಧಾನದ ಭಾವ ಅವರ ಮುಖದಲ್ಲಿತ್ತು.
ಸ್ವಲ್ಪ ಟೆನ್ಶನ್:
ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ವಿರಾಮ ಭಾವದಲ್ಲಿ ಕಂಡು ಬಂದರೂ ಸ್ಪಲ್ಪ ಟೆನ್ಶನ್ನಲ್ಲಿದ್ದರು. ಶನಿವಾರ ರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾವಣೆಗೆ ನಕಲಿ ಮತಯಂತ್ರ ಬಳಸಲಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ತಡರಾತ್ರಿವರೆಗೆ ನಡೆದ ಪ್ರತಿಭಟನೆಯಲ್ಲಿ ಶ್ರೀಕಾಂತ ಭಾಗವಹಿಸಿದ್ದರು. ಬೆಳಗ್ಗ ಎದ್ದ ತಕ್ಷಣ ನಕಲಿ ಮತಯಂತ್ರಗಳ ಕುರಿತು ಚುನಾವಣೆ ಅಧಿಕಾರಿಗೆ ದೂರು ಸಲ್ಲಿಸಲು ಸಿದ್ಧತೆ ಆರಂಭಿಸಿದರು. ಈ ಮಧ್ಯೆ ಮೊಮ್ಮಕ್ಕಳೊಂದಿಗೆ ಸ್ಪಲ್ಪ ಸಮಯ ಆಟವಾಡಿ ಕುಟುಂಬದೊಂದಿಗೆ ಉಪಹಾರ ಸೇವಿಸಿದರು. ನಂತರ ಬಿಜೆಪಿ ಮುಖಂಡರಿಗೆ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ದೂರು ಸಲ್ಲಿಸಿದರು. ಆಗಾಗ ಕಾರ್ಯಕರ್ತರು ಶ್ರೀಕಾಂತ ಅವರ ಎದುರು ಚುನಾವಣೆ ವಿಶ್ಲೇಷಣೆ ಮುಂದಿಡುತ್ತಿದ್ದರು. ಕಾರ್ಯಕರ್ತರು, ಮುಖಂಡರು ನೀಡುತ್ತಿದ್ದ ವರದಿಯನ್ನು ಶ್ರೀಕಾಂತ ಸಮಾಧಾನದಿಂದ ಆಲಿಸಿದರು. ನಂತರ ಮನೆಗೆ ಆಗಮಿಸಿದ ಅವರು ರಾತ್ರಿವರೆಗೂ ಕಾರ್ಯಕರ್ತರೊಂದಿಗೆ ಚರ್ಚೆ ಹಾಗೂ ಹರಟೆಯಲ್ಲಿ ಕಾಲ ಕಳೆದರು.
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಜಮಖಂಡಿ ಉಪಚುನಾವಣೆಯ ಅಭ್ಯರ್ಥಿಗಳು ತೀವ್ರ ಟೆನ್ಶನ್ನಲ್ಲಿದ್ದಾರೆ. ಯಾರಿಗೆ ಎಷ್ಟು ಮತ ದೊರೆತಿದೆ ಎಂಬುದರ ಬಗ್ಗೆ ಅಭ್ಯರ್ಥಿಗಳ ಬೆಂಬಲಿಗರಲ್ಲಿ ಸವಾಲ್, ಜವಾಬ್ ನಡೆದಿವೆ. ಈ ಮಧ್ಯೆ ನ.5ರಂದು ಒಂದು ದಿನ ವಿಶ್ರಾಂತಿ ಪಡೆಯಲು ಅಭ್ಯರ್ಥಿಗಳಿಗೆ ಅವಕಾಶ ದೊರೆತಿದೆ. ನ.6ರಂದು ಹೊರ ಬೀಳಲಿರುವ ಫಲಿತಾಂಶ ಯಾರಿಗೆ ಖುಷಿ ನೀಡುತ್ತದೆ. ಯಾರಿಗೆ ದುಃಖ ನೀಡುತ್ತದೆ ಎಂಬುದು ಕುತೂಹಲದ ಸಂಗತಿ ಆಗಿದೆ.
ನಾನು ಬೆಳಗ್ಗೆ ಕೊಂಚ ರಿಲ್ಯಾಕ್ಸ್ ಆಗಿದ್ದೆ. ನಂತರ ಚುನಾವಣೆ ಆಯೋಗಕ್ಕೆ ದೂರು ನೀಡಲು ತೆರಳಿದ್ದೆ. ಸಂಜೆವರೆಗೂ ಕಾರ್ಯಕರ್ತರೊಂದಿಗೆ ಚರ್ಚೆ ಹಾಗೂ ಕುಟುಂಬ ಸದಸ್ಯರೊಂದಿಗೆ ಹರಟೆ ಹೊಡೆಯುವ ಮೂಲಕ ಭಾನುವಾರ ಕಳೆದಿದ್ದೇನೆ.
-ಶ್ರೀಕಾಂತ ಕುಲಕರ್ಣಿ, ಬಿಜೆಪಿ ಅಭ್ಯರ್ಥಿ
ಯಾವುದೇ ಟೆನ್ಶನ್ ಇಲ್ಲ. ಸಂಪೂರ್ಣ ರಿಲ್ಯಾಕ್ಸ್ ಆಗಿದ್ದೇನೆ. ತಾಯಿ, ಪತ್ನಿ, ಮಕ್ಕಳೊಂದಿಗೆ ಕೆಲ ಕಾಲ ಕಳೆದಿದ್ದು ಸಂಜೆ ಕಾರ್ಖಾನೆಗೆ ತೆರಳಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ.
-ಆನಂದ ನ್ಯಾಮಗೌಡ, ಕಾಂಗ್ರೆಸ್ ಅಭ್ಯರ್ಥಿ.
ಒಬ್ಬರಿಗೆ ಟೆನ್ಶನ್ ಮತ್ತೊಬ್ಬರಿಗೆ ರಿಲ್ಯಾಕ್ಸ್, ಇದು ಜಮಖಂಡಿ ಉಪಚುನಾವಣೆಯ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಭಾನುವಾರದ ಮೂಡ್. !
ಚುನಾವಣೆಗೆ ಕಳೆದ ಒಂದೂವರೆ ತಿಂಗಳಿಂದ ಪ್ರಚಾರಕ್ಕಾಗಿ ಅಲೆದಾಡಿದ್ದ ಅಭ್ಯರ್ಥಿಗಳು ರಜಾ ದಿನವಾದ ಭಾನುವಾರ ವಿಶ್ರಾಂತಿ ಭಾವದಲ್ಲಿದ್ದರು. ಆದರೆ ಮತಗಳಿಕೆಯ ಲೆಕ್ಕಾಚಾರ ಅವರ ತಲೆಯಿಂದ ಹೋಗಿರಲಿಲ್ಲ. ಇಬ್ಬರೂ ಅಭ್ಯರ್ಥಿಗಳು ಕೊಂಚ ವಿರಾಮ ಪಡೆದರೂ ದಿನವಿಡೀ ಕಾರ್ಯಕರ್ತರೊಂದಿಗೆ ಮತಗಳ ಗುಣಾಕಾರ, ಭಾಗಾಕಾರ ನಡೆಸಿದರು.
ಕೊಂಚ ರಿಲ್ಯಾಕ್ಸ್:
ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಶನಿವಾರ ರಾತ್ರಿಯಿಡೀ ಮತದಾನಕ್ಕಾಗಿ ಓಡಾಡಿ ಬಳಲಿದ್ದರು. ಬೆಳಗ್ಗೆ ಕೊಂಚ ತಡವಾಗಿ ಏಳಬೇಕು ಎಂಬ ಬಯಕೆ ಈಡೇರಲಿಲ್ಲ. ಏಕೆಂದರೆ ಮನೆಯ ಎದುರು ನೂರಾರು ಕಾರ್ಯಕರ್ತರು ನೆರೆದಿದ್ದರು. ಬೆಳಗ್ಗೆ ಎದ್ದೇಳುತ್ತಲೇ ಕುಟುಂಬ ಸದಸ್ಯರೊಂದಿಗೆ ಉಭಯ ಕುಶಲೋಪರಿ ವಿಚಾರಿಸುವ ಮೂಲಕ ಕೊಂಚ ರಿಲ್ಯಾಕ್ಸ್ ಆದರು. ತಾಯಿ ಸುಮಿತ್ರಾ, ಪತ್ನಿ ಕೀರ್ತಿ ಹಾಗೂ ಮಕ್ಕಳೊಂದಿಗೆ ಕೆಲ ಹೊತ್ತು ಹರಟೆ ಹೊಡೆದರು. ನಂತರ ಟಿವಿ ವೀಕ್ಷಿಸಿದರು. ಆಮೇಲೆ ಮನೆಗೆ ಬಂದ ಕಾರ್ಯಕರ್ತರೊಂದಿಗೆ ಚುನಾವಣೆ ಬಗ್ಗೆ ಚರ್ಚೆ ನಡೆಯಿತು.
ನಾನಾ ಪ್ರದೇಶಗಳ ಕಾರ್ಯಕರ್ತರು ತಮ್ಮ ಕ್ಷೇತ್ರದಲ್ಲಿ ಪಡೆದ ಮತಗಳ ಬಗ್ಗೆ ಲೆಕ್ಕ ಒಪ್ಪಿಸುತ್ತಿದ್ದರು. ಟೆನ್ಶನ್ ಇದ್ದರೂ ರಿಲ್ಯಾಕ್ಸ್ ಆಗಿದ್ದ ಆನಂದ ಅವರು ಎಲ್ಲ ಕಾರ್ಯಕರ್ತರೊಂದಿಗೆ ನಗುತ್ತ ಮಾತನಾಡಿದರು. ಮಧ್ಯಾಹ್ನದವರೆಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರೊಂದಿಗೆ ಚರ್ಚೆ ನಡೆಯಿತು. ಆಗಾಗಾ ಬರುತ್ತಿದ್ದ ಫೋನ್ ಕರೆಗಳಿಗೆ ಉತ್ತರಿಸಿ ಕೃತಜ್ಞತೆ ಹೇಳುವುದನ್ನು ಮರೆಯಲಿಲ್ಲ. ತಾವು ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಮಖಂಡಿ ಶುಗರ್ಸ್ಗೆ ಸಂಜೆ ಭೇಟಿ ನೀಡಿದ ಆನಂದ ಅವರು ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಕಾರ್ಖಾನೆ ಪ್ರಕ್ರಿಯೆ ಕುರಿತು ಚರ್ಚೆ ನಡೆಸಿದರು. ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದ ಸಮಾಧಾನದ ಭಾವ ಅವರ ಮುಖದಲ್ಲಿತ್ತು.
ಸ್ವಲ್ಪ ಟೆನ್ಶನ್:
ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ವಿರಾಮ ಭಾವದಲ್ಲಿ ಕಂಡು ಬಂದರೂ ಸ್ಪಲ್ಪ ಟೆನ್ಶನ್ನಲ್ಲಿದ್ದರು. ಶನಿವಾರ ರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾವಣೆಗೆ ನಕಲಿ ಮತಯಂತ್ರ ಬಳಸಲಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ತಡರಾತ್ರಿವರೆಗೆ ನಡೆದ ಪ್ರತಿಭಟನೆಯಲ್ಲಿ ಶ್ರೀಕಾಂತ ಭಾಗವಹಿಸಿದ್ದರು. ಬೆಳಗ್ಗ ಎದ್ದ ತಕ್ಷಣ ನಕಲಿ ಮತಯಂತ್ರಗಳ ಕುರಿತು ಚುನಾವಣೆ ಅಧಿಕಾರಿಗೆ ದೂರು ಸಲ್ಲಿಸಲು ಸಿದ್ಧತೆ ಆರಂಭಿಸಿದರು. ಈ ಮಧ್ಯೆ ಮೊಮ್ಮಕ್ಕಳೊಂದಿಗೆ ಸ್ಪಲ್ಪ ಸಮಯ ಆಟವಾಡಿ ಕುಟುಂಬದೊಂದಿಗೆ ಉಪಹಾರ ಸೇವಿಸಿದರು. ನಂತರ ಬಿಜೆಪಿ ಮುಖಂಡರಿಗೆ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ದೂರು ಸಲ್ಲಿಸಿದರು. ಆಗಾಗ ಕಾರ್ಯಕರ್ತರು ಶ್ರೀಕಾಂತ ಅವರ ಎದುರು ಚುನಾವಣೆ ವಿಶ್ಲೇಷಣೆ ಮುಂದಿಡುತ್ತಿದ್ದರು. ಕಾರ್ಯಕರ್ತರು, ಮುಖಂಡರು ನೀಡುತ್ತಿದ್ದ ವರದಿಯನ್ನು ಶ್ರೀಕಾಂತ ಸಮಾಧಾನದಿಂದ ಆಲಿಸಿದರು. ನಂತರ ಮನೆಗೆ ಆಗಮಿಸಿದ ಅವರು ರಾತ್ರಿವರೆಗೂ ಕಾರ್ಯಕರ್ತರೊಂದಿಗೆ ಚರ್ಚೆ ಹಾಗೂ ಹರಟೆಯಲ್ಲಿ ಕಾಲ ಕಳೆದರು.
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಜಮಖಂಡಿ ಉಪಚುನಾವಣೆಯ ಅಭ್ಯರ್ಥಿಗಳು ತೀವ್ರ ಟೆನ್ಶನ್ನಲ್ಲಿದ್ದಾರೆ. ಯಾರಿಗೆ ಎಷ್ಟು ಮತ ದೊರೆತಿದೆ ಎಂಬುದರ ಬಗ್ಗೆ ಅಭ್ಯರ್ಥಿಗಳ ಬೆಂಬಲಿಗರಲ್ಲಿ ಸವಾಲ್, ಜವಾಬ್ ನಡೆದಿವೆ. ಈ ಮಧ್ಯೆ ನ.5ರಂದು ಒಂದು ದಿನ ವಿಶ್ರಾಂತಿ ಪಡೆಯಲು ಅಭ್ಯರ್ಥಿಗಳಿಗೆ ಅವಕಾಶ ದೊರೆತಿದೆ. ನ.6ರಂದು ಹೊರ ಬೀಳಲಿರುವ ಫಲಿತಾಂಶ ಯಾರಿಗೆ ಖುಷಿ ನೀಡುತ್ತದೆ. ಯಾರಿಗೆ ದುಃಖ ನೀಡುತ್ತದೆ ಎಂಬುದು ಕುತೂಹಲದ ಸಂಗತಿ ಆಗಿದೆ.
ನಾನು ಬೆಳಗ್ಗೆ ಕೊಂಚ ರಿಲ್ಯಾಕ್ಸ್ ಆಗಿದ್ದೆ. ನಂತರ ಚುನಾವಣೆ ಆಯೋಗಕ್ಕೆ ದೂರು ನೀಡಲು ತೆರಳಿದ್ದೆ. ಸಂಜೆವರೆಗೂ ಕಾರ್ಯಕರ್ತರೊಂದಿಗೆ ಚರ್ಚೆ ಹಾಗೂ ಕುಟುಂಬ ಸದಸ್ಯರೊಂದಿಗೆ ಹರಟೆ ಹೊಡೆಯುವ ಮೂಲಕ ಭಾನುವಾರ ಕಳೆದಿದ್ದೇನೆ.
-ಶ್ರೀಕಾಂತ ಕುಲಕರ್ಣಿ, ಬಿಜೆಪಿ ಅಭ್ಯರ್ಥಿ
ಯಾವುದೇ ಟೆನ್ಶನ್ ಇಲ್ಲ. ಸಂಪೂರ್ಣ ರಿಲ್ಯಾಕ್ಸ್ ಆಗಿದ್ದೇನೆ. ತಾಯಿ, ಪತ್ನಿ, ಮಕ್ಕಳೊಂದಿಗೆ ಕೆಲ ಕಾಲ ಕಳೆದಿದ್ದು ಸಂಜೆ ಕಾರ್ಖಾನೆಗೆ ತೆರಳಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ.
-ಆನಂದ ನ್ಯಾಮಗೌಡ, ಕಾಂಗ್ರೆಸ್ ಅಭ್ಯರ್ಥಿ.