ಆ್ಯಪ್ನಗರ

ಗೂಡ್ಸ್ ರೈಲಿನಲ್ಲಿ ಬಂದ ಶಾಸಕ‌ ಎಚ್‌ಕೆ ಪಾಟೀಲ್‌

ಗದಗ, ಬಾಗಲಕೋಟೆ ಭಾಗದಲ್ಲಿಯೂ ಭಾರಿ ಮಳೆಯಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಧಕ್ಕೆ ಉಂಟಾಗಿದೆ. ಹೀಗಾಗಿ ಶಾಸಕ ಎಚ್‌ಕೆ ಪಾಟೀಲ್‌ ಗೂಡ್ಸ್‌ ರೈಲಿನಲ್ಲಿ ಪ್ರಯಾಣ ಬೆಳೆಸಿದರು.

Vijaya Karnataka Web 9 Aug 2019, 6:08 pm
ಬಾಗಲಕೋಟೆ : ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ಗದಗ ಶಾಸಕ ಎಚ್.ಕೆ.ಪಾಟೀಲ ಗೂಡ್ಸ್ ರೈಲಿನಲ್ಲಿ ಬಾಗಲಕೋಟಕ್ಕೆ ಬಂದು ಅಚ್ಚರಿ ಮೂಡಿಸಿದ್ದಾರೆ.
Vijaya Karnataka Web ಎಚ್‌ಕೆ ಪಾಟೀಲ್‌
ಎಚ್‌ಕೆ ಪಾಟೀಲ್‌


ಬಾಗಲಕೋಟೆ- ಗದಗ ಮಾರ್ಗದಲ್ಲಿ ಸೇತುವೆ ಮುಳುಗಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.

ಶುಕ್ರವಾರ ಗದಗ ಜಿಲ್ಲೆಯ ಕೊಣ್ಣೂರನಲ್ಲಿ ಪ್ರವಾಹ ಸ್ಥಿತಿ ವೀಕ್ಷಿಸಿದ ನಂತರ ಶಾಸಕ ಎಚ್ ಕೆ ಪಾಟೀಲ ಬಾಗಲಕೋಟ ದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕಿತ್ತು.

ಕೊಣ್ಣೂರ ನಲ್ಲಿ ಬಂದ ಗೂಡ್ಸ್‌ ರೈಲು ಹತ್ತಿದ ಶಾಸಕ ಬಾಗಲಕೋಟೆ ಗೆ ಬಂದಿಳಿದರು. ನಂತರ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ