ಆ್ಯಪ್ನಗರ

ಸಿದ್ಧು ಕಾರ್‌ ಅಡ್ಡಗಟ್ಟಿದ ಸಂತ್ರಸ್ತರು

ಬಾದಾಮಿ: ತಾಲೂಕಿನ ನೆಲವಿಗಿ ಗ್ರಾಮದ ನೆರೆ ಸಂತ್ರಸ್ತರು ನಗರದ ಎಪಿಎಂಸಿ ಹತ್ತಿರ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಕಾರು ಅಡ್ಡಗಟ್ಟಿ Nೕರಾವ್‌ ಹಾಕಿ ತಮ್ಮ ಗೋಳನ್ನು ತೋಡಿಕೊಂಡರು.

Vijaya Karnataka 24 Oct 2019, 5:00 am
ಬಾದಾಮಿ: ತಾಲೂಕಿನ ನೆಲವಿಗಿ ಗ್ರಾಮದ ನೆರೆ ಸಂತ್ರಸ್ತರು ನಗರದ ಎಪಿಎಂಸಿ ಹತ್ತಿರ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಕಾರು ಅಡ್ಡಗಟ್ಟಿ Nೕರಾವ್‌ ಹಾಕಿ ತಮ್ಮ ಗೋಳನ್ನು ತೋಡಿಕೊಂಡರು.
Vijaya Karnataka Web mla siddhu car crossing victims
ಸಿದ್ಧು ಕಾರ್‌ ಅಡ್ಡಗಟ್ಟಿದ ಸಂತ್ರಸ್ತರು


ಸರಿಯಾಗಿ ಪರಿಹಾರ ಧನ ಸಿಕ್ಕಿಲ್ಲ, ಸರ್ವೆ ಕಾರ್ಯವಾಗಿಲ್ಲ, ಹಕ್ಕುಪತ್ರ ನೀಡ್ತಿಲ್ಲ, ಅಧಿಕಾರಿಗಳು ನಿರ್ಲಕ್ಷತ್ರ್ಯ ತೋರುತ್ತಿದ್ದಾರೆ ಎಂದು ದೂರು ನೀಡಿದರು. ನಾಳೆ ನೆಲವಿಗಿ ಗ್ರಾಮಕ್ಕೆ ತೆರಳಿ ಸಮಸ್ಯೆ ಬಗೆಹರಿಸುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗನ್ನವರ ಅವರಿಗೆ ಸೂಚಿಸಿದರು.

ಬಿಎಸ್‌ವೈ ಅವರನ್ನೇ ಕೇಳಿ:

ಸಿಎಂ ಬಿಎಸ್‌ವೈ ಫೋಟೋ ಶೂಟ್‌ ಯಾಕೆ ಮಾಡಿಸಿಕೊಂಡಿದ್ದಾರೆ ಎಂದು ಅವರನ್ನೇ ಕೇಳಿ. ನನಗೆ ಗೊತ್ತಿಲ್ಲಎಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು ಫೋಟೋ ಶೂಟ್‌ ಬಗ್ಗೆ ನಾನು ಮಾತನಾಡಿದ್ರೆ. ದ್ವೇಷಕ್ಕೆ ಮಾತನಾಡ್ತಾರೆ ಅಂತಾರೆ. ಮಾಧ್ಯಮದವರು ಅದನ್ನೇ ತೋರಿಸ್ತೀರಿ. ಸಿ ಟಿ ರವಿ ಹೇಳಿರೋದನ್ನೇ ಹಾಕ್ತೀರಿ. ಬಿಜೆಪಿಯವರು ಸುಳ್ಳು ಹೇಳ್ತಾರೆ. ಸಿ.ಪಿ.ಯೋಗೇಶ್ವರ್‌ ಕಾಂಗ್ರೆಸ್‌ ಸೇರ್ಪಡೆ ಪ್ರಸ್ತಾಪ ಇಲ್ಲಎಂದು ಹೇಳಿದರು. ಜಿ.ಪಂ.ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ, ಎಚ್‌.ವೈ.ಮೇಟಿ, ಮಹೇಶ ಹೊಸಗೌಡ್ರ, ಎಂ.ಬಿ.ಹಂಗರಗಿ, ಹೊಳಬಸು ಶೆಟ್ಟರ, ಪಿ.ಆರ್‌.ಗೌಡರ ಸೇರಿದಂತೆ ಮುಂತಾದವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ