ಆ್ಯಪ್ನಗರ

ಬಾಗಲಕೋಟೆ | ಪುರಸಭೆ ಸದಸ್ಯೆಯ ಗರ್ಭಪಾತವೇ ಸುಳ್ಳು ನಾಟಕ: ಬಿಜೆಪಿ ನಾಯಕರ ಆರೋಪ

ಶಾಸಕ ಸಿದ್ದು ಸವದಿ ಅವರು ಎಳೆದಾಡಿದ್ದ ಪುರಸಭೆ ಸದಸ್ಯೆ ಚಾಂದನಿ ನಾಯ್ಕ್‌ಗೆ ಗರ್ಭಪಾತವಾಗಿದೆ ಎಂಬುದು ಸುಳ್ಳು ನಾಟಕ ಎಂದು ಬಿಜೆಪಿ ನಾಯಕ ಹಾಗೂ ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಆರೋಪಿಸಿದ್ದು, ಶಾಸಕರ ಹೆಸರು ಕೆಡಿಸಲು ಮಾಡಿದ ನಾಟಕ ಎಂದು ಹೇಳಿದ್ದಾರೆ.

Vijaya Karnataka Web 3 Dec 2020, 6:25 pm
ಮಹಾಲಿಂಗಪುರ (ಬಾಗಲಕೋಟೆ): ಸ್ಥಳೀಯ ಪುರಸಭೆ ಸದಸ್ಯೆ ಚಾಂದನಿ ನಾಯ್ಕ್‌ ಅವರಿಗೆ ಗರ್ಭಪಾತವಾಗಿದೆ ಎಂಬುದು ನಿಜವಲ್ಲ. ಶಾಸಕರ ಹೆಸರು ಕೆಡಿಸಲು ಮಾಡಿದ ಸುಳ್ಳು ನಾಟಕ ಎಂದು ಬಿಜೆಪಿ ನಾಯಕ ಹಾಗೂ ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಆರೋಪಿಸಿದರು.
Vijaya Karnataka Web BAGALKOT
ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿ ಗರ್ಭಪಾತ ಸುಳ್ಳು ಎಂಬ ದಾಖಲೆ ಬಿಡುಗಡೆ ಮಾಡಿದರು


ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೋಲಿನಿಂದ ಹತಾಶಗೊಂಡ ಕಾಂಗ್ರೆಸ್ ಪಕ್ಷ ಇಂಥ ಗೊಡ್ಡು ಆರೋಪಗಳ ಅಗ್ನಿಯಲ್ಲಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಇತ್ತೀಚೆಗೆ ನಡೆದ ಎಳೆದಾಟ, ತಳ್ಳಾಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾತ್ರವೂ ಇರುವುದನ್ನು ಮರೆಮಾಚಿ ಎಲ್ಲವೂ ಶಾಸಕರಿಂದಲೇ ಅಥವಾ ಬಿಜೆಪಿ ಕಾರ್ಯಕರ್ತರಿಂದಲೇ ನಡೆಯಿತು ಎಂಬಂತೆ ಆರೋಪಿಸಿದ ಕಾಂಗ್ರೆಸ್ ತನ್ನ ಚಾಳಿ ಮುಂದುವರೆಸಿ ಗರ್ಭಪಾತದ ವಿಷಯದಿಂದ ಕಾಲೆಳೆಯುತ್ತಿರುವುದು ಹೀನಾಯ ರಾಜಕಾರಣವಾಗಿದೆ ಎಂದರು.

ಇತ್ತೀಚೆಗೆ ನಾಗೇಶ ನಾಯಕ ಅವರು ತನ್ನ ಪತ್ನಿ ಚಾಂದನಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭಪಾತವಾಗಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಆದರೆ ಇಡೀ ನವೆಂಬರ್ ತಿಂಗಳಲ್ಲಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಾವುದೇ ಗರ್ಭಪಾತ ಸಂಭವಿಸಿಲ್ಲ ಎಂದು ವೈದ್ಯಾಧಿಕಾರಿಯೇ ತಿಂಗಳ ವರದಿ ನೀಡಿದ್ದಾರೆ ಎಂದು ದಾಖಲೆ ಪ್ರದರ್ಶಿಸಿದರು.

ಶಾಸಕ ಸಿದ್ದು ಸವದಿ ಎಳೆದಾಡಿದ್ದ ಪುರಸಭೆ ಸದಸ್ಯೆ ಚಾಂದಿನಿ ನಾಯಕ್‌ಗೆ ಗರ್ಭಪಾತ

ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ, ಅಷ್ಟಕ್ಕೂ ಎಳೆದಾಟ ತಳ್ಳಾಟ ನಡೆದಿರುವುದಕ್ಕೆ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಆರೋಪಿಸಿದರು. ನವೆಂಬರ್‌ 9ರಂದು ಮಹಾಲಿಂಗಪುರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವೇಳೆ ಶಾಸಕ ಸಿದ್ದು ಸವದಿ ಮಹಿಳಾ ಸದಸ್ಯರನ್ನು ಎಳೆದಾಡಿದ್ದರು. ಆ ವಿಡಿಯೋ ಭಾರೀ ವೈರಲ್‌ ಆಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅದಾದ ಕೆಲ ದಿನಗಳ ಬಳಿಕ ಚಾಂದನಿ ನಾಯ್ಕ್‌ಗೆ ಗರ್ಭಪಾತವಾಗಿರುವ ಸುದ್ದಿ ಬೆಳಕಿಗೆ ಬಂದಿತ್ತು.

ಮಹಿಳಾ ಸದಸ್ಯೆಯನ್ನು ತಳ್ಳಾಡಿದ ಬಿಜೆಪಿ ಶಾಸಕ ಸಿದ್ದು ಸವದಿ; ಶಾಸಕನ ನಡೆಗೆ ವ್ಯಾಪಕ ಆಕ್ರೋಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ