ಆ್ಯಪ್ನಗರ

ಮಾರಕಾಸ್ತ್ರದಿಂದ ಹೊಡೆದು ದಂಪತಿ ಬರ್ಬರ ಕೊಲೆ

ಜಮಖಂಡಿ: ಮಾರಕಾಸ್ತ್ರಗಳಿಂದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಗುರುವಾರ ಮಧ್ಯಾಹ್ನ ಜಮಖಂಡಿ ತಾಲೂಕಿನ ಕೆ.ಡಿ.ಜಂಬಗಿ ಗ್ರಾಮದ ನಡೆದಿದೆ.

Vijaya Karnataka 30 Aug 2019, 5:00 am
ಜಮಖಂಡಿ: ಮಾರಕಾಸ್ತ್ರಗಳಿಂದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಗುರುವಾರ ಮಧ್ಯಾಹ್ನ ಜಮಖಂಡಿ ತಾಲೂಕಿನ ಕೆ.ಡಿ.ಜಂಬಗಿ ಗ್ರಾಮದ ನಡೆದಿದೆ.
Vijaya Karnataka Web murder of couple barbara fatally shot
ಮಾರಕಾಸ್ತ್ರದಿಂದ ಹೊಡೆದು ದಂಪತಿ ಬರ್ಬರ ಕೊಲೆ


ಶಿದರಾಯ ಈರಪ್ಪ ಮಲ್ಲೇಶನವರ(52), ಆತನ ಎರಡನೇ ಪತ್ನಿ ಕಲಾವತಿ(42) ಕೊಲೆಗೀಡಾದವರು.

ಮೃತನ ಮೊದಲ ಪತ್ನಿ ತೀರಿಕೊಂಡಿದ್ದು, ಅವರ ಇಬ್ಬರು ಮಕ್ಕಳು, ಸೊಸೆಯಂದಿರು ಮತ್ತು ಬೀಗರು ಸೇರಿ ಹತ್ಯೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಮಧಾಹ್ನ ಮೃತನ ಮೊದಲ ಪತ್ನಿಯ ಮಗ ಗುರುಪಾದ, ಪತ್ನಿ ಗೀತಾ, ಎರಡನೇ ಮಗ ಬಸಗೊಂಡ ಪತ್ನಿ ರಾಜಶ್ರೀ ಹಾಗೂ ಬೀಗರು ಸೇರಿ ಎಂಟು ಜನರು ಸೇರಿ ಕಲಾವತಿಯನ್ನು ಕೊಡಲಿಯಿಂದ ಹೊಡೆದು ಸಾಯಿಸಿದ್ದಾರೆಂದು ಎರಡನೇ ಹೆಂಡತಿ ಮಗ ಪ್ರತ್ಯಕ್ಷದರ್ಶಿ ಪ್ರವೀಣ ಇತನ ಅಜ್ಜಿ ಲಕ್ಷಿತ್ರ್ಮೕಬಾಯಿ ತಿಳಿಸಿದ್ದಾರೆ.

ಘಟನೆ: ಮೊದಲ ಹೆಂಡತಿ ಮಕ್ಕಳು ಮನೆಗೆ ನುಗ್ಗಿ ಹೊಡೆಯಲು ಪ್ರಾರಂಭಿಸಿದ್ದಾರೆ, ಅದನ್ನು ಕಂಡ ಎರಡನೇ ಹೆಂಡತಿ ಕಲಾವತಿ ಬಿಡಿಸಲು ಹೋದಾಗ ಅವಳಿಗೂ ಕೊಡಲಿಯಿಂದ ಹೊಡೆದು ತಂದೆಯನ್ನು ಕೊಂದು ತಮ್ಮ ವಾಹನದಲ್ಲಿಹಾಕಿಕೊಂಡು ಸಮೀಪದ ಸಾವಳಗಿ ಠಾಣೆಗೆ ಹೋಗಿದ್ದಾರೆ. ಇನ್ನು ಕಲಾವತಿಯನ್ನು ಹೊಡೆದು ಅಲ್ಲೇ ಬಿಟ್ಟು ಹೋಗಿದ್ದಾರೆ. ನಂತರ ಜಮಖಂಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆಂದು ಸ್ಥಳಕ್ಕೆ ಭೇಟಿ ನೀಡಿರುವ ಡಿವೈಎಸ್‌ಪಿ ಆರ್‌.ಕೆ.ಪಾಟೀಲ್‌, ಸಿಪಿಐ ಮಹಾಂತೇಶ ಹೊಸಪೇಠ ತಿಳಿಸಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ