ಆ್ಯಪ್ನಗರ

ಮಾಚಕನೂರಿನಲ್ಲಿ ಮುಖಂಡನ ಬರ್ಬರ ಕೊಲೆ

ಬಾಗಲಕೋಟೆ: ಮುಧೋಳ ತಾಲೂಕಿನ ಶಿರೋಳದಲ್ಲಿಜೋಡಿ ಕೊಲೆ ನಡೆದ ಘಟನೆ ಮಾಸುವ ಮುನ್ನವೇ, ಮಾಚಕನೂರಿನಲ್ಲಿಬುಧವಾರ ಮಧ್ಯೆರಾತ್ರಿ ಮುಖಂಡನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

Vijaya Karnataka 6 Dec 2019, 5:00 am
ಬಾಗಲಕೋಟೆ: ಮುಧೋಳ ತಾಲೂಕಿನ ಶಿರೋಳದಲ್ಲಿಜೋಡಿ ಕೊಲೆ ನಡೆದ ಘಟನೆ ಮಾಸುವ ಮುನ್ನವೇ, ಮಾಚಕನೂರಿನಲ್ಲಿಬುಧವಾರ ಮಧ್ಯೆರಾತ್ರಿ ಮುಖಂಡನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
Vijaya Karnataka Web murder of leader in machakannur
ಮಾಚಕನೂರಿನಲ್ಲಿ ಮುಖಂಡನ ಬರ್ಬರ ಕೊಲೆ


ಗ್ರಾಮದ ಮುಖಂಡ ವೆಂಕಪ್ಪ ತಳವಾರ( 55) ಕೊಲೆಯಾದವ. ಜಮೀನಿಗೆ ನೀರು ಹಾಯಿಸುವ ವಿಚಾರದಲ್ಲಿಬುಧವಾರ ಮಧ್ಯರಾತ್ರಿ ಸಂಬಂಧಿಕರೆ ಕೊಲೆ ಮಾಡಿದ್ದು, ಅದರಲ್ಲಿಒಬ್ಬಾತ ಶರಣಾಗಿದ್ದಾನೆ ಎಂದು ಪೊಲೀಸ್‌ ಉನ್ನತ ಮೂಲಗಳು ಖಚಿತಪಡಿಸಿವೆ.

ಗ್ರಾಮದಲ್ಲಿಜಮೀನಿನ ವಿಚಾರವಾಗಿ ವೆಂಕಪ್ಪನೊಂದಿಗೆ ಸಂಬಂಧಿಕರ ಜಗಳ ಆಗಾಗ ನಡೆದೇ ಇತ್ತು. ಈ ವಿಚಾರವಾಗಿ ಘರ್ಷಣೆಗಳಾದರೂ ಸ್ಥಳೀಯರು ಸಮಾಧಾನಪಡಿಸಿದ್ದರು. ಮತ್ತೆ ಇದೇ ವಿಚಾರವಾಗಿ ಗಲಾಟೆಯಾಗಿದ್ದು, ಬುಧವಾರ ರಾತ್ರಿ 11ರ ಸುಮಾರಿಗೆ ನೀರು ಹಾಯಿಸಲು ಹೋದಾಗ ಮಾರಕಾಸ್ತ್ರಗಳಿಂದ ವೆಂಕಪ್ಪನ ಮೇಲೆ ಹಲ್ಲೆಮಾಡಲಾಗಿದೆ. ಇದರಿಂದಲೇ ನಮ್ಮ ತಂದೆ ಮೃತಪಟ್ಟಿದ್ಧಾರೆ ಎಂದು ವೆಂಕಪ್ಪನ ಪುತ್ರ ಮಂಜುನಾಥ್‌ ನೀಡಿರುವ ದೂರಿನನ್ವಯ ಮುಧೋಳ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ಧಾರೆ.

ಗ್ರಾಮದ ಆರು ಮಂದಿ ದಾಳಿ ಮಾಡಿರುವ ಶಂಕೆಯಿದ್ದು, ಅದರಲ್ಲಿಹೊಳೆಯಪ್ಪ ಎಂಬಾತ ಶರಣಾಗಿದ್ಧಾನೆ. ಆತನ ಹೇಳಿಕೆ ಆಧರಿಸಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮುಂದಿನ ವಾರ ಮಾಚಕನೂರಿನಲ್ಲಿಜಾತ್ರೆ ತಯಾರಿ ನಡೆದಿದೆ. ಈ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿಆತಂಕದ ಛಾಯೆ ಆವರಿಸಿದೆ.

ಘಟನೆ ಹಿನ್ನೆಲೆಯಲ್ಲಿಮುಧೋಳ ಸಿಪಿಐ ಎಚ್‌.ಆರ್‌.ಪಾಟೀಲ್‌ ಗ್ರಾಮಕ್ಕೆ ಭೇಟಿ ನೀಡಿ ತನಿಖೆ ಚುರುಕುಗೊಳಿಸಿದ್ಧಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ