ನನ್ನ ಖರೀದಿಸುವ ವ್ಯಕ್ತಿ ಇನ್ನೂ ಹುಟ್ಟಿಲ್ಲ
ಜಮಖಂಡಿ: ಹಣ ನೀಡಿ ಶ್ರೀಕಾಂತ ಕುಲಕರ್ಣಿಯನ್ನು ಖರೀದಿ ಮಾಡಿದ್ದೇವೆ. ಟಿಕೆಟ್ ನಮಗೆ ಬಿಟ್ಟುಕೊಟ್ಟಿದ್ದಾರೆಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ನಾನು ಮಾರಾಟದ ವಸ್ತುವಲ್ಲ. ನನ್ನನ್ನು ಖರೀದಿ ಮಾಡುವ ವ್ಯಕ್ತಿ ಇನ್ನೂ ಪ್ರಪಂಚದಲ್ಲಿ ಹುಟ್ಟಿಲ್ಲ. ಇಂತಹ ಊಹಾಪೋಹಗಳಿಗೆ ಯಾರೂ ತಲೆಗೊಡದೆ ಪಕ್ಷ ದ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.
Vijaya Karnataka 30 Mar 2018, 5:00 am
ಜಮಖಂಡಿ: ಹಣ ನೀಡಿ ಶ್ರೀಕಾಂತ ಕುಲಕರ್ಣಿಯನ್ನು ಖರೀದಿ ಮಾಡಿದ್ದೇವೆ. ಟಿಕೆಟ್ ನಮಗೆ ಬಿಟ್ಟುಕೊಟ್ಟಿದ್ದಾರೆಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ನಾನು ಮಾರಾಟದ ವಸ್ತುವಲ್ಲ. ನನ್ನನ್ನು ಖರೀದಿ ಮಾಡುವ ವ್ಯಕ್ತಿ ಇನ್ನೂ ಪ್ರಪಂಚದಲ್ಲಿ ಹುಟ್ಟಿಲ್ಲ. ಇಂತಹ ಊಹಾಪೋಹಗಳಿಗೆ ಯಾರೂ ತಲೆಗೊಡದೆ ಪಕ್ಷ ದ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.
ನಗರದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಕಾಲೇಜ್ ಜೀವನದಿಂದ ಹಿಡಿದು ಹೋರಾಟ ಮಾಡುತ್ತ ಬಂದಿದ್ದೇನೆ. ನವ ಭಾರತ ನಿರ್ಮಾಣದ ಕನಸು ಹೊತ್ತು ಪಕ್ಷ ದ ತತ್ತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಂಘಟನೆ ಮಾಡುತ್ತ ಬಂದಿದ್ದೇನೆ. ಅಧಿಕಾರ, ದುಡ್ಡು ಶಾಶ್ವತವಲ್ಲ. ಅದನ್ನು ನಾನು ಎಂದೂ ಬಯಸಿಲ್ಲ. ಮೂರ್ನಾಲ್ಕು ಬಾರಿ ಚುನಾವಣೆಯಲ್ಲಿ ಸೋತರೂ ಯಾವ ಹಣದ ಆಮಿಷಕ್ಕೆ ಒಳಗಾಗುವ ಹೇಡಿಯೂ ನಾನಲ್ಲ ಎಂದು ಕಠೋರವಾಗಿ ಹೇಳಿದರು.
ರಾಜಕೀಯಕ್ಕೆ ನನ್ನ ಸಂಪೂರ್ಣ ಸಮಯ ಮೀಸಲಿಟ್ಟಿದ್ದೇನೆ. ಪಕ್ಷ ದ ಆದೇಶ ಪಾಲಿಸುತ್ತೇನೆ. ಟಿಕೆಟ್ ನನಗೆ ಸಿಕ್ಕರೆ ಹಳೆ ದಾಖಲೆ ಮುರಿದು ಆರಿಸಿ ಬರುತ್ತೇನೆ. ನನ್ನ 40 ವರ್ಷ ರಾಜಕೀಯ ಜೀವನದಲ್ಲಿ ಈಗಿರುವಂತಹ ಜನಬೆಂಬಲವನ್ನು ನಾನು ನೋಡಿಲ್ಲ. ಒಂದು ಮೋದಿ ಅಲೆ ಮತ್ತು ನನ್ನ ಅವಧಿಯಲ್ಲಿ ಮಾಡಿರುವ ಕೆಲಸಗಳು ಹಾಗೂ ಕಾಂಗ್ರೆಸ್ ವೈಫಲ್ಯಗಳು ಇದಕ್ಕೆ ಕಾರಣವಾಗುತ್ತವೆ. ಜಮಖಂಡಿ ಮತಕ್ಷೇತ್ರದಲ್ಲಿ ಆಕಾಂಕ್ಷಿಗಳಿದ್ದಾರೆ. ಪಕ್ಷ ದ ನಾಯಕರು ಈಗಾಗಲೇ ಮೂರ್ನಾಲ್ಕು ಭಾರಿ ಸರ್ವೆ ಮಾಡಿದ್ದಾರೆ. ಅವರು ಯಾರಿಗೆ ಟಿಕೆಟ್ ನೀಡಿದರೂ ಪಕ್ಷ ದ ಪರವಾಗಿ ಕೆಲಸ ಮಾಡುತ್ತೇನೆ. ಯಾವ ಕಾರ್ಯಕರ್ತರು ಇಂತಹ ಊಹಾಪೋಹಗಳಿಗೆ ತಲೆಗೊಡಬಾರದು ನಾನು ಸ್ಪರ್ಧಿಸುವುದು ಖಚಿತವಾದಂತಿದೆ ಎಂದರು.
ನಗರದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಕಾಲೇಜ್ ಜೀವನದಿಂದ ಹಿಡಿದು ಹೋರಾಟ ಮಾಡುತ್ತ ಬಂದಿದ್ದೇನೆ. ನವ ಭಾರತ ನಿರ್ಮಾಣದ ಕನಸು ಹೊತ್ತು ಪಕ್ಷ ದ ತತ್ತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಂಘಟನೆ ಮಾಡುತ್ತ ಬಂದಿದ್ದೇನೆ. ಅಧಿಕಾರ, ದುಡ್ಡು ಶಾಶ್ವತವಲ್ಲ. ಅದನ್ನು ನಾನು ಎಂದೂ ಬಯಸಿಲ್ಲ. ಮೂರ್ನಾಲ್ಕು ಬಾರಿ ಚುನಾವಣೆಯಲ್ಲಿ ಸೋತರೂ ಯಾವ ಹಣದ ಆಮಿಷಕ್ಕೆ ಒಳಗಾಗುವ ಹೇಡಿಯೂ ನಾನಲ್ಲ ಎಂದು ಕಠೋರವಾಗಿ ಹೇಳಿದರು.
ರಾಜಕೀಯಕ್ಕೆ ನನ್ನ ಸಂಪೂರ್ಣ ಸಮಯ ಮೀಸಲಿಟ್ಟಿದ್ದೇನೆ. ಪಕ್ಷ ದ ಆದೇಶ ಪಾಲಿಸುತ್ತೇನೆ. ಟಿಕೆಟ್ ನನಗೆ ಸಿಕ್ಕರೆ ಹಳೆ ದಾಖಲೆ ಮುರಿದು ಆರಿಸಿ ಬರುತ್ತೇನೆ. ನನ್ನ 40 ವರ್ಷ ರಾಜಕೀಯ ಜೀವನದಲ್ಲಿ ಈಗಿರುವಂತಹ ಜನಬೆಂಬಲವನ್ನು ನಾನು ನೋಡಿಲ್ಲ. ಒಂದು ಮೋದಿ ಅಲೆ ಮತ್ತು ನನ್ನ ಅವಧಿಯಲ್ಲಿ ಮಾಡಿರುವ ಕೆಲಸಗಳು ಹಾಗೂ ಕಾಂಗ್ರೆಸ್ ವೈಫಲ್ಯಗಳು ಇದಕ್ಕೆ ಕಾರಣವಾಗುತ್ತವೆ. ಜಮಖಂಡಿ ಮತಕ್ಷೇತ್ರದಲ್ಲಿ ಆಕಾಂಕ್ಷಿಗಳಿದ್ದಾರೆ. ಪಕ್ಷ ದ ನಾಯಕರು ಈಗಾಗಲೇ ಮೂರ್ನಾಲ್ಕು ಭಾರಿ ಸರ್ವೆ ಮಾಡಿದ್ದಾರೆ. ಅವರು ಯಾರಿಗೆ ಟಿಕೆಟ್ ನೀಡಿದರೂ ಪಕ್ಷ ದ ಪರವಾಗಿ ಕೆಲಸ ಮಾಡುತ್ತೇನೆ. ಯಾವ ಕಾರ್ಯಕರ್ತರು ಇಂತಹ ಊಹಾಪೋಹಗಳಿಗೆ ತಲೆಗೊಡಬಾರದು ನಾನು ಸ್ಪರ್ಧಿಸುವುದು ಖಚಿತವಾದಂತಿದೆ ಎಂದರು.