ಆ್ಯಪ್ನಗರ

ಮಳೆಗಾಗಿ ಭದ್ರಗಿರಿ ಬೆಟ್ಟದಲ್ಲಿ ಣಮೋಕಾರ ಮಂತ್ರ

ರಬಕವಿ/ಬನಹಟ್ಟಿ : ಜೂನ್‌ ತಿಂಗಳ ಅರ್ಧ ಕಳೆದರೂ ಇನ್ನೂ ಮಳೆ ಬಾರದಿರುವುದರಿಂದ ಸಮೀಪದ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಜೈನ ಮುನಿ ಕುಲರತ್ನಭೂಷಣ ಮಹಾರಾಜರ ನೇತೃತ್ವದಲ್ಲಿ ಲಕ್ಷ ದ ಎಂಟು ಬಾರಿ ಣಮೋಕಾರ ಮಂತ್ರ ಜಪಿಸಿ ಪ್ರಾರ್ಥನೆ ಸಲ್ಲಿಸಲಾಯಿತು.

Vijaya Karnataka 13 Jun 2019, 5:00 am
ರಬಕವಿ/ಬನಹಟ್ಟಿ : ಜೂನ್‌ ತಿಂಗಳ ಅರ್ಧ ಕಳೆದರೂ ಇನ್ನೂ ಮಳೆ ಬಾರದಿರುವುದರಿಂದ ಸಮೀಪದ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಜೈನ ಮುನಿ ಕುಲರತ್ನಭೂಷಣ ಮಹಾರಾಜರ ನೇತೃತ್ವದಲ್ಲಿ ಲಕ್ಷ ದ ಎಂಟು ಬಾರಿ ಣಮೋಕಾರ ಮಂತ್ರ ಜಪಿಸಿ ಪ್ರಾರ್ಥನೆ ಸಲ್ಲಿಸಲಾಯಿತು.
Vijaya Karnataka Web namokar mantra in bhadragiri hill for rain
ಮಳೆಗಾಗಿ ಭದ್ರಗಿರಿ ಬೆಟ್ಟದಲ್ಲಿ ಣಮೋಕಾರ ಮಂತ್ರ


ಸಾವಿರಾರು ಜೈನ ಬಾಂಧವರು, ಶ್ರಾವಕ, ಶ್ರಾವಕಿಯರು ಸೇರಿ ಭದ್ರಗಿರಿ ಬೆಟ್ಟದ ಪ್ರದೇಶದಲ್ಲಿ ದೊರೆತ ಜಿನಬಿಂಬಗಳಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಜೈನ ಸಮಾಜದ ವಿಧಿ ವಿಧಾನಗಳ ಪ್ರಕಾರ ಮಳೆಗಾಗಿ ಅನೇಕ ಮಂತ್ರಗಳನ್ನು ಶ್ರೀಗಳ ಜೊತೆ ಎಲ್ಲರೂ ಜಪಿಸಿದರು.

ಬೆಟ್ಟದ ಪ್ರದೇಶದಲ್ಲಿ ನಿರ್ಮಿಸಿದ 21 ತೀರ್ಥಂಕರುಗಳ ದೇಗುಲಗಳಿಗೆ, ಇಲ್ಲಿ ದೊರೆತ ಜಿನಬಿಂಬಗಳನ್ನು ಮಹಾರಾಜರು ಸೇರಿದಂತೆ ಅನೇಕ ಶ್ರಾವಕ, ಶ್ರಾವಕಿಯರು ಸಹ ತಲೆಮೇಲೆ ಇಟ್ಟುಕೊಂಡು ಮೆರವಣಿಗೆ ಮಾಡಲಾಯಿತು.

ಸಮಾರಂಭದಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಅನೇಕ ನಗರಗಳಿಂದ ಜೈನ ಸಮುದಾಯದ ಸ್ಥಳೀಯರು ಸೇರಿದಂತೆ ಶ್ರಾವಕ, ಶ್ರಾವಕಿಯರು ಆಗಮಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ