ಆ್ಯಪ್ನಗರ

ನೆರೆ ಇಳಿಕೆ, ಜನಜೀವನ ಸಹಜ ಸ್ಥಿತಿಯತ್ತ

ಬಾಗಲಕೋಟೆ: ಜಿಲ್ಲೆಯಾದ್ಯಂತ ನದಿಗಳ ಒಳಹರಿವು ತಗ್ಗಿದ್ದು, ಕೃಷ್ಣಾ ನದಿಯ ಒಳಹರಿವು ಕಡಿಮೆಯಾಗಿರುವುದರಿಂದ ಪ್ರವಾಹ ಮುಂದುವರಿಯುವ ಆತಂಕ ದೂರವಾಗಿದೆ.

Vijaya Karnataka 17 Aug 2019, 5:00 am
ಬಾಗಲಕೋಟೆ: ಜಿಲ್ಲೆಯಾದ್ಯಂತ ನದಿಗಳ ಒಳಹರಿವು ತಗ್ಗಿದ್ದು, ಕೃಷ್ಣಾ ನದಿಯ ಒಳಹರಿವು ಕಡಿಮೆಯಾಗಿರುವುದರಿಂದ ಪ್ರವಾಹ ಮುಂದುವರಿಯುವ ಆತಂಕ ದೂರವಾಗಿದೆ.
Vijaya Karnataka Web neighbors decline life is back to normal
ನೆರೆ ಇಳಿಕೆ, ಜನಜೀವನ ಸಹಜ ಸ್ಥಿತಿಯತ್ತ


ನದಿಗಳ ಭೋರ್ಗರೆತ ನೋಡಿ ದಿಕ್ಕೆಟ್ಟಿದ್ದ ಜಿಲ್ಲೆಯ ಜನರು ಇದೀಗ ನಿರಾಳರಾಗಿದ್ದು, ಸಂತ್ರಸ್ತರಾಗಿದ್ದ 1 ಲಕ್ಷ 54 ಸಾವಿರ ಜನರ ಪೈಕಿ ನೆರೆ ಹಿಂದೆ ಸರಿದ ಗ್ರಾಮಗಳ ಜನರು ವಾಪಸ್ಸಾಗುತ್ತಿದ್ದಾರೆ. ಜಿಲ್ಲೆಯ 212 ಕಾಳಜಿ ಕೇಂದ್ರಗಳಲ್ಲಿರುವ ಗ್ರಾಮಸ್ಥರು ಇನ್ನು ಮನೆಗಳಿಗೆ ವಾಪಸ್ಸಾಗಲು ಯಾವುದೇ ಆತಂಕವಿಲ್ಲ. ಚಿಚಖಂಡಿ ಸೇತುವೆ, ಕೊಣ್ಣೂರು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಲೋಕಾಪುರ-ಜಮಖಂಡಿ, ಸೊಲ್ಲಾಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಚಾಲನೆ ದೊರೆತಿದೆ.

ಜಮಖಂಡಿ ತಾಲೂಕಿನಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದ ಕೃಷ್ಣಾ ನದಿಯ ಮಹಾಪೂರ ಗಣನೀಯವಾಗಿ ಕಡಿಮೆಯಾಗಿದೆ. ಹಿಪ್ಪರಗಿ ಬ್ಯಾರೇಜ್‌ಗೆ ಶುಕ್ರವಾರ 3 ಲಕ್ಷ 63 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಗುರುವಾರ ಈ ಪ್ರಮಾಣ 3 ಲಕ್ಷ 70 ಸಾವಿರದಷ್ಟಿತ್ತು. ಮಲಪ್ರಭಾ ನದಿಗೆ 1, 964 ಕ್ಯೂಸೆಕ್‌, ಘಟಪ್ರಭಾ ನದಿಗೆ 12, 362 ಕ್ಯೂಸೆಕ್‌ ನೀರು ಹರಿದುಬಂದಿದೆ. ಗುರುವಾರ ಘಟಪ್ರಭಾ ನದಿಗೆ 27 ಸಾವಿರ ಕ್ಯೂಸೆಕ್‌ ನೀರು ಹರಿದಿತ್ತು. ಮುಧೋಳ ತಾಲೂಕಿನ ಚಿಚಖಂಡಿ ಸೇತುವೆ ಶುಕ್ರವಾರ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಒಂದು ವಾರದಿಂದ ಸೇತುವೆ ನೀರಿನಲ್ಲಿ ಮುಳುಗಿದ್ದರಿಂದ ಲೋಕಾಪುರ-ಮುಧೋಳ ಸಂಚಾರ ಬಂದ್‌ ಆಗಿತ್ತು. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಗಲಗಲಿ ಮೂಲಕ ಮುಧೋಳ ತಲುಪಬೇಕಿತ್ತು. ಸೇತುವೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದರಿಂದ ಲೋಕಾಪುರದಿಂದ ನೇರವಾಗಿ ಮುಧೋಳ ಮಾರ್ಗವಾಗಿ ಜಮಖಂಡಿ ತಲುಪಬಹುದಾಗಿದೆ. ಚಿಕ್ಕಪಡಸಲಗಿ ಸೇತುವೆಯಲ್ಲಿ ಇನ್ನೂ ವಾಹನ ಸಂಚಾರಕ್ಕೆ ಅವಕಾಶ ನೀಡಿಲ್ಲ. ಕೊಣ್ಣೂರ ಸೇತುವೆ ಮುಕ್ತವಾಗಿರುವುದರಿಂದ ಬಾಗಲಕೋಟೆಯಿಂದ ಹುಬ್ಬಳ್ಳಿಗೆ ನೇರ ಸಂಚಾರ ಆರಂಭಗೊಂಡಿದೆ. ಭಾರಿ ಪ್ರವಾಹದಿಂದಾಗಿ ಕುಸಿದಿದ್ದ ರಸ್ತೆಯನ್ನು ಮಣ್ಣಿನಿಂದ ದುರಸ್ತಿಗೊಳಿಸಿದ್ದು ತಾತ್ಕಾಲಿಕವಾಗಿ ಸಂಚಾರ ಆರಂಭಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ