ಆ್ಯಪ್ನಗರ

ನಮ್ಮ ಸರಕಾರ ರೈತರ ಪರ: ಡಿಕೆಶಿ

ಬಾಗಲಕೋಟ : ಯುಕೆಪಿ ಯೋಜನೆ ಕುರಿತು ಅಧಿಕಾರಿಗಳು, ಹೋರಾಟ ಸಮಿತಿ, ರೈತರೊಂದಿಗೆ ಚರ್ಚಿಸುತ್ತಿದ್ದು ಜನತೆಗೆ ಅನುಕೂಲದ ದೃಷ್ಠಿಯಿಂದ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ನಮ್ಮ ಸರಕಾರ ರೈತರ ಪರವಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ತಿಳಿಸಿದರು.

Vijaya Karnataka 24 Jun 2018, 5:00 am
ಬಾಗಲಕೋಟ : ಯುಕೆಪಿ ಯೋಜನೆ ಕುರಿತು ಅಧಿಕಾರಿಗಳು, ಹೋರಾಟ ಸಮಿತಿ, ರೈತರೊಂದಿಗೆ ಚರ್ಚಿಸುತ್ತಿದ್ದು ಜನತೆಗೆ ಅನುಕೂಲದ ದೃಷ್ಠಿಯಿಂದ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ನಮ್ಮ ಸರಕಾರ ರೈತರ ಪರವಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ತಿಳಿಸಿದರು.
Vijaya Karnataka Web our government is for farmers dk
ನಮ್ಮ ಸರಕಾರ ರೈತರ ಪರ: ಡಿಕೆಶಿ


ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯುಕೆಪಿ ರಾಜ್ಯದ ಪ್ರತಿಷ್ಠಿತ ಯೋಜನೆ ಆಗಿದೆ. ಸಚಿವನಾದ ನಂತರ ಈ ಭಾಗದ ನೀರಾವರಿ ಯೋಜನೆಗಳ ಕುರಿತು ಮಾಹಿತಿ ಪಡೆಯಲು ಆಗಮಿಸಿದ್ದೇನೆ. ನೀರಾವರಿ ಪ್ರದೇಶ, ಡ್ಯಾಂ ವೀಕ್ಷಿಸಿದ್ದೇನೆ. ಸಮಸ್ಯೆ ಗಂಭೀರತೆ ಕುರಿತು ಸಂಬಂಧಿಸಿದ ಅಧಿಕಾರಿಗಳು, ರೈತರು, ಹೋರಾಟಗಾರರೊಂದಿಗೆ ಚರ್ಚಿಸಿದ್ದೇನೆ. ಭೂಮಿ ಕಳೆದುಕೊಳ್ಳುವ ರೈತರಿಗೆ ನಮ್ಮ ಸರಕಾರ ಅನ್ಯಾಯ ಮಾಡಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಇಲಾಖೆ ಇತಿಮಿತಿಯಲ್ಲಿ ಹಣಕಾಸು ಹೊಂದಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

ಯುಕೆಪಿ 3ನೇ ಹಂತದ ಅನುಷ್ಠಾನದ ಏಕರೂಪದ ಬೆಲೆ ನಿಗದಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ನೀರಾವರಿ ಇಲಾಖೆ ಜವಾಬ್ದಾರಿ ವಹಿಸಿಕೊಂಡು ಕೆಲ ದಿನಗಳು ಕಳೆದಿವೆ. ನಾನು ಈಗಷ್ಟೇ ಕಣ್ಣು ಬಿಟ್ಟು ನೋಡುತ್ತಿದ್ದೇನೆ. ಸ್ವಲ್ಪ ಸಮಯ ಕೊಡಿ. ನಾನೆಂದು ಪಲಾಯನವಾದಿಯಲ್ಲ. ಸರಕಾರದ ಯೋಜನೆಗಳನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಶತಪ್ರಯತ್ನ ಮಾಡುತ್ತೇನೆ. ಹಜ್‌ ಭವನಕ್ಕೆ ಟಿಪ್ಪು ಹೆಸರಿಡುವ ಕುರಿತು ಸರಕಾರಕ್ಕೆ ಬಂದಿರುವ ಪ್ರಸ್ತಾವ ಕುರಿತ ವಿಚಾರ ನನಗೆ ತಿಳಿದಿಲ್ಲ. ಅದು ನನ್ನ ಇಲಾಖೆ ಸಮಸ್ಯೆಯೂ ಅಲ್ಲ ಎಂದರು.

ಮಾಜಿ ಶಾಸಕ ಎಚ್‌.ವೈ.ಮೇಟಿ, ಜೆ.ಟಿ.ಪಾಟೀಲ, ಅಜಯಕುಮಾರ ಸರನಾಯಕ, ಬಸವಪ್ರಭು ಸರನಾಡಗೌಡ, ನಾಗರಾಜ ಹದ್ಲಿ, ಎ.ಡಿ.ಮೊಕಾಶಿ, ಆನಂದ ಜಿಗಜಿನ್ನಿ, ರಕ್ಷಿತಾ ಈಟಿ, ಮಂಜುನಾಥ ವಾಸನದ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ