ಆ್ಯಪ್ನಗರ

ನೀರಾವರಿ ಇಲಾಖೆಗೆ ಬೀಗ ಜಡಿದು ಆಕ್ರೋಶ

ಲೋಕಾಪುರ: ಘಟಪ್ರಭಾ ಬಲದಂಡೆ ಕಾಲುವೆ ನೀರನ್ನು ಹಳ್ಳಕ್ಕೆ ಬಿಡಲು ಒತ್ತಾಯಿಸಿ ಸುತ್ತಮುತ್ತಲಿನ ಗ್ರಾಮದ ರೈತರು ನೀರಾವರಿ ಇಲಾಖೆಗೆ ಶುಕ್ರವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.

Vijaya Karnataka 15 Dec 2018, 5:00 am
ಲೋಕಾಪುರ: ಘಟಪ್ರಭಾ ಬಲದಂಡೆ ಕಾಲುವೆ ನೀರನ್ನು ಹಳ್ಳಕ್ಕೆ ಬಿಡಲು ಒತ್ತಾಯಿಸಿ ಸುತ್ತಮುತ್ತಲಿನ ಗ್ರಾಮದ ರೈತರು ನೀರಾವರಿ ಇಲಾಖೆಗೆ ಶುಕ್ರವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
Vijaya Karnataka Web outrage over the irrigation department
ನೀರಾವರಿ ಇಲಾಖೆಗೆ ಬೀಗ ಜಡಿದು ಆಕ್ರೋಶ


ಬೆಳಗ್ಗೆಯಿಂದ ಕಚೇರಿಗೆ ಬಂದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಳೆ ಇಲ್ಲದ ಕಾರಣ ಗ್ರಾಮಗಳಲ್ಲಿ ಅಂತರ್ಜಲ ಕುಸಿದು, ಜಮೀನುಗಳಲ್ಲಿನ ಬೋರ್‌Üವೆಲ್‌ಗಳು ಬತ್ತಿವೆ, ದನ ಕರುಗಳಿಗೆ ಕುಡಿಯಲು ನೀರಿಲ್ಲ, ಬರದಿಂದ ರೈತರು ತತ್ತರಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ ್ಯ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಹಳ್ಳಕ್ಕೆ, ಕಾಲುವೆಗಳಿಗೆ, ನೀರು ಹರಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಮರಿದ ಬೆಳೆಗೆ ಆಸರೆಯಾಗಲಿ:

ಯಾದವಾಡ, ಕೌಜಲಗಿ ಭಾಗದಲ್ಲಿ ಹಳ್ಳಕ್ಕೆ, ಕಾಲುವೆಗೆ ನೀರು ಬಿಡುವ ಅವಧಿ ಮುಗಿದರೂ ನೀರು ಬಿಡಲಾಗುತ್ತಿದೆ. ಕಾಲುವೆಗಳ ದುರಸ್ತಿ ಮಾಡದೇ ನೀರು ಬಿಡುತ್ತಿರುವುದರಿಂದ ಹೊಳು, ಮುಳ್ಳುಕಂಟಿಗಳಿಗಿಂದ ತುಂಬಿ ನೀರು ಪೋಲಾಗಿ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪದೆ ಬೆಳೆಗಳು ಕಮರಿ ಹೋಗುತ್ತಿವೆ. ಬಿತ್ತನೆಗೆ ಹಾಕಿದ ಬೀಜ, ಗೊಬ್ಬರ, ಖರ್ಚೂ ಕೈಗೊಟುತ್ತಿಲ್ಲ ಆದ್ದರಿಂದ ಈ ಭಾಗದ ರೈತರ ಸಂಕಷ್ಟ ಪರಿಹರಿಸಬೇಕೆಂದು ಆಗ್ರಹಿಸಿದರು. ನೀರಾವರಿ ಇಲಾಖೆಗೆ ಎಷ್ಟು ಸಲ ಅರ್ಜಿ ಕೊಟ್ಟಿದ್ದೇವೆ. ಆದರೆ ಈ ಬಗ್ಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.

ಬಸಪ್ಪ ದೊಡಮನಿ, ಶಿವರಾಜ ಪಾಟೀಲ, ಮಹಾದೇವ ಹುಗ್ಗಿ, ಶಿವನಗೌಡ ಕೃಷ್ಣಗೌಡರ, ವೆಂಕಪ್ಪ ಗಿಡ್ಡನ್ನವರ, ಮಂಜು ಪಾಟೀಲ, ಶಿವನಿಂಗಯ್ಯ ಜಂಬಗಿ, ಶಿವಪ್ಪ ಗಿಡ್ಡನ್ನವರ, ರಾಮಣ್ಣ ಮಾಳಿ, ರಮೇಶ ಪಾಟೀಲ, ವೆಂಕಪ್ಪ ಪಾಟೀಲ, ಶಂಕರಗೌಡ ಪಾಟೀಲ, ಪುಂಡಲೀಕ ಪಾಟೀಲ, ಅಪ್ಪಣ್ಣ ಮುದ್ದಾಪೂರ, ಶಂಕರ ದುಂಡಪ್ಪಗೋಳ, ಫಕೀರಪ್ಪ ಜುನ್ನಪ್ಪನವರ ಚೌಡಾಪುರ, ನಾಗಣಾಪುರ, ಸುತ್ತಮುತ್ತಲಿನ ಗ್ರಾಮದ ರೈತರು ಇದ್ದರು.


ಅಧಿಕಾರಿಗಳ ಅತಿಯಾದ ಭ್ರಷ್ಟಾಚಾರ ಮತ್ತು ನಿರ್ಲಕ್ಷ ್ಯದಿಂದ ಲೋಕಾಪುರ ಹೊಬಳಿ ರೈತರು ನೀರಾವರಿಯಿಂದ ವಂಚಿತರಾಗಿದ್ದು ಆರಂಭದಿಂದ ಇಲ್ಲಿಯವರೆಗೆ ಆಗಿರುವ ಖರ್ಚು ವೆಚ್ಚದ ಸಮಗ್ರ ತನಿಖೆಯಾಗಲಿ
ಶಿವರಾಜ ಪಾಟೀಲ, ರೈತ

ಮೇಲಧಿಕಾರಿಗಳು ಕೇವಲ ಕಾಲುವೆಗಳಿಗೆ ನೀರು ಹರಿಸಲು ಅದೇಶಿಸುತ್ತಾರೆ. ಆದರೆ ಹಳ್ಳಕ್ಕೆ ನೀರು ಬಿಡಲು ಆದೇಶಿಸುವುದಿಲ್ಲ ಆದರೂ ಮೇಲಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಕಾಲುವೆ ನೀರು ಸುಗಮವಾಗಿ ಸಂಚರಿಸಲು ಕ್ರಮ ಕೈಗೊಳ್ಳುತ್ತೇನೆ.
ಸಿ.ಎಂ.ದೊಡಮನಿ, ಸಹಾಯಕ ಕಾರ್ಯಪಾಲಕ ಇಂಜನಿಯರ್‌, ನಿರಾವರಿ ನಿಗಮ ನಿ.ಲೋಕಾಪುರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ