ಆ್ಯಪ್ನಗರ

ತುಂಬಿ ಹರಿಯುತ್ತಿರುವ ಘಟಪ್ರಭಾ ನದಿ

ಮುಧೋಳ: ಬೆಳಗಾವಿ ಜಿಲ್ಲೆಯ ಜಲಾವೃತಗೊಂಡ ಪ್ರದೇಶ, ಹಿಡಕಲ್‌ ಹಾಗೂ ಧೂಪದಾಳ ಜಲಾಶಯದಿಂದ ಘಟಪ್ರಭಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Vijaya Karnataka 10 Jul 2019, 5:00 am
ಮುಧೋಳ: ಬೆಳಗಾವಿ ಜಿಲ್ಲೆಯ ಜಲಾವೃತಗೊಂಡ ಪ್ರದೇಶ, ಹಿಡಕಲ್‌ ಹಾಗೂ ಧೂಪದಾಳ ಜಲಾಶಯದಿಂದ ಘಟಪ್ರಭಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
Vijaya Karnataka Web overflowing ghatprabha river in mudhol
ತುಂಬಿ ಹರಿಯುತ್ತಿರುವ ಘಟಪ್ರಭಾ ನದಿ


ಬೆಳಗಾವಿ ಜಿಲ್ಲೆಯ ಭಾಗದಿಂದ 13,402 ಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಿಲ್ಲೆಯ ನದಿ ತೀರದಲ್ಲಿ ಬೇಸಿಗೆಯ ದಿನಗಳಿಂದ ಜೂನ್‌ ಎರಡನೇ ವಾರದವರೆಗೂ ನೀರಿಗಾಗಿ ಪರಿತಪ್ಪಿಸಿದ ಜನರು ಈಗ ನೆಮ್ಮದಿ ಉಸಿರು ಬಿಡುವಂತಾಗಿದೆ.

ಜನ ಜಾನುವಾರುಗಳಿಗೆ ಕುಡಿವ ನೀರು ಪೂರೈಕೆ ಹಾಗೂ ನದಿ ತೀರದಲ್ಲಿ ಒಣಗಿ ಹೋಗುತ್ತಿದ್ದ ಕೋಟ್ಯಾಂತರ ಮೌಲ್ಯದ ಕಬ್ಬಿಗೆ, ನಾನಾ ಬೆಳೆಗಳಿಗೆ ನೀರುಣಿಸಲು ನದಿ ನೀರು ಸಹಾಯಕವಾಗಲಿದೆ. ಹಿಡಕಲ್‌ ಹಾಗೂ ಧೂಪದಾಳ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಘಟಪ್ರಭಾ ನದಿ ತುಂಬಿ ಹರಿಯುತ್ತಿರುವುದರಿಂದ ಬ್ರೀಜ್‌ ಕಂ ಬ್ಯಾರೇಜ್‌ ಬಳಿ ಓಡಾಡಿಕೊಂಡಿರುವ ಜನರು ಜಾಗರೂಕತೆಯಿಂದ ಇರುವುದು ಅವಶ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ