ಆ್ಯಪ್ನಗರ

ರಾಜಕೀಯ ಬಗ್ಗೆ ಜನರಿಗೆ ಅಸಹ್ಯವಾಗಿದೆ: ಪ್ರಮೋದ್ ಮುತಾಲಿಕ್‌

20 ಜಿಲ್ಲೆಯಲ್ಲಿ ಹನಿ ನೀರು ಇಲ್ಲ, ತೀವ್ರ ಬರಗಾಲವಿದೆ. ಇಂಥ ಸ್ಥಿತಿಯಲ್ಲಿ ರೆಸಾರ್ಟ್ ನಲ್ಲಿ ಲಕ್ಷಾಂತರ ರೂಪಾಯಿ ಹಣ ವ್ಯಯ ಮಾಡ್ತಿರೋದು ಇವರಪ್ಪನ ಮನೆಯ ದುಡ್ಡಲ್ಲ. ಇದು ಜನಸಾಮಾನ್ಯರ ತೆರಿಗೆ ಹಣ ವ್ಯಯವಾಗುತ್ತಿದೆ ಎಂದು ಆರೋಪಿಸಿದರು.

Vijaya Karnataka Web 22 Jul 2019, 4:19 pm
ಬಾಗಲಕೋಟೆ: ಈಗಿನ ರಾಜಕೀಯ ಜನರಿಗೆ ಅತ್ಯಂತ ಅಸಹ್ಯಕರವಾಗಿದೆ. ಇದು ರಾಜಕೀಯ ವರ್ಚಸ್ಸು ಹಾಳು ಮಾಡುತ್ತಿದೆ. ವಿಧಾನಸಭೆಯಲ್ಲಿನ ಇವರ ನಾಟಕಗಳು ಅತ್ಯಂತ ಅಸಹ್ಯಕರ. ಇವರಿಗೆ ಮಾನ ಮರ್ಯಾದೆ ಇಲ್ಲದಂತೆ ನಡುವಳಿಕೆ ತೋರಿಸುತ್ತಿದ್ದಾರೆ. ಜನಸಾಮಾನ್ಯರು ನಮಗೆ ಇಂಥವರು ಬೇಕಾ? ಎಂದು ಪ್ರಶ್ನಿಸುವಂತಾಗಿದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ ತಿಳಿಸಿದ್ದಾರೆ.
Vijaya Karnataka Web ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್


ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಎಲ್ಲ ಪಕ್ಷದವರು ಮಾನ ಮರ್ಯಾದೆ ನಡವಳಿಕೆ ಮಾಡ್ತಿರೋದು ಸರಿಯಲ್ಲ. ಇದನ್ನು ಯಾವುದಾದರೂ ಹಂತಕ್ಕೆ ನಿಲ್ಲಿಸಬೇಕು. ಜನಸಾಮಾನ್ಯರು ಇಂಥವರಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸ್ಬೇಕು. ಮತ್ತೆ ಇವರನ್ನೇ ಚುನಾಯಿಸಬೇಡಿ. ಇಂಥ ನಿರ್ಲಜ್ಜರನ್ನು ಚುನಾಯಿಸಿ ಮತ್ತೆ ಜನಸಾಮಾನ್ಯರು, ರೈತರು ಹೊಂಡಕ್ಕೆ ಬೀಳಬೇಡಿ ಎಂದರು.

ರಾಜ್ಯಪಾಲರು ಮಧ್ಯೆ ಪ್ರವೇಶ ಹಕ್ಕಿಲ್ಲಂತ ಆಡಳಿತ ಪಕ್ಷದವರು ಹೇಳ್ತಿದ್ರೆ. ವಿರೋಧ ಪಕ್ಷದವರು ಹಕ್ಕಿದೆ ಅಂತಿದ್ದಾರೆ. ಕಾನೂನು ತಿರುಚಿ ತಮಗೆ ಬೇಕಾದ ರೀತಿಯಲ್ಲಿ ಮಾತನಾಡ್ತಿದ್ದಾರೆ. ರಾಜ್ಯಪಾಲರ ಕೈಯಲ್ಲೂ ಉಳಿದಿಲ್ಲ ಅನಿಸುತ್ತೆ. ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸ್ಬೇಕು. ಇಲ್ಲಿ ಅನಾಚಾರ ನಡೆಯುತ್ತಿದೆ. ಇದು ಇಡೀ ದೇಶದಲ್ಲೇ ಕೆಟ್ಟ ಪ್ರವೃತ್ತಿ ಆರಂಭವಾಗುತ್ತೆ ಎಂದು ಮುತಾಲಿಕ್‌ ತಿಳಿಸಿದರು.

ಕೇಂದ್ರ ಸರಕಾರದವರು ಇದಕ್ಕೆ ಪೂರ್ಣ ವಿರಾಮ ಹಾಕಬೇಕು. ರಾಷ್ಟ್ರಪತಿ ಆಡಳಿತ ತರಬೇಕೆಂದು ಆಗ್ರಹಿಸುತ್ತೇನೆ ಎಂದರು.

ರೆಸಾರ್ಟ್‌ಗೆ ಹೋದವರಿಗೆ ಮಾನಮರ್ಯಾದೆ ಇಲ್ಲ. ಅಂಥವರಿಗೆ ಪೋಷಣೆ ಮಾಡುವರು ರಾಜಕಾರಣದಲ್ಲಿ ಅಯೋಗ್ಯರು. ಅತೃಪ್ತರ ಪೋಷಕರು ಸಹ ಅಯೋಗ್ಯರು ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ನಾಯಕರಿಗೂ ಮುತಾಲಿಕ್ ಚಾಟಿ ಬೀಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ