ಕಲಾದಗಿ: ನಿಮ್ಮ ಕೈಮುಗಿತೀವಿ ನಮಗೊಂದು ನೆಮ್ಮದಿ ನೆಲೆ ಒದಗಿಸಿಕೊಡ್ರಿ. ವಾಸಿಸಲು ಯೋಗ್ಯವಲ್ಲದ ಜಾಗಾ ಕೊಟ್ಟು ಅಲ್ಲಿಗೆ ನಮಗೆ ಹೋಗ್ರೀ ಅಂತ್ತಾರ್ರೀ. ನಾವ್ ಹೆಂಗ್ ಹೋಗಬೇಕು. ವಾಸಕ್ಕೆ ಯೋಗ್ಯ ಸ್ಥಳಕ್ಕೆ ನಮ್ಮನ್ನೆಲ್ಲಾಸ್ಥಳಾಂತರ ಮಾಡಿಸಿ ಪುಣ್ಯಕಟ್ಟಕೊಳ್ಳರೀ. ನೆರೆಯಿಂದ ಬೀದಿಗೆ ಬಿದ್ದೀವಿ ಈವರೆಗೂ ಜಿಲ್ಲಾಡಳಿತದವರು ಶೆಡ್್ಡ ನಿರ್ಮಾಣ ಮಾಡಿಲ್ಲಾ..''
ಇದು ಮಾಜಿ ಗೃಹ ಸಚಿವ, ಕಾಂಗ್ರೆಸ್Ü ಹಿರಿಯ ಮುಖಂಡ ರಾಮಲಿಂಗಾರಡ್ಡಿ ಅವರು ಎರೆಹೊಸಳ್ಳಿಯ ವೇಮನಾನಂದ ಶ್ರೀಗÜಳೊಂದಿಗೆ ಸಂತ್ರಸ್ತರಿಗೆ ಅಗತ್ಯ ಸಾಮಾನುಗಳ ಕಿಟ್ಟೊಂದನ್ನು ವಿತರಣೆ ಮಾಡಲು ಗ್ರಾಮಕ್ಕೆ ಬಂದಾಗ ಈ ರೀತಿಯ ಬೇಡಿಕೆ ಗ್ರಾಮದ ಸಂತ್ರಸ್ತರಿಂದ ಕೇಳಿಬಂತು.ಇಲ್ಲಿನ ಮೀನುಗಾರರ ಓಣಿಯ ಸರಕಾರಿ ಶಾಲೆ, ಉರ್ದುಶಾಲೆಯಲ್ಲಿರುವ ಸಂತ್ರಸ್ತರ ಕಾಳಜೀ ಕೇಂದ್ರಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಸಂತ್ರಸ್ತರನ್ನು ಮಾತನಾಡಿಸಿದಾಗ ಅಲ್ಲಿದ್ದ ಮಹಿಳೆಯರು ಕಣ್ಣೀರು ತಂದು 'ನೀರಾಗ ಮನಿ ಕಳಕೊಂಡು ಬೀದಿಗೆ ಬಿದ್ದೀವಿ ಇರಾಕೊಂದು ನೆಲೆ ಕೊಡಸ್ರೀ'ಎಂದು ಹೇಳುವಾಗ ಸಂತಸ್ರಸ್ತರ ಸಂಕಟ ಅರಿವಾಗುವಂತಿತ್ತು.
ಅಧಿಕಾರಿಗಳಿಗೆ ದೂರವಾಣಿ:
ತಾತ್ಕಾಲಿಕ ವಾಸಕ್ಕೆ ಶೆಡ್ ನಿರ್ಮಿಸಿಕೊಡಲು ಜಿಲ್ಲಾಡಳಿತ ಇನ್ನೂ ಮುಂದಾಗದಿರುವ ಬಗ್ಗೆ ಸಂತ್ರಸ್ತರು ದೂರಿದ್ದರಿಂದ ಜಿಲ್ಲಾಧಿಧಿಕಾರಿ ರಾಮಚಂದ್ರನ್ ಅವರಿಗೆ ದೂರವಾಣಿ ಮೂಲಕ ರಾಮಲಿಗಾರಡ್ಡಿ ಅವರು ಮಾತನಾಡಿದಾಗ, ಕಲಾದಗಿ ಕೃಷ್ಣಾಮೇಲ್ದಂಡೆ ಯೋಜನೆಯ ಮುಳುಗಡೆ ವ್ಯಾಪ್ತಿಯಲ್ಲಿರುವುದರಿಂದ ಶೆಡ್್ಡ ನಿರ್ಮಾಣಕ್ಕೆ ಅನೇಕ ಸಮಸ್ಯೆಗಳಿವೆ,ಇದು ಸರಕಾರದ ಮಟ್ಟದಲ್ಲಿಪರಿಹಾರವಾಗಬೇಕು ಎಂಬ ಉತ್ತರ ಅವರಿಗೆ ದೊರೆಯಿತು. ಸರಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಅವರಿಗೂ ಸಹ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ನೀಗಿಸುವಂತೆ ಸೂಚಿಸಿದರು. ಶೆಡ್ಗಳ ನಿರ್ಮಾಣಕ್ಕೆ ಕೂಡಲೆ ಮುಂದಾಗಬೇಕೆಂದು ಕೋರಿದರು.
ಬಿಡಿಸಿಟ್ಟರು ಮುಳುಗಡೆ ಸಮಸ್ಯೆ: ಕಲಾದಗಿ ಮುಳುಗಡೆ ಹೋರಾಟ ಸಮಿತಿ ಅಧ್ಯಕ್ಷ ಜೆ.ಡಿ.ಚೌದರಿ, ಎಂ.ಬಿ.ಸೌದಾಗರ, ಹಸನ್ಮಹದ ರೋಣ, ಸಲೀಂಶೇಖ, ಫÜಕಿರಪ್ಪ ಮಾದರ, ಅಮೀನಸಾಬ ರೋಣ, ಮಲ್ಲಪ್ಪ ಜಮಖಂಡಿ ಮತ್ತಿತರ ಮುಖಂಡರು ಕಳೆದ ಹತ್ತಾರು ವರ್ಷಗಳಿಂದ ಗ್ರಾಮದ ಸಂತ್ರಸ್ತರು ಅನುಭವಿಸುತ್ತಿರುವ ಯಾತನೆಯನ್ನು ಮಾಜಿ ಸಚಿವರೆದುರಿಗೆ ಬಿಚ್ಚಿಟ್ಟರು. ಮಾಜಿ ಶಾಸಕ ಜೆ.ಟಿ.ಪಾಟೀಲ ಮತ್ತಿತರರಿದ್ದರು.
ಇದು ಮಾಜಿ ಗೃಹ ಸಚಿವ, ಕಾಂಗ್ರೆಸ್Ü ಹಿರಿಯ ಮುಖಂಡ ರಾಮಲಿಂಗಾರಡ್ಡಿ ಅವರು ಎರೆಹೊಸಳ್ಳಿಯ ವೇಮನಾನಂದ ಶ್ರೀಗÜಳೊಂದಿಗೆ ಸಂತ್ರಸ್ತರಿಗೆ ಅಗತ್ಯ ಸಾಮಾನುಗಳ ಕಿಟ್ಟೊಂದನ್ನು ವಿತರಣೆ ಮಾಡಲು ಗ್ರಾಮಕ್ಕೆ ಬಂದಾಗ ಈ ರೀತಿಯ ಬೇಡಿಕೆ ಗ್ರಾಮದ ಸಂತ್ರಸ್ತರಿಂದ ಕೇಳಿಬಂತು.ಇಲ್ಲಿನ ಮೀನುಗಾರರ ಓಣಿಯ ಸರಕಾರಿ ಶಾಲೆ, ಉರ್ದುಶಾಲೆಯಲ್ಲಿರುವ ಸಂತ್ರಸ್ತರ ಕಾಳಜೀ ಕೇಂದ್ರಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಸಂತ್ರಸ್ತರನ್ನು ಮಾತನಾಡಿಸಿದಾಗ ಅಲ್ಲಿದ್ದ ಮಹಿಳೆಯರು ಕಣ್ಣೀರು ತಂದು 'ನೀರಾಗ ಮನಿ ಕಳಕೊಂಡು ಬೀದಿಗೆ ಬಿದ್ದೀವಿ ಇರಾಕೊಂದು ನೆಲೆ ಕೊಡಸ್ರೀ'ಎಂದು ಹೇಳುವಾಗ ಸಂತಸ್ರಸ್ತರ ಸಂಕಟ ಅರಿವಾಗುವಂತಿತ್ತು.
ಅಧಿಕಾರಿಗಳಿಗೆ ದೂರವಾಣಿ:
ತಾತ್ಕಾಲಿಕ ವಾಸಕ್ಕೆ ಶೆಡ್ ನಿರ್ಮಿಸಿಕೊಡಲು ಜಿಲ್ಲಾಡಳಿತ ಇನ್ನೂ ಮುಂದಾಗದಿರುವ ಬಗ್ಗೆ ಸಂತ್ರಸ್ತರು ದೂರಿದ್ದರಿಂದ ಜಿಲ್ಲಾಧಿಧಿಕಾರಿ ರಾಮಚಂದ್ರನ್ ಅವರಿಗೆ ದೂರವಾಣಿ ಮೂಲಕ ರಾಮಲಿಗಾರಡ್ಡಿ ಅವರು ಮಾತನಾಡಿದಾಗ, ಕಲಾದಗಿ ಕೃಷ್ಣಾಮೇಲ್ದಂಡೆ ಯೋಜನೆಯ ಮುಳುಗಡೆ ವ್ಯಾಪ್ತಿಯಲ್ಲಿರುವುದರಿಂದ ಶೆಡ್್ಡ ನಿರ್ಮಾಣಕ್ಕೆ ಅನೇಕ ಸಮಸ್ಯೆಗಳಿವೆ,ಇದು ಸರಕಾರದ ಮಟ್ಟದಲ್ಲಿಪರಿಹಾರವಾಗಬೇಕು ಎಂಬ ಉತ್ತರ ಅವರಿಗೆ ದೊರೆಯಿತು. ಸರಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಅವರಿಗೂ ಸಹ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ನೀಗಿಸುವಂತೆ ಸೂಚಿಸಿದರು. ಶೆಡ್ಗಳ ನಿರ್ಮಾಣಕ್ಕೆ ಕೂಡಲೆ ಮುಂದಾಗಬೇಕೆಂದು ಕೋರಿದರು.
ಬಿಡಿಸಿಟ್ಟರು ಮುಳುಗಡೆ ಸಮಸ್ಯೆ: ಕಲಾದಗಿ ಮುಳುಗಡೆ ಹೋರಾಟ ಸಮಿತಿ ಅಧ್ಯಕ್ಷ ಜೆ.ಡಿ.ಚೌದರಿ, ಎಂ.ಬಿ.ಸೌದಾಗರ, ಹಸನ್ಮಹದ ರೋಣ, ಸಲೀಂಶೇಖ, ಫÜಕಿರಪ್ಪ ಮಾದರ, ಅಮೀನಸಾಬ ರೋಣ, ಮಲ್ಲಪ್ಪ ಜಮಖಂಡಿ ಮತ್ತಿತರ ಮುಖಂಡರು ಕಳೆದ ಹತ್ತಾರು ವರ್ಷಗಳಿಂದ ಗ್ರಾಮದ ಸಂತ್ರಸ್ತರು ಅನುಭವಿಸುತ್ತಿರುವ ಯಾತನೆಯನ್ನು ಮಾಜಿ ಸಚಿವರೆದುರಿಗೆ ಬಿಚ್ಚಿಟ್ಟರು. ಮಾಜಿ ಶಾಸಕ ಜೆ.ಟಿ.ಪಾಟೀಲ ಮತ್ತಿತರರಿದ್ದರು.