ಆ್ಯಪ್ನಗರ

ಘಟಪ್ರಭಾ ನದಿಯಲ್ಲಿ ಯುವಕನ ದುಸ್ಸಾಹಸ: ಎಚ್ಚರಿಕೆ ನೀಡಿ ತಪ್ಪೊಪ್ಪಿಗೆ ಬರೆಸಿಕೊಂಡ ಮುಧೋಳ ಪೊಲೀಸರು

ಬಾಗಲಕೋಟೆಯ ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಯಲ್ಲಿ ಯುವಕನೊಬ್ಬನ ದುಸ್ಸಾಹಸದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ಹಿನ್ನಲೆ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವಕನನ್ನು ಪತ್ತೆ ಹಚ್ಚಿ, ಎಚ್ಚರಿಕೆ ನೀಡಿದ್ದಾರೆ.

Vijaya Karnataka Web 10 Aug 2020, 1:08 pm
ಬಾಗಲಕೋಟೆ: ಘಟಪ್ರಭಾ ನದಿಯಲ್ಲಿ ಯುವಕನ ದುಸ್ಸಾಹಸ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವಕನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
Vijaya Karnataka Web ಘಟಪ್ರಭಾ ನದಿಯಲ್ಲಿ ಯುವಕನ ದುಸ್ಸಾಹಸ


ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರೋ ಸೇತುವೆಯಲ್ಲಿ ಯುವಕ ದುಸ್ಸಾಹಸ ತೋರಿದ್ದು, ಮುಧೋಳ ಪೊಲೀಸರು ಯುವಕನನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡಿದ್ದುದಲ್ಲದೇ, ತಪ್ಪೊಪ್ಪಿಗೆಯನ್ನು ಸಹ ಆತನಿಂದ ಬರೆಸಿಕೊಂಡಿದ್ದಾರೆ.

ಮುಧೋಳದ ಜಯನಗರದ ನಿವಾಸಿ ಸದಾಶಿವ ಈತ ಮುಧೋಳ -ಯಾದವಾಡ ಸೇತುವೆ ಮೇಲಿಂದ ಪಲ್ಟಿ ಹೊಡೆದು ದುಸ್ಸಾಹಸ ತೋರಿಸಿದ್ದ. ಯುವಕನ ಈ ದುಸ್ಸಾಹಸ, ಹುಚ್ಚಾಟದ ವಿಡಿಯೋ ವೈರಲ್‌‌ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮುಧೋಳದಲ್ಲಿ ಇಂಜಿನಿಯರಿಂಗ್ ಓದುತ್ತಿರುವ ಸದಾಶಿವ (22) ನನ್ನು ವಶಕ್ಕೆ ಪಡೆದು, ಮುಧೋಳ ಪೊಲೀಸ್ ಠಾಣೆಗೆ ಯುವಕನನ್ನು ಕರೆತಂದು ವಾರ್ನಿಂಗ್ ನೀಡಿದ್ದಲ್ಲದೆ, ಸ್ಟಂಟ್ ಮಾಡುವ ಅಭ್ಯಾಸದಿಂದ ನದಿ ದಡದಲ್ಲಿ ಪಲ್ಟಿ ಹೊಡೆದಿದ್ದೆ ಎಂದು ತಪ್ಪೊಪ್ಪಿಗೆ ಬರೆಸಿಕೊಂಡಿದ್ದಾರೆ.
ಬಾಗಲಕೋಟೆ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಯುವಕನ ದುಸ್ಸಾಹಸ!

ಈ ಕುರಿತಾಗಿ ಯುವಕ, ಪಲ್ಟಿ ಹೊಡೆದ ವೇಳೆ ಯಾರೋ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆಂದು ಪೊಲೀಸರೊಂದಿಗೆ ಹೇಳಿಕೆ ನೀಡಿದ್ದಾನೆ.

ಘಟನೆ ಹಿನ್ನಲೆ
ಬಾಗಲಕೋಟೆಯ ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಯಲ್ಲಿ ಯುವಕನೊಬ್ಬನ ದುಸ್ಸಾಹಸದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಸದ್ಯ ಭಾರೀ ಮಳೆಯಾಗುತ್ತಿದ್ದು ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾನವಾಗಿದೆ. ಇಂತಹ ಅಪಾಯಕಾರಿ ಸಂದರ್ಭದಲ್ಲಿ ಯುವಕ ದುಸ್ಸಾಹಸಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಪೊಲೀಸರು ಸೂಕ್ತ ಕ್ರಮವನ್ನು ಜರುಗಿಸುವಂತೆ ಹಲವರು ಆಗ್ರಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ