ಆ್ಯಪ್ನಗರ

ಗೋವಾ ವಿರುದ್ಧ ಪ್ರಭು ಶತಕವಂಚಿತ

ಬಾಗಲಕೋಟ: ಮನೆ ಅಂಗಳದಲ್ಲಿ ಅಪ್ಪ ನಿರ್ಮಿಸಿದ ಪಿಚ್‌ನಲ್ಲಿ ಅಭ್ಯಾಸ ನಡೆಸಿ ರಾಜ್ಯ ತಂಡಕ್ಕೆ ಆಯ್ಕೆಯಾದ ಜಿಲ್ಲೆಯ ಪ್ರತಿಭಾವಂತ ಆಟಗಾರ ಪ್ರಭು ಸಸಾಲಟ್ಟಿ ಶುಕ್ರವಾರ ನಡೆದ ಪಂದ್ಯದಲ್ಲಿ 99 ರನ್‌ ಗಳಿಸಿದ್ದಾನೆ.

Vijaya Karnataka 19 Jan 2019, 5:00 am
ಬಾಗಲಕೋಟ: ಮನೆ ಅಂಗಳದಲ್ಲಿ ಅಪ್ಪ ನಿರ್ಮಿಸಿದ ಪಿಚ್‌ನಲ್ಲಿ ಅಭ್ಯಾಸ ನಡೆಸಿ ರಾಜ್ಯ ತಂಡಕ್ಕೆ ಆಯ್ಕೆಯಾದ ಜಿಲ್ಲೆಯ ಪ್ರತಿಭಾವಂತ ಆಟಗಾರ ಪ್ರಭು ಸಸಾಲಟ್ಟಿ ಶುಕ್ರವಾರ ನಡೆದ ಪಂದ್ಯದಲ್ಲಿ 99 ರನ್‌ ಗಳಿಸಿದ್ದಾನೆ.
Vijaya Karnataka Web prabhu was a century against goa
ಗೋವಾ ವಿರುದ್ಧ ಪ್ರಭು ಶತಕವಂಚಿತ


ಮಹಾಲಿಂಗಪುರ ಸಮೀಪದ ಕೆಸರಕೊಪ್ಪ ಗ್ರಾಮದ ಪ್ರಭು 14 ವರ್ಷದೊಳಗಿನ ಬಾಲಕರ ರಾಜ್ಯ ಕ್ರಿಕೆಟ್‌ ತಂಡದಲ್ಲಿ ತನ್ನ ಛಾಪು ಮೂಡಿಸಿದ್ದಾನೆ. ಗೋವಾ ವಿರುದ್ಧದ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆದ ಪ್ರಭು ಅದ್ಭುತ ಆಟ ಪ್ರದರ್ಶಿಸಿದ್ದಾನೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಗೋವಾ ವಿರುದ್ಧದ ಪಂದ್ಯದಲ್ಲಿ ಶುಕ್ರವಾರ ಪ್ರಭು 99 ರನ್‌ ಗಳಿಸಿ ಆಯ್ಕೆಗಾರರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾನೆ. ಮೊದಲು ಬ್ಯಾಟ್‌ ಮಾಡಿದ ಗೋವಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 215 ರನ್‌ ಗಳಿಸಿತ್ತು. ನಂತರ ಬ್ಯಾಟ್‌ ಮಾಡಿದ ಕರ್ನಾಟಕ ತಂಡದ ಪರ ಪ್ರಭು 135 ಬಾಲ್‌ಗಳಲ್ಲಿ 99 ರನ್‌ ಗಳಿಸಿದ್ದಾನೆ. 73.33 ಸ್ಟ್ರೈಕ್‌ ರೇಟ್‌ನೊಂದಿಗೆ ಪ್ರಭು 151 ನಿಮಿಷ ಕ್ರೀಸ್‌ನಲ್ಲಿದ್ದು ಗೋವಾ ಬೌಲರ್‌ಗಳನ್ನು ದಂಡಿಸಿದ. 10 ಬೌಂಡರಿ ಬಾರಿಸುವ ಮೂಲಕ ಪ್ರಭು ಸರ್ವಾಂಗೀಣ ಆಟ ಪ್ರದರ್ಶಿಸಿದ್ದಾನೆ. ದಿನದ ಅಂತ್ಯಕ್ಕೆ ಕರ್ನಾಟಕ ತಂಡ 306 ರನ್‌ ಗಳಿಸಿ 91 ರನ್‌ಗಳ ಲೀಡ್‌ ಪಡೆದಿದೆ. ಕರ್ನಾಟಕದ ಬ್ಯಾಟಿಂಗ್‌ನಲ್ಲಿ ಪ್ರಭು ಅತಿ ಹೆಚ್ಚು ರನ್‌ ಗಳಿಸಿದ ಆಟಗಾರನಾಗಿರುವುದು ವಿಶೇಷವಾಗಿದೆ. ವಿಕೆಟ್‌ ಕೀಪರ್‌ ಆಗಿರುವ ಪ್ರಭುಗೆ ಬ್ಯಾಟ್ಸಮನ್‌ ಆಗಿ ಪರಿಗಣಿಸಿ ಅವಕಾಶ ನೀಡಲಾಗಿದೆ. 27 ವರ್ಷಗಳ ನಂತರ ಜಿಲ್ಲೆಯಿಂದ ರಾಜ್ಯ ತಂಡಕ್ಕೆ ಆಯ್ಕೆಯಾಗಿರುವ ವಿಕೆಟ್‌ ಕೀಪರ್‌ ಎಂಬ ಹೆಗ್ಗಳಿಕೆ ಪ್ರಭುಗಿದೆ. ಇತ್ತೀಚೆಗಷ್ಟೇ ರಾಜ್ಯ ತಂಡಕ್ಕೆ ಆಯ್ಕೆಯಾದ ಪ್ರಭು ಸಾಧನೆ ಬಗ್ಗೆ ವಿಜಯ ಕರ್ನಾಟಕ 'ಇಲ್ಲೊಬ್ಬ ದಂಗಲ್‌ ಹುಡುಗ' ಎಂಬ ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಪ್ರಭು ಅತ್ಯುತ್ತಮ ಬ್ಯಾಟ್ಸಮನ್‌ ಆಗಿದ್ದಾನೆ, ಆತನ ತಾಂತ್ರಿಕತೆ ಉತ್ಕ್ರಷ್ಟವಾಗಿದೆ. ಭವಿಷ್ಯದಲ್ಲಿ ಈ ಪ್ರತಿಭಾವಂತ ರಾಜ್ಯದ ಹಿರಿಯರ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸವಿದೆ.
ರವಿ ಬಿದರಿ, ಕ್ರಿಕೆಟ್‌ ತರಬೇತುದಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ