ಆ್ಯಪ್ನಗರ

ಭವಿಷ್ಯ ಹೇಳುವುದರಿಂದ ಸರಕಾರ ನಡೆಯುವುದಿಲ್ಲ

ಬಾಗಲಕೋಟೆ: ಭವಿಷ್ಯ ಹೇಳುವುದರಿಂದ ಸರಕಾರ ನಡೆಯುವುದಿಲ್ಲಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

Vijaya Karnataka 21 Sep 2019, 5:00 am
ಬಾಗಲಕೋಟೆ: ಭವಿಷ್ಯ ಹೇಳುವುದರಿಂದ ಸರಕಾರ ನಡೆಯುವುದಿಲ್ಲಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.
Vijaya Karnataka Web predictability does not happen in government
ಭವಿಷ್ಯ ಹೇಳುವುದರಿಂದ ಸರಕಾರ ನಡೆಯುವುದಿಲ್ಲ


ಸರಕಾರ ಪತನಗೊಳ್ಳಲಿದೆ ಎಂಬ ಕೋಡಿಮಠದ ಸ್ವಾಮೀಜಿ ಹೇಳಿದ ಭವಿಷ್ಯದ ಕುರಿತು ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಿಷ್ಯ ಹೇಳುವುದರಿಂದ ಸರಕಾರ ನಡೆಯುವುದಿಲ್ಲ. ಭವಿಷ್ಯ ಸೇರಿದಂತೆ ಮತ್ತೊಂದು ವಿಷಯದ ಮೇಲೆ ಸರಕಾರ ನಿಂತಿಲ್ಲ. ಮತ್ತೊಬ್ಬ ಸ್ವಾಮೀಜಿ ಸರಕಾರ ಗಟ್ಟಿಮುಟ್ಟಾಗಿರುತ್ತದೆ ಎಂದು ಭವಿಷ್ಯ ಹೇಳುತ್ತಾರೆ. ಆಗ ಏನು ಹೇಳುತ್ತೀರಿ. ಕೋಡಿಮಠದ ಸ್ವಾಮೀಜಿ ಯಾವ ಉದ್ದೇಶದಿಂದ ಹೇಳಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸುವುದಿಲ್ಲಎಂದರು.

ರಾಜ್ಯದಲ್ಲಿನ ನೆರೆ ಪರಿಸ್ಥಿತಿಗೆ ಕೇಂದ್ರ ಸರಕಾರ ಪರಿಹಾರ ಬಿಡುಗಡೆ ಮಾಡದ ವಿಚಾರವಾಗಿ ಮಾತನಾಡಿದ ಸಚಿವರು, ಈಗಾಗಲೆ ರಾಜ್ಯ ಸರಕಾರದಿಂದ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿಯ ನಿರ್ಣಯದಂತೆ ತುರ್ತಾಗಿ ಹಣ ಬಿಡುಗಡೆ ಮಾಡಲಾಗಿದೆ. ಇಂದಲ್ಲನಾಳೆ ಕೇಂದ್ರ ಸರಕಾರ ಪರಿಹಾರ ಘೋಷಣೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಯಾವ ರಾಜ್ಯಕ್ಕೂ ಕೇಂದ್ರ ಸರಕಾರ ನೆರೆಗೆ ಪರಿಹಾರ ಘೋಷಿಸಿಲ್ಲ. ಕೇಂದ್ರ ಸಚಿವರಾದ ಅಮಿತ್‌ಶಾ ಹಾಗೂ ನಿರ್ಮಲಾ ಸೀತಾರಾಮನ್‌ ರಾಜ್ಯದ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಕೇಂದ್ರ ಅಧ್ಯಯನ ತಂಡವೂ ಭೇಟಿ ನೀಡಿ ವರದಿ ಪಡೆದಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು ಕೇಂದ್ರ ಸರಕಾರ ಶೀಘ್ರವೇ ಪರಿಹಾರ ಘೋಷಿಸುವ ನಿರೀಕ್ಷೆಯಿದೆ. ಆ ನಿರೀಕ್ಷೆಯೊಂದಿಗೆ ರಾಜ್ಯದಿಂದ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ