ಆ್ಯಪ್ನಗರ

ರಾಷ್ಟ್ರಪಕ್ಷಿ ರಕ್ಷಿಸಿದ ಅಧಿಕಾರಿಗಳು

ಬಾಗಲಕೋಟ : ಅನಾರೋಗ್ಯಪೀಡಿತವಾಗಿದ್ದ ರಾಷ್ಟ್ರಪಕ್ಷಿ ನವಿಲಿಗೆ ಚಿಕಿತ್ಸೆ ಒದಗಿಸಿ ಜೀವ ರಕ್ಷಿಸುವಲ್ಲಿ ಜಿಲ್ಲೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

Vijaya Karnataka 12 Jun 2018, 5:00 am
ಬಾಗಲಕೋಟ : ಅನಾರೋಗ್ಯಪೀಡಿತವಾಗಿದ್ದ ರಾಷ್ಟ್ರಪಕ್ಷಿ ನವಿಲಿಗೆ ಚಿಕಿತ್ಸೆ ಒದಗಿಸಿ ಜೀವ ರಕ್ಷಿಸುವಲ್ಲಿ ಜಿಲ್ಲೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
Vijaya Karnataka Web presidential rescue officers
ರಾಷ್ಟ್ರಪಕ್ಷಿ ರಕ್ಷಿಸಿದ ಅಧಿಕಾರಿಗಳು


ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಬಳಿ ಅನಾರೋಗ್ಯದಿಂದ ಬಳಲಿದ್ದ ನವಿಲನ್ನು ರಕ್ಷಿಸಲಾಗಿದೆ. ಕೆರಕಲಮಟ್ಟಿಯ 220 ಕೆವಿ ವಿದ್ಯುತ್‌ ಕೇಂದ್ರದ ಬಳಿ 20ಕ್ಕೂ ಹೆಚ್ಚು ನವಿಲುಗಳಿವೆ. ಈ ಪೈಕಿ ನವಿಲೊಂದು ತೀವ್ರವಾಗಿ ಅಸ್ವಸ್ಥಗೊಂಡು ಕೇಂದ್ರದ ಹಿಂಭಾಗದ ಗಿಡದಲ್ಲಿ ಆಶ್ರಯ ಪಡೆದಿತ್ತು. ನವಿಲಿನ ಸ್ಥಿತಿ ಗಮನಿಸಿದ ಕಾವಲುಗಾರ ಸಂತೋಷ ಪಡಸಲಗಿ ಈ ಕುರಿತು ವಿಜಯ ಕರ್ನಾಟಕಕ್ಕೆ ಮಾಹಿತಿ ನೀಡಿದರು.

ನವಿಲಿಗೆ ಚಿಕಿತ್ಸೆ ಒದಗಿಸುವಂತೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಂ ಅವರಿಗೆ ಮಾಹಿತಿ ನೀಡಿದಾಗ ಅವರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಡಿಎಫ್‌ಒ ಬಸವರಾಜಯ್ಯ ಮಾರ್ಗದರ್ಶನದಲ್ಲಿ ಎಸಿಎಫ್‌ಒ ರಘುನಾಥ, ಬಾದಾಮಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಈ ಮಧ್ಯೆ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಪ್ರಕಾಶ ಜೋಶಿ ನವಿಲಿಗೆ ಚಿಕಿತ್ಸೆ ಒದಗಿಸಲು ವೈದ್ಯರಿಗೆ ಸೂಚನೆ ನೀಡಿದರು. ಕೆರಕಲಮಟ್ಟಿಯಿಂದ ನವಿಲು ತಂದ ಅಧಿಕಾರಿಗಳು ಬಾಗಲಕೋಟದಲ್ಲಿ ಚಿಕಿತ್ಸೆ ಒದಗಿಸಿದರು. ಸದ್ಯ ನವಿಲನ್ನು ಬಾದಾಮಿಯ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಆರೈಕೆ ಮಾಡಲಾಗುತ್ತಿದೆ. ನಂತರ ಅರಣ್ಯಕ್ಕೆ ಬಿಡಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ