ಆ್ಯಪ್ನಗರ

ವಶಪಡಿಸಿಕೊಂಡ ದಿಮ್ಮೆಗಳ ರಕ್ಷ ಕರಾರು?

ಇಳಕಲ್‌: ಸರಕಾರಿ ಜಮೀನಿನಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯಲ್ಲಿ ವಿಜಯಪುರ ಲೋಕಾಯುಕ್ತರು ನಡೆಸಿದ ದಾಳಿಯ ಪರಿಶೀಲನೆಯಲ್ಲಿ ವಶಪಡಿಸಿಕೊಂಡ 485 ಖಂಡಾ ಕಲ್ಲುಗಳನ್ನು ಹಾಗೂ 19 ಬೃಹತ್‌ ದಿಮ್ಮೆಗಳು ಇಂದಿಗೂ ಹೆದ್ದಾರಿ ಬದಿಯಲ್ಲೇ ಬಿದ್ದಿದ್ದು, ಅವುಗಳ ರಕ್ಷ ಕರಾರು ಎಂಬ ಪ್ರಶ್ನೆ ಉಂಟಾಗಿದೆ.

Vijaya Karnataka 3 Nov 2018, 5:00 am
ಇಳಕಲ್‌: ಸರಕಾರಿ ಜಮೀನಿನಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯಲ್ಲಿ ವಿಜಯಪುರ ಲೋಕಾಯುಕ್ತರು ನಡೆಸಿದ ದಾಳಿಯ ಪರಿಶೀಲನೆಯಲ್ಲಿ ವಶಪಡಿಸಿಕೊಂಡ 485 ಖಂಡಾ ಕಲ್ಲುಗಳನ್ನು ಹಾಗೂ 19 ಬೃಹತ್‌ ದಿಮ್ಮೆಗಳು ಇಂದಿಗೂ ಹೆದ್ದಾರಿ ಬದಿಯಲ್ಲೇ ಬಿದ್ದಿದ್ದು, ಅವುಗಳ ರಕ್ಷ ಕರಾರು ಎಂಬ ಪ್ರಶ್ನೆ ಉಂಟಾಗಿದೆ.
Vijaya Karnataka Web protective receipt of captured commandments
ವಶಪಡಿಸಿಕೊಂಡ ದಿಮ್ಮೆಗಳ ರಕ್ಷ ಕರಾರು?


ಗೋನಾಳ ಎಸ್‌ಬಿ ಗ್ರಾಮದ ರಿ.ಸ.ನಂ.27/1ಎ ದಲ್ಲಿ ವಶಪಡಿಸಿಕೊಂಡ 19 ದಿಮ್ಮೆಗಳು ಹಾಗೂಸಿ.ಟಿ.ಎಸ್‌.ನಂ.4242/ಡಿ1ಎಚ್‌ದಲ್ಲಿ ವಶಪಡಿಸಿಕೊಂಡ 485 ಗ್ರಾನೈಟ್‌ ದಿಮ್ಮೆಗಳನ್ನು 2014 ಜು.18ರಂದು ತಾಲೂಕು ಟಾಸ್ಕರ್‌ ಫೋರ್ಸ್‌ ಸಮಿತಿ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ನಡೆಸಿದ ದಾಳಿಯಲ್ಲಿ ವಶಪಡಿಸಿಕೊಂಡಿತ್ತು.

ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವಿಲೇವಾರಿ ಮಾಡುವ ಕುರಿತು ಹಾಗೂ ಕ್ರಮ ಜರುಗಿಸಲು ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು. ಜತೆಗೆ ಬಾಗಲಕೋಟ ಜಿಲ್ಲಾಧಿಕಾರಿ ಅಧ್ಯಕ್ಷ ತೆಯಲ್ಲಿ ಜರುಗಿದ ಜಿಲ್ಲಾ ಸಮಿತಿ ಸಭೆಯಲ್ಲಿಯೂ ಕೂಡಾ ಅನಧಿಕೃತ ಕಲ್ಲುಗಳ ಬಗ್ಗೆ ನಿಯಮಾನುಸಾರ ವಿಲೇವಾರಿ ಮಾಡಲು ಸೂಚನೆ ನೀಡಿದಾಗ್ಯೂ ಯಾವುದೇ ಕ್ರಮ ಜರುಗಿಸಿಲ್ಲ, ಕಲ್ಲುಗಳು ಸಹ ವಿಲೇವಾರಿಯಾಗಿಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ದಿಮ್ಮೆಗಳನ್ನು ಕಾಯುವವರಾರ‍ಯರು?


ಭಾರೀ ಬೃಹದಾಕಾರವಾದ ಕಲ್ಲು ದಿಮ್ಮೆಗಳು 4-5 ವಷಗಳಿಂದ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದಲ್ಲಿ ಬಿದ್ದಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇಂದಿಗೂ ಸುರಕ್ಷಿತ ಸ್ಥಳಕ್ಕೆ ಸಾಗಣೆ ಮಾಡಿಲ್ಲ, ವಿಲೇವಾರಿಯನ್ನೂ ಮಾಡಿಲ್ಲ.

ಅವುಗಳನ್ನುಯಾರು ಯಾವ ಸಮಯದಲ್ಲಿ ಸಾಗಿಸಿದರೂ ಯಾರಿಗೂ ತಿಳಿಯದು, ಏಕೆಂದರೆ ದಟ್ಟವಾಗಿ ಹರಡಿದ ಜಾಲಿ ಕಂಟಿಯಲ್ಲಿ ಬಿದ್ದುಹೋದ ಬೃಹತ್‌ ಕಲ್ಲು ದಿಮ್ಮೆಗಳನ್ನು ಇಲಾಖೆ ಸಾಗಿಸುವ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಡಿಎಂಜಿ ಇಲಾಖೆ ನಿರ್ಲಕ್ಷ ್ಯ

ಜಿಲ್ಲಾ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ನಿರ್ಲಕ್ಷ ್ಯ ಧೋರಣೆಯಿಂದಾಗಿ ಲಕ್ಷಾಂತರ ಬೆಲೆಬಾಳುವ ಕಲ್ಲು ದಿಮ್ಮೆಗಳು ಬಿದ್ದಿದ್ದರೂ ಯಾರೂ ಕೇಳೋರಿಲ್ಲ, ಕಲ್ಲು ದಿಮ್ಮೆಗಳು ದೊರೆಯದ್ದರಿಂದ ಅದೆಷ್ಟೋ ಗ್ರಾನೈಟ್‌ ಫ್ಯಾಕ್ಟರಿಗಳು ಬಂದ್‌ ಆಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ