ಆ್ಯಪ್ನಗರ

ರನ್ನ ಸಕ್ಕರೆ ಕಾರ್ಖಾನೆ ಉಳಿವಿಗಾಗಿ ಒತ್ತಾಯಿಸಿ ಮುಧೋಳದಲ್ಲಿ ರೈತರಿಂದ ಪ್ರತಿಭಟನೆ

ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭಿಸಬೇಕು, ರೈತರ ಬಿಲ್‌, ಕಾರ್ಮಿಕರ 8 ತಿಂಗಳ ವೇತನ ಪಾವತಿಸಬೇಕು ಎಂಬ ಬೇಡಿಕೆ ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾನಾ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

Vijaya Karnataka Web 16 Jul 2021, 7:47 pm
ಮುಧೋಳ (ಬಾಗಲಕೋಟೆ): ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭ, ರೈತರ ಬಿಲ್‌, ಕಾರ್ಮಿಕರ 8 ತಿಂಗಳ ವೇತನ ಪಾವತಿ ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾನಾ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದು ನಂತರ ತಹಸೀಲ್ದಾರ್‌ ಸಂಗಮೇಶ ಬಾಡಗಿವರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web Ranna Sugar Factory

ಮುಧೋಳದಲ್ಲಿ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರರಾಂಭಿಸಬೇಕೆಂದು ಒತ್ತಾಯಿಸಿ ನಾನಾ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.


ಜನಸಾಮಾನ್ಯರ ಪಕ್ಷದ ರಾಜ್ಯಾಧ್ಯಕ್ಷ ಯಲ್ಲಪ್ಪ ಹೆಗಡೆ ಮಾತನಾಡಿ, ರನ್ನ ಕಾರ್ಖಾನೆ ಆಡಳಿತ ಮಂಡಳಿಯನ್ನು ಕೂಡಲೇ ರದ್ದುಪಡಿಸಿ, ಸರಕಾರ ಕಾರ್ಖಾನೆ ಆರಂಭಿಸಬೇಕು. ರೈತರು, ಕಾರ್ಮಿಕರಿಗೆ ಬಾಕಿ ಪಾವತಿ ಮಾಡಬೇಕು. ಡಿಸಿಎಂ ಗೋವಿಂದ ಕಾರಜೋಳರು ಕೂಡಲೇ ಕಾರ್ಖಾನೆಗೆ ಅನುದಾನ ಮಂಜೂರಾತಿ ನೀಡಿ ರೈತರ, ಕಾರ್ಮಿಕರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ನಾಗೇಶ ಗೋಲಶೆಟ್ಟಿ, ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಪ್ರಕಾಶ ಕಬ್ಬೂರ, ರೈತ ಮುಖಂಡ ಸಂಗಪ್ಪ ನಾಗರಡ್ಡಿ, ಈರಪ್ಪ ಹಂಚಿನಾಳ ಕಾರ್ಖಾನೆ ಆರಂಭಕ್ಕೆ ಆಗ್ರಹಿಸಿದರು.


ಬೇಡಿಕೆಗಳೇನು?

ಪ್ರಸಕ್ತ ವರ್ಷದ ಹಂಗಾಮು ಆರಂಭಿಸಬೇಕು, ಕಾರ್ಮಿಕರಿಗೆ 6 ನೇ ವೇತನ ಆಯೋಗದಂತೆ ವೇತನ ಜಾರಿಗೆಯಾಗಬೇಕು. ಸಹಕಾರಿ ರಂಗದಲ್ಲಿ ಕಾರ್ಖಾನೆ ಮುಂದುವರಿಸಬೇಕು. ಆಡಳಿತ ಮಂಡಳಿ ರದ್ದುಪಡಿಸಿ ಹೊಸ ಆಡಳಿತ ಮಂಡಳಿ ರಚಿಸಬೇಕು. ರೈತರ ಹಾಗೂ ಕಾರ್ಮಿಕರ ಹಿತ ಕಾಪಾಡಬೇಕು ಎಂಬುದು ರೈತರ ಬೇಡಿಕೆಯಾಗಿದೆ.


ಭೀಮ ಆರ್ಮಿ ತಾಲೂಕು ಅಧ್ಯಕ್ಷ ಲೋಹಿತ ಮೇತ್ರಿ, ಸುನೀಲ ಕಂಬೋಗಿ, ಜೆಡಿಎಸ್‌ ಮುಖಂಡ ಡಾ.ರವಿಂದ್ರ ಲಕ್ಷಣ್ಣವರ, ಗೋವಿಂದಪ್ಪ ಮೆಟಗುಡ್ಡ, ಬಸಪ್ಪ ಸಂಗನ್ನವರ, ಗಂಗಾಧರ ಮೇಟಿ, ಸಂಜು ಕುರೆನ್ನವರ, ಕಾಳಪ್ಪ ಕಂಬಾರ, ಸೋಮಲಿಂಗ ಮಧುರಖಂಡಿ ಇತರರಿದ್ದರು. ಸಿಪಿಐ ಎಚ್‌.ಆರ್‌.ಪಾಟೀಲ, ಎಸೈ.ದಿನೇಶ ಜವಳೇಕರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ