ಆ್ಯಪ್ನಗರ

ಹರಿಸೇವೆಗೆ ಕ್ವಿಂಟಲ್‌ ಲೆಕ್ಕದ ಕಡುಬು

ಕಲಾದಗಿ: ಸಮೀಪದ ಪ್ರಸಿದ್ಧ ಪವಮಾನ ಕ್ಷೇತ್ರವಾದ ಹನುಮಂತದೇವರ ಓಕುಳಿ ಮೇ 13 ರಂದು ಸಂಜೆ 5 ಗಂಟೆ ಸುಮಾರಿಗೆ ನಡೆಯಲಿದ್ದು, ಇದರ ಪೂರ್ವಚಾರಣೆಯಾಗಿ 'ಹರಿಸೇವೆ' ಎಂಬ ವಿಶಿಷ್ಠ ಆಚರಣೆ ಭಾನುವಾರ ನಡೆಯಿತು.

Vijaya Karnataka 13 May 2019, 5:00 am
ಕಲಾದಗಿ: ಸಮೀಪದ ಪ್ರಸಿದ್ಧ ಪವಮಾನ ಕ್ಷೇತ್ರವಾದ ಹನುಮಂತದೇವರ ಓಕುಳಿ ಮೇ 13 ರಂದು ಸಂಜೆ 5 ಗಂಟೆ ಸುಮಾರಿಗೆ ನಡೆಯಲಿದ್ದು, ಇದರ ಪೂರ್ವಚಾರಣೆಯಾಗಿ 'ಹರಿಸೇವೆ' ಎಂಬ ವಿಶಿಷ್ಠ ಆಚರಣೆ ಭಾನುವಾರ ನಡೆಯಿತು.
Vijaya Karnataka Web quintal accounting pie for harvard
ಹರಿಸೇವೆಗೆ ಕ್ವಿಂಟಲ್‌ ಲೆಕ್ಕದ ಕಡುಬು


ಆಹಾ..ಕಡುಬು:

ಭಾನುವಾರ ನಡೆದ 'ಹರಿಸೆವೆ' ಆಚರಣೆಯ ಪ್ರಸಾದಕ್ಕೆಂದು ಪ್ರತಿಬಾರಿಯಂತೆ ಊರಿನ ನೂರಾರು ಬಹುತೇಕ ಮಹಿಳೆಯರು,ಪುರುಷರು ಕೂಡಿ ತಯಾರಿಸಿದ್ದು,ಬರೋಬರ್ರೀ ಎಂಟ್ಹತ್ತು ಕ್ವಿಂಟ್ವಾಲ್‌ ಬೇಳೆ ಹಿಟ್ಟಿನ ಕಡುಬುಗಳನ್ನು!. ಭಾನುವಾರ ಬೆಳಗ್ಗೆ 10 ರ ಹೊತ್ತಿಗೆ ಪ್ರಾರಂಭವಾದ ಕಡುಬು ತಯಾರಿಕೆ ಸಂಜೆ 4 ವರೆಗೂ ಅವ್ಯಾಹತವಾಗಿ ನಡೆಯಿತು.

ನೂರಾರು ಸಂಖ್ಯೆಯಲ್ಲಿ ಊರಿನ ಹೆಂಗಳೆಯರು, ಹಿರಿಯರು ಮಕ್ಕಳು ಕಡುಬಿನ ಹಿಟ್ಟು ಲಟ್ಟಿಸಿಕೊಡುವಲ್ಲಿ, ಸಂಭ್ರಮದಿಂದ ಪಾಲ್ಗೊಂಡಿದ್ದರೆ, ಊರಿನ ಗಂಡುಮಕ್ಕಳು ಸಹ ಕಡುಬು ಕರಿಯುವ ಕೆಲಸದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.ಇದಕ್ಕೆ ಬೇಕಾದ ಹೂರಣವನ್ನು ಶನಿವಾರ ರಾತ್ರಿಯೃ ಸಿದ್ಧಪಡಿಸಲಾಗಿತ್ತು.

ಸಂಜೆ ಮಾರುತೇಶ್ವರನಿಗೆ, ಬೆಣ್ಣಪ್ಪದೇವರಿಗೆ ದೊಡ್ಡದಾದ ಐದು ಕಡುಬುಗಳ ನೈವೇದ್ಯ ಮಾಡಲಾಯಿತು. ಬಾಬುದಾರರಾದ ಐದು ಮನೆಗಳ ಗಂಡು ಮುತೈದೆಯರಿಗೆ ಗೌರವಾಚರಣೆಗಳು ನಡೆದು, ಆನಂತರ ಸಾವಿರಾರು ಮಂದಿ ಕಡುಬಿನ ಪ್ರಸಾದವನ್ನು ಸವಿದರು.

ಇಂದು ಓಕುಳಿ:

ಮೇ 13ರ ಸಂಜೆ ಶ್ರೀ ಮಾರುತೇಶ್ವರ ಓಕುಳಿ ಸಂಪ್ರದಾಯದಂತೆ ಸ್ಥಳೀಯರನ್ನೊಳಗೊಂಡಂತೆ ಅಕ್ಕಪಕ್ಕದೂರುಗಳ ಹಾಗೂ ದೂರದೂರುಗಳಿಂದ ಆಗಮಿಸುವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ