ಆ್ಯಪ್ನಗರ

ರಾಹುಲ್‌ ಗಾಂಧಿಯೇ ಮುಂದಿನ ಪ್ರಧಾನಿ: ಸಿದ್ದರಾಮಯ್ಯ

ಈಗ ಕೆಲವರು ಸಂವಿಧಾನ ಬದಲಾವಣೆ ಆಗ್ಬೇಕಂತಾರೆ. ಬಿ ಕೇರ್ ಫುಲ್ ಅಬೌಟ್ ಇಟ್. ಸಂವಿಧಾನ ಬದಲಾವಣೆ ಮಾಡೋದು ಸಾಧ್ಯನೇ ಇಲ್ಲ. ದಾರಿ ತಪ್ಪಿಸಿ, ಹಿಂದುಗಳ ವಿರುದ್ಧ ಮುಸ್ಲಿಮರು, ಕ್ರಿಶ್ಚಿಯನ್‌ರನ್ನು ಎತ್ತಿಕಟ್ಟುವ ತಂತ್ರವಿದು.

Vijaya Karnataka Web 21 Feb 2019, 9:04 pm
ಬಾಗಲಕೋಟ: ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದ್ದಾರೆ.
Vijaya Karnataka Web ಸಿದ್ದರಾಮಯ್ಯ
ಸಿದ್ದರಾಮಯ್ಯ


ಜಿಲ್ಲೆಯ ಬಾದಾಮಿಯಲ್ಲಿ ಗುರುವಾರ ಗಂಗಾಮತಸ್ಥರ ಜಿಲ್ಲಾ ಮಟ್ಟದ ಸಮಾವೇಶ ದಲ್ಲಿ ಮಾತನಾಡಿದ ಅವರು, ರಾಹುಲ್ ಪ್ರಧಾನಿಯಾಗಲಿದ್ದಾರೆ ಎಂದು ಆತ್ಮವಿಶ್ವಾಸ ದಿಂದ ಹೇಳಿದರು.

ರಾಹುಲ್ ಗಾಂಧಿ ಪ್ರೈ ಮಿನಿಸ್ಟರ್ ಆಗ್ತಾರೆ. ಆಗ ಗಂಗಾಮತಸ್ಥ ಅಂಬಿಗರ ಸಮಾಜ ಎಸ್ಟಿ ಗೆ ಸೇರಿಸಲು ಪ್ರಯತ್ನಿಸುತ್ತೇನೆ. ನಾನು ಸಿಎಂ ಆದ್ಮೇಲೆ ಅಂಬಿಗರ ಸಮಾಜ ಎಸ್ಟಿ ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿದ್ದೆ. ಆದರೆ ದುರಾದೃಷ್ಟವಶಾತ್ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಎಸ್ಟಿ ಗೆ ಸೇರಿಸಿಲ್ಲ ಎಂದರು.

ರಾಜ್ಯ ಸರ್ಕಾರ ಕೇವಲ ಶಿಫಾರಸು ಮಾಡೋ ಅಧಿಕಾರವಿದೆ. ನಾನೇ ಮಾಡೋ ಹಾಗಿದ್ರೆ ಹೊಡೆದು ಬಿಸಾಕಿ ಬಿಡುತ್ತಿದ್ದೆ. ನಾನು ಅನೇಕ ಸಾರಿ ದೆಹಲಿಗೆ ಹೋಗಿದ್ದಾಗ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೆ ಆಗಲಿಲ್ಲ. ಮುಂದೆ ರಾಹುಲ್ ಗಾಂಧಿ ಪ್ರಧಾನಿಮಂತ್ರಿ ಆಗುವ ಸಾಧ್ಯತೆಯಿದೆ. ಆಗ ಸೇರ್ಪಡೆಗೊಳಿಸೋಣ ಎಂದು ಸಿದ್ದರಾಮಯ್ಯ ತಿಳಿಸಿದರು.

ಈಗ ಕೆಲವರು ಸಂವಿಧಾನ ಬದಲಾವಣೆ ಆಗ್ಬೇಕಂತಾರೆ. ಬಿ ಕೇರ್ ಫುಲ್ ಅಬೌಟ್ ಇಟ್. ಸಂವಿಧಾನ ಬದಲಾವಣೆ ಮಾಡೋದು ಸಾಧ್ಯನೇ ಇಲ್ಲ. ದಾರಿ ತಪ್ಪಿಸಿ, ಹಿಂದುಗಳ ವಿರುದ್ಧ ಮುಸ್ಲಿಮರು, ಕ್ರಿಶ್ಚಿಯನ್‌ರನ್ನು ಎತ್ತಿಕಟ್ಟುವ ತಂತ್ರವಿದು. ಅದರಿಂದ ಸಮಾಜ ಉದ್ಧಾರವಾಗೋಲ್ಲ. ಹಿಂದುತ್ವದ ಹೆಸರಿನಲ್ಲಿ ಸಮಾಜ ಉದ್ಧಾರವಾಗೋಲ್ಲ ಎಂದು ತಿಳಿಸಿದರು.

ಎಲ್ಲರಿಗೂ ನ್ಯಾಯ ಸಿಗಬೇಕಾದರೆ. ಅಧಿಕಾರ,ಸಂಪತ್ತಿನಲ್ಲಿ ಶಿಕ್ಷಣದಲ್ಲಿ ಪಾಲು ಸಿಕ್ಕಿದಾಗ ಮಾತ್ರ ಎಲ್ಲರೂ ಮೇಲೆ ಬರೋದಕ್ಕೆ ಸಾಧ್ಯ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ವಿರುದ್ಧ ಸಿದ್ದರಾಮಯ್ಯ ಪರೋಕ್ಷ ದಾಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ