ಆ್ಯಪ್ನಗರ

ಬಾಗಲಕೋಟೆ ಜಿಲ್ಲೆಯಾದ್ಯಂತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ

ಬಾಗಲಕೋಟೆ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಶನಿವಾರ ಮಳೆಯ ಆರ್ಭಟ ಜೋರಾಗಿತ್ತು. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು ಮಾತ್ರವಲ್ಲ, ಹಿಂಗಾರು ಬಿತ್ತನೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

Vijaya Karnataka 21 Oct 2019, 1:14 pm
ಬಾಗಲಕೋಟೆ: ಕಳೆದ ಒಂದು ವಾರದಿಂದ ಮುಂದುವರಿದಿರುವ ವರ್ಷಧಾರೆ ಜಿಲ್ಲೆಯಲ್ಲಿ ಶನಿವಾರ ಮತ್ತೆ ಸುರಿದಿದ್ದು, ಒಂದೆಡೆ ಜನಜೀವನ ಅಸ್ತವ್ಯಸ್ತಗೊಂಡರೆ, ಮತ್ತೊಂದೆಡೆ ಹಿಂಗಾರು ಬಿತ್ತನೆಗೆ ಹಿನ್ನಡೆಯಾಗುವ ಆತಂಕ ಎದುರಾಗಿದೆ.
Vijaya Karnataka Web RAIN-BGK-19-3_41


ಜಿಲ್ಲೆಯಾದ್ಯಂತ ಶುಕ್ರವಾರ ಮಧ್ಯರಾತ್ರಿ 12 ಗಂಟೆಯಿಂದ ಆರಂಭಗೊಂಡ ಮಳೆ ಬೆಳಗ್ಗೆ 6ರವರೆಗೆ ಸುರಿದಿದೆ. ಭಾರಿ ಮಳೆಯಿಂದಾಗಿ ಎಲ್ಲೆಡೆ ತಂಪು ವಾತಾವರಣವಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಮೀನಗಡ, ಬೇವೂರ, ಗುಳೇದಗುಡ್ಡ, ಮುಧೋಳ ಸೇರಿದಂತೆ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿಸತತ ಮಳೆಯಾಗಿದೆ.

ಭಾರಿ ವರ್ಷಧಾರೆಗೆ ತಗ್ಗು ಪ್ರದೇಶಗಳಲ್ಲಿನೀರು ಆವರಿಸಿದೆ. ಹಲವೆಡೆ ರಸ್ತೆ ಪಕ್ಕದ ಹೊಲಗಳಿಂದ ಹರಿದು ಬಂದ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಬಾಗಲಕೋಟೆ ನಗರದಲ್ಲಿಬೆಳಗಿನ ಜಾವ 3 ಗಂಟೆಯಿಂದ 6 ಗಂಟೆಯವರೆಗೆ ಭರ್ಜರಿ ಮಳೆಯಾಗಿದೆ. ನಗರದ ದಡ್ಡೇನವರ ಕ್ರಾಸ್‌ ಬಳಿಯ ಕಟ್ಟಿ ಆಸ್ಪತ್ರೆ, ನಾಗಠಾಣ ಆಸ್ಪತ್ರೆಗಳಿಗೆ ನೀರು ನುಗ್ಗಿ ರೋಗಿಗಳು ತೊಂದರೆ ಅನುಭವಿಸಬೇಕಾಯಿತು. ಆಸ್ಪತ್ರೆಗಳ ಪಕ್ಕದ ಖಾಲಿ ಜಾಗೆಯಲ್ಲಿಸಂಗ್ರಹಗೊಂಡಿದ್ದ ನೀರು ನೆಲ ಮಹಡಿಗೆ ನುಗ್ಗಿದ್ದರಿಂದ ಸಂಕಷ್ಟ ಪಡುವಂತಾಗಿದೆ.

ಸಾಮಗ್ರಿಗಳಿಗೆ ಹಾನಿ

ಇದರಿಂದಾಗಿ ಆಸ್ಪತ್ರೆಯ ನೆಲ ಮಹಡಿಯಲ್ಲಿದ್ದ ಔಷಧಗಳು, ಫಿಸಿಯೋಥೆರಪಿ ಸಾಮಗ್ರಿಗಳು ಹಾನಿಗೊಳಗಾಗಿವೆ. ಧುಮ್ಮಿಕ್ಕಿ ನೀರು ಹರಿದಿದಿದ್ದರಿಂದ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲಾಯಿತು. ನಗರಸಭೆಯ ಜೆಸಿಬಿ ವಾಹನದ ಮೂಲಕ ನೀರು ಹೊರ ಹೋಗಲು ದಾರಿ ಮಾಡಲಾಯಿತು. ಏಕಾಏಕಿ ನುಗ್ಗಿದ ನೀರಿನಿಂದ ವೈದ್ಯರು, ರೋಗಿಗಳು ಪರದಾಡಬೇಕಾಯಿತು. ಶಾಸಕ ವೀರಣ್ಣ ಚರಂತಿಮಠ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೌರಾಯುಕ್ತ ಗಣಪತಿ ಪಾಟೀಲ ಸೇರಿದಂತೆ ಅಧಿಕಾರಿಗಳು ಸ್ಥಳದಲ್ಲಿದ್ದರು. ಭಾರಿ ಮಳೆಯಿಂದಾಗಿ ವಿದ್ಯಾಗಿರಿಯ ಮಹಾರಾಜಾ ಕ್ರಾಸ್‌ ಬಳಿಯ ರಸ್ತೆಯಲ್ಲಿನೀರು ಆವರಿಸಿ ಕೆಸರಿನ ಗದ್ದೆಯಂತಾಗಿತ್ತು.

ಮಳೆಯಿಂದಾಗಿ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜಿನಲ್ಲಿಆಯೋಜಿಸಲಾಗಿದ್ದ ದಕ್ಷಿಣ ವಲಯದ ಸಿಬಿಎಸ್‌ಇ ಶಾಲೆಗಳ ಹಾಕಿ ಪಂದ್ಯಾವಳಿಗೆ ತೊಂದರೆಯಾಯಿತು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತರ್‌ ಕಾಲೇಜುಗಳ ಕ್ರೀಡಾಕೂಟವೂ ಅಸ್ತವ್ಯಸ್ತಗೊಂಡಿತು. ಹೊರಾಂಗಣ ಕ್ರೀಡೆಗಳ ಬದಲು ಒಳಾಂಗಣ ಸ್ಪರ್ಧೆಗಳನ್ನು ಮಾತ್ರ ಆಯೋಜಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ