ಆ್ಯಪ್ನಗರ

ಜಿಲ್ಲೆಯಲ್ಲಿಮಳೆ ಜೋರು

ಬಾಗಲಕೋಟೆ: ಕಳೆದೆರಡು ದಿನದಿಂದ ಜಿಲ್ಲೆಯ ಹಲವು ಭಾಗದಲ್ಲಿಮಳೆ ಸುರಿಯುತ್ತಿದ್ದು ಭುವಿಗೆ ತಂಪೆರೆದಿದೆ.

Vijaya Karnataka 20 Sep 2019, 5:00 am
ಬಾಗಲಕೋಟೆ: ಕಳೆದೆರಡು ದಿನದಿಂದ ಜಿಲ್ಲೆಯ ಹಲವು ಭಾಗದಲ್ಲಿಮಳೆ ಸುರಿಯುತ್ತಿದ್ದು ಭುವಿಗೆ ತಂಪೆರೆದಿದೆ.
Vijaya Karnataka Web rain in the bagalkot district
ಜಿಲ್ಲೆಯಲ್ಲಿಮಳೆ ಜೋರು


ಜಿಲ್ಲೆಯ ಚಿಮ್ಮಡ, ಮುಧೋಳ, ಗುಳೇದಗುಡ್ಡ, ಅಮೀನಗಡ, ಕಮತಗಿ, ಶಿರೂರು, ಕಲಾದಗಿ ಸೇರಿದಂತೆ ಹಲವು ಭಾಗದಲ್ಲಿಬುಧವಾರ ಸಂಜೆಯಿಂದ ಪ್ರಾರಂಭವಾದ ಮಳೆ ರಾತ್ರಿಯಿಡೀ ಸುರಿದಿದೆ.

ಜಿಲ್ಲೆಯಲ್ಲಿನೆರೆ ಹಾವಳಿಗೆ ತುತ್ತಾಗಿ ಜನ ಕಂಗಾಲಾಗಿದ್ದು ಒಂದೆಡೆಯಾದರೆ ಮಳೆಯಿಲ್ಲದೆ ಕೆಲ ಭಾಗದಲ್ಲಿಬರ ಆವರಿಸಿತ್ತು. ರೈತಾಪಿ ವರ್ಗ ಸೇರಿದಂತೆ ಜನತೆ ಮಳೆಗಾಗಿ ಕಾಯುವಂತಾಗಿತ್ತು. ಸದ್ಯಕ್ಕೆ ಮಳೆ ಆದರೆ ಬಿಳಿಜೋಳ ಬಿತ್ತನೆಗೆ ಅನುಕೂಲವಾಗಲಿದೆ ಎಂಬ ಮಾತು ಕೇಳಿ ಬಂದಿತ್ತು.

ಹೀಗಾಗಿ ಜಿಲ್ಲೆಯ ಹಲವು ಭಾಗದಲ್ಲಿಬುಧವಾರ ಹಾಗೂ ಗುರುವಾರ ಸುರಿದ ಮಳೆ ರೈತರಲ್ಲಿಸಂತಸವನ್ನುಂಟು ಮಾಡಿದೆ. ಗುರುವಾರ ಬೆಳಗ್ಗೆಯಿಂದಲೇ ಪ್ರಾರಂಭವಾದ ಜಿಟಿಜಿಟಿ ಮಳೆ ಕೆಲ ಭಾಗದಲ್ಲಿಜೋರಾಗಿಯೇ ಸುರಿದಿದೆ. ಜಿಲ್ಲೆಯ ಹುನಗುಂದ ನಗರದಲ್ಲಿಗುರುವಾರ ಸಂಜೆ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳನ್ನು ನೀರು ಹೊಕ್ಕು ತೊಂದರೆ ಅನುಭವಿಸುವಂತಾಯಿತು. ಅಂದಾಜು 60ಕ್ಕೂ ಹೆಚ್ಚು ಮನೆಗಳಿಗೆ ಸಣ್ಣ ಪ್ರಮಾಣದಲ್ಲಿನೀರು ನುಗ್ಗಿತ್ತು. ವಾಣಿಪೇಟೆ ಹಾಗೂ ಕುಂಬಾರಗಲ್ಲಿಯ ಕೆಲ ಮನೆಗಳಿಗೆ ನೀರು ನುಗ್ಗಿತ್ತು.

ಶಿರೂರು, ನೀಲಾನಗರ, ಬೆನಕಟ್ಟಿ, ಅಮೀನಗಡ, ಬೇವೂರ, ಮಹಾಲಿಂಗಪುರ, ಮುಧೋಳ, ಚಿಮ್ಮಡ ಭಾಗದಲ್ಲಿಮಳೆ ಆದರೆ, ಸಾವಳಗಿ ಸೇರಿದಂತೆ ಕೆಲ ಭಾಗದಲ್ಲಿಮೋಡ ಕವಿದ ವಾತಾವರಣ ಮುಂದುವರೆದಿತ್ತು. ಹಳೆ ಬಾಗಲಕೋಟೆ, ವಿದ್ಯಾಗಿರಿ, ನವನಗರ ಭಾಗದಲ್ಲೂಬೆಳಗ್ಗೆಯಿಂದ ಸಂಜೆವರೆಗೂ ಆಗಾಗ ಜಿಟಿಜಿಟಿ ಮಳೆ ಸುರಿದು ಸಂಪೂರ್ಣ ವಾತಾವರಣ ಕೂಲ್‌ ಆಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ