ಆ್ಯಪ್ನಗರ

ಬಿಎಸ್ ವೈ ಮುಂದಿನ ಸಿಎಂ: ಅನುಮಾನ ಬೇಡ ಎಂದ ಈಶ್ವರಪ್ಪ

ಕೂಡಲಸಂಗಮದಲ್ಲಿ ನಡೆದ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಸಾವಿರಾರು ಜನ ಭಾಗವಹಿಸಿದ್ದಾರೆ.

ವಿಕ ಸುದ್ದಿಲೋಕ 26 Jan 2017, 4:22 pm
ಬಾಗಲಕೋಟ: ಜಿಲ್ಲೆಯ ಕೂಡಲಸಂಗಮದಲ್ಲಿ ನಡೆದ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದಾರೆ. ಎರಡು ಕಿ.ಮೀ ಉದ್ದ ಮೆರವಣಿಗೆಯಿಂದ ಟ್ರಾಫಿಕ್ ಜಾಮ್ ಆಗಿದೆ. ಸಮಾವೇಶದಲ್ಲಿ ಕೆಲವು ಮಠಾಧೀಶರು, ಮಾಜಿ ಸಂಸದ ವಿರೂಪಾಕ್ಷಪ್ಪ ಭಾಗವಹಿಸಿದ್ದಾರೆ.
Vijaya Karnataka Web rayanna brigade samavesha in bagalakota
ಬಿಎಸ್ ವೈ ಮುಂದಿನ ಸಿಎಂ: ಅನುಮಾನ ಬೇಡ ಎಂದ ಈಶ್ವರಪ್ಪ


ಕಾಗಿನೆಲೆ ಕನಕ ಪೀಠದ ಸಿದ್ದರಾಮಾನಂದ ಶ್ರೀಗಳು ಸಮಾವೇಶ ಉದ್ಘಾಟಿಸಿದರು. ಜನಸಮೂಹ ಕಂಡು ಈಶ್ವರಪ್ಪ ಭಾವಾವೇಶಕ್ಕೆಒಳಗಾದಂತೆ ಕಂಡುಬಂದರು.' ಬಿಎಸ್ ವೈ ಮುಂದಿನ ಸಿಎಂ, ಇದರಲ್ಲಿ ಅನುಮಾನ ಬೇಡ. ನನ್ನ ಪಕ್ಷ ನಿಷ್ಠೆಗೆ ತೊಂದರೆ ಮಾಡಬೇಡಿ. ಬಿಎಸ್ ವೈ ಸಿಎಂ ಎಂದು ಶಾ ಹೇಳಿದ್ದಾರೆ. ಹಾಗೆ ನಡೆಯುತ್ತದೆ, ನಡೆಯಬೇಕು. ಮುಂದಿನ ಬ್ರಿಗೇಡ್ ಸಮಾವೇಶಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ,' ಎಂದು ಈಶ್ವರಪ್ಪ ಹೇಳಿದರು

ಬ್ರಿಗೇಡ್‌ಗೆ ಜಾತಿ,ಪಕ್ಷದ ಬಣ್ಣ ಹಚ್ಚಬೇಡಿ ಎಂದು ಸಮಾವೇಶದಲ್ಲಿ ಮಾತನಾಡಿದ ಕಾಗಿನೇಲೆ ಕನಕ ಮಠದ ತಿಂಥಣಿ ಶಾಖಾಪೀಠ ಸಿದ್ದರಾಮಪೂರಿ ಸಮಾವೇಶದಲ್ಲಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ