ಆ್ಯಪ್ನಗರ

BSNLನಲ್ಲಿ ಇರುವವರು ದೇಶದ್ರೋಹಿಗಳಾ, ಇವರೊಂದಿಗೆ ಪ್ರಧಾನಿ ಕೆಲಸ ಮಾಡ್ತಾ ಇದ್ದಾರಾ: ತಿಮ್ಮಾಪುರ

ಬಿಎಸ್ಎನ್ಎಲ್ ಅಧಿಕಾರಿಗಳು ದೇಶದ್ರೋಹಿಗಳು ಆಗಬೇಕಾ‌. ಯಾರು ಯಾರು ದೇಶದ್ರೋಹಿಗಳು ಯಾರನ್ನು ಹೊರಗೆ ಹಾಕಿದ್ರಿ.. ಅವರ ಮೇಲೆ ನಿಮ್ಮ ಕ್ರಮವೇನು. ಕ್ರಮ ಇಲ್ಲ ಎಂದಾದ್ರೆ ಅವರ ಜೊತೆ ನೀವು ಶಾಮೀಲಾಗಿರಬೇಕು

Vijaya Karnataka Web 14 Aug 2020, 6:43 pm
ಬಾಗಲಕೋಟೆ: ಬಿಎಸ್‌ಎನ್‌ಎಲ್‌ನಲ್ಲಿ ದೇಶದ್ರೋಹಿಗಳಿದ್ದಾರೆ ಎಂಬ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ನಿಜಕ್ಕೂ ಖಂಡನೀಯ, ಬಿಎಸ್‌ಎನ್‌ಎಲ್‌ನಲ್ಲಿ ಇದ್ದವರು ದೇಶದ್ರೋಹಿಗಳೇ ಆದ್ರೆ ಪ್ರಧಾನಿಗಳು ರಾಷ್ಟ್ರ ದ್ರೋಹಿಗಳನ್ನಿಟ್ಟುಕೊಂಡು ಕೆಲಸ ಮಾಡ್ತಾರಂದ್ರೆ ಇದು ಎಂತಹ ನಾಚಿಕೇಗೇಡಿತನದ ಸಂಗತಿ ಎಂದು ಮಾಜಿ ಸಚಿವ ಆರ್‌ ಬಿ ತಿಮ್ಮಾಪುರ ತಿಳಿಸಿದ್ದಾರೆ.
Vijaya Karnataka Web ಆರ್‌ ಬಿ ತಿಮ್ಮಾಪುರ
ಆರ್‌ ಬಿ ತಿಮ್ಮಾಪುರ


ಬಾಗಲಕೋಟೆಯಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಸುದ್ದಿಗಾರರೊಂದಿಗೆ ಮಾತನಾಡಿದರು.

ಇದನ್ನು ಪ್ರೈವೇಟ್‌ಗೆ ಕೊಡೋ ಹುನ್ನಾರವಾಗಿ ಪೀಠಿಕೆ ಹಾಕಲು ಬಿಎಸ್ಎನ್ಎಲ್ ಅಧಿಕಾರಿಗಳು ದೇಶದ್ರೋಹಿಗಳು ಆಗಬೇಕಾ‌. ಯಾರು ಯಾರು ದೇಶದ್ರೋಹಿಗಳು ಯಾರನ್ನು ಹೊರಗೆ ಹಾಕಿದ್ರಿ.. ಅವರ ಮೇಲೆ ನಿಮ್ಮ ಕ್ರಮವೇನು. ಕ್ರಮ ಇಲ್ಲ ಎಂದಾದ್ರೆ ಅವರ ಜೊತೆ ನೀವು ಶಾಮೀಲಾಗಿರಬೇಕು ಎಂದು ಕಿಡಿಕಾರಿದರು.

ದೇಶಭಕ್ತರ ಹೆಸರಿನಲ್ಲಿರೋ ದೇಶದ್ರೋಹಿಗಳು ಯಾರು, ಅವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ. ಈ ಎಲ್ಲವನ್ನು ಜನತೆ ಮುಂದೆ ಸಾಬೀತು ಮಾಡಬೇಕು ಎಂದು ಆರ್‌ಬಿ ತಿಮ್ಮಾಪುರ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ