ಆ್ಯಪ್ನಗರ

ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

ಬಾಗಲಕೋಟ: ಕರ್ತವ್ಯನಿರತ ಬಾದಾಮಿ ಪುರಸಭೆ ಸಹಾಯಕ ಅಭಿಯಂತರರ ಮೇಲೆ ಹಲ್ಲೆ ಮಾಡಿದ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 20 Nov 2018, 5:00 am
ಬಾಗಲಕೋಟ: ಕರ್ತವ್ಯನಿರತ ಬಾದಾಮಿ ಪುರಸಭೆ ಸಹಾಯಕ ಅಭಿಯಂತರರ ಮೇಲೆ ಹಲ್ಲೆ ಮಾಡಿದ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web require proper action against guilty
ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ


ರಾಜ್ಯ ಪೌರ ಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎ.ಬಿ.ಕಲಾಲ್‌ ನೇತೃತ್ವದಲ್ಲಿ ಆಗಮಿಸಿದ ಜಿಲ್ಲೆಯ ಪೌರಸೇವಾ ನೌಕರರು ಬಾದಾಮಿ ಪುರಸಭೆ ಸದಸ್ಯ ಬಸವರಾಜ ತೀರ್ಥಪ್ಪನವರ ಮೇಲೆ ಸೂಕ್ತ ಕಾನೂಕು ಕ್ರಮ ಕೈಗೊಳ್ಳಬೇಕು. ಜತೆಗೆ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಎ.ಬಿ.ಕಲಾಲ್‌ ಮಾತನಾಡಿ, ಬಾದಾಮಿ ಪುರಸಭೆಯಲ್ಲಿ ಸಹಾಯಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಎಂ.ಸಾರವಾನ್‌ ಅವರು ನ.15ರಂದು ಸಂಜೆ ಕಚೇರಿಯಲ್ಲಿ ಸರಕಾರಕ ಕೆಲಸದ ನಿಮಿತ್ತ ಮುಖ್ಯಾಧಿಕಾರಿಯೊಂದಿಗೆ ಸೇರಿ ಅವರ ಕೋಣೆಯಲ್ಲಿ ಚರ್ಚಿಸುವ ಸಮಯದಲ್ಲಿ ಅಲ್ಲಿಯೇ ಹಾಜರಿದ್ದ ಪುರಸಭೆ ಸದಸ್ಯ ಬಸವರಾಜ ತೀರ್ಥಪ್ಪನವರ ತಮ್ಮ ಸಹಚರರೊಂದಿಗೆ ಸೇರಿ ಸಹಾಯಕ ಅಭಿಯಂತರರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ದೈಹಿಹಕವಾಗಿ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದು ನೌಕರರಿಗೆ ಮಾನಸಿಕ ಹಿಂಸೆಯಾಗಿ ಕರ್ತವ್ಯ ನಿರ್ವಹಿಸಲು ತೊಂದರೆ ಆಗಿದೆ. ಜತೆಗೆ ನೌಕರರ ಸುರಕ್ಷತೆಗೆ ಧಕ್ಕೆ ಬಂದಿರುತ್ತದೆ. ಕೂಡಲೆ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಘದ ಪದಾಧಿಕಾರಿಗಳಾದ ಎಂ.ಎಲ್‌.ಮಲ್ಲಾಪೂರ, ಎಂ.ಬಿ.ಶಿರಗುಪ್ಪಿ, ಕೆ.ಐ.ಶೇಖ್‌, ವೈ.ಎಸ್‌.ಪ್ರಶಾಂತ, ಪಿ.ಎಂ.ಚಲವಾದಿ, ಖಾಜಿ ನವೀದ, ಸಿ.ಎಸ್‌.ಬೀಳಗಿ, ಕನಕಪ್ಪ ಮರ್ಜಿ, ಎಂ.ಪಿ.ತಾರಿವಾಳ, ಎಸ್‌.ಎಚ್‌.ಬದಾಮಿ, ಮರಿಯಪ್ಪ ಕಟಗೂರ ಹಾಗೂ ಜಿಲ್ಲಾ ವ್ಯಾಪ್ತಿಯ 15 ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರು ಇದ್ದರು. ಸೂಕ್ತ ಕ್ರಮದ ಭರವಸೆಯಲ್ಲಿ ಜಿಲ್ಲಾಧಿಕಾರಿಗಳು ನೀಡಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ