ಆ್ಯಪ್ನಗರ

ಮೀಸಲಾತಿ ಹೆಚ್ಚಳ ಅಗತ್ಯ: ಶ್ರೀಶೈಲ

ಗಲಗಲಿ; ಪರಿಶಿಷ್ಟ ವರ್ಗದ ಜನಸಂಖ್ಯೆ ಅನುಗುಣವಾಗಿ ಸರಕಾರಿ ಹುದ್ದೆಗಳಲ್ಲಿ ಹಾಗೂ ಶೈಕ್ಷ ಣಿಕ ರಂಗದಲ್ಲಿ ಮೀಸಲಾತಿ ಹೆಚ್ಚಿಸಲು ಹೋರಾಟ ನಡೆಸಲಾಗುವುದು. ಬೀಳಗಿ ತಾಲೂಕಿನ ಪ್ರತಿಯೊಬ್ಬ ಪರಿಶಿಷ್ಟ ವರ್ಗದ ಜನರು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಅಧ್ಯಕ್ಷ , ವಾಲ್ಮೀಕಿ ಸಮಾಜದ ಯುವ ಮುಖಂಡ ಶ್ರೀಶೈಲ ಅಂಟೀನ ಹೇಳಿದರು.

Vijaya Karnataka 6 Jun 2019, 5:00 am
ಗಲಗಲಿ; ಪರಿಶಿಷ್ಟ ವರ್ಗದ ಜನಸಂಖ್ಯೆ ಅನುಗುಣವಾಗಿ ಸರಕಾರಿ ಹುದ್ದೆಗಳಲ್ಲಿ ಹಾಗೂ ಶೈಕ್ಷ ಣಿಕ ರಂಗದಲ್ಲಿ ಮೀಸಲಾತಿ ಹೆಚ್ಚಿಸಲು ಹೋರಾಟ ನಡೆಸಲಾಗುವುದು. ಬೀಳಗಿ ತಾಲೂಕಿನ ಪ್ರತಿಯೊಬ್ಬ ಪರಿಶಿಷ್ಟ ವರ್ಗದ ಜನರು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಅಧ್ಯಕ್ಷ , ವಾಲ್ಮೀಕಿ ಸಮಾಜದ ಯುವ ಮುಖಂಡ ಶ್ರೀಶೈಲ ಅಂಟೀನ ಹೇಳಿದರು.
Vijaya Karnataka Web reservation increase is required
ಮೀಸಲಾತಿ ಹೆಚ್ಚಳ ಅಗತ್ಯ: ಶ್ರೀಶೈಲ


ಬೀಳಗಿ ತಾಲೂಕಿನ ತೆಗ್ಗಿಯಲ್ಲಿ ನಡೆದ ವಾಲ್ಮೀಕಿ ಸಮಾಜದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ವಾಲ್ಮೀಕಿ ಜನಸಂಖ್ಯೆ 70ಲಕ್ಷ ಕ್ಕೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಈ ಜನಾಂಗಕ್ಕೆ ಮೀಸಲಾತಿ ಪ್ರಮಾಣ ಶೇ 7.5ಹೆಚ್ಚಳ ಅಗತ್ಯವಾಗಿದೆ ಎಂದರು. ಈಗಾಗಲೇ ಮೀಸಲಾತಿ ಕೇವಲ ಶೇ.3 ರಷ್ಟು ಮಾತ್ರ ನೀಡುತ್ತಿದ್ದು ಇದರಿಂದ ತೊಂದರೆಯಾಗಿದೆ. ಇದು ಜನಸಂಖ್ಯೆಗೆ ಅನುಗುಣವಾಗಿ ದೊರೆಯುತ್ತಿಲ್ಲ ಎಂದರು. ಈಗಾಗಲೇ ಸರಕಾರದ ಗಮನಸೆಳೆಯಲು ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಪಾದಯಾತ್ರೆ ಮೂಲಕ ಬೆಂಗಳೂರು ವಿಧಾನಸೌಧದಕ್ಕೆ ತೆರಳಲಿದ್ದಾರೆ. ಈ ನಿಟ್ಟಿನಲ್ಲಿ 6 ರಂದು ಪ್ರತಿ ತಾಲೂಕಿನಲ್ಲಿ ತಹಸೀಲ್ದಾರರ ಮೂಲಕ ರಾಜ್ಯ ಸರಕಾರ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಶ್ರೀಗಳು ನಡೆಸುವ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಧುಗಳು ಭಾಗವಹಿಸಿ ಹೋರಾಟ ಯಶಸ್ಸುಗೊಳಿಸಲು ಮುಂದಾಗಬೇಕು ಎಂದು ಸಮಾಜದ ಬಾಂಧವರಿಗೆ ಕರೆ ನೀಡಿದರು. ವಾಲ್ಮೀಕಿ ಸಮಾಜದ ಯುವ ಮುಖಂಡ ಸೋಮನಗೌಡ ಪಾಟೀಲ, ರಮೇಶ ಭೀಮಪ್ಪ ನಾಯ್ಕರ, ರಮೇಶ ಜಾನಮಟ್ಟಿ, ಈರಣ್ಣ ಜಡಗಣ್ಣವರ, ಲಕ್ಷ ್ಮಣ್ಣ ಕವಲಗಿ, ರಾಜು ಬಿರಾದಾರ, ಬಾಳು ಕಂಠಿ, ಮುದಕಪ್ಪ ಗುಜ್ಜರ, ಯಲಗೂರಪ್ಪ ಹಕ್ಕಲ, ಸಂತೋಷ ವಡವಾಣಿ, ಲಕ್ಷ ್ಮಣ್ಣ ಯಡಹಳ್ಳಿ, ಸೋಮಪ್ಪ ನಾಗರಾಳ, ಶ್ರೀಶೈಲ ಜೋಗೆನ್ನವರ, ಹನಮಂತ ಕಟ್ಟೆಪ್ಪನವರ, ಆರ್‌ ಬಿ,ನಾಯಿಕ, ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ