ಆ್ಯಪ್ನಗರ

ಈ ಅವಧಿ ಪೂರೈಸಿ ಚುನಾವಣೆಯಿಂದ ನಿವೃತ್ತಿ: ಸಿದ್ದರಾಮಯ್ಯ ಘೋಷಣೆ

ನಾವು, ನೀವು ಬನ್ನಿ ತಗೊಂಡು ಬಂಗಾರದಿಂದ ಇರೋಣ ಎಂದು ಉತ್ತರ ಕರ್ನಾಟಕ ಸ್ಟೈಲ್‌ನಲ್ಲೇ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ದಸರಾ ಶುಭಾಶಯ ತಿಳಿಸಿದರು.

Vijaya Karnataka Web 17 Oct 2018, 3:25 pm
ಬಾಗಲಕೋಟ: ನಾನು ಈಗಾಗಲೇ 13 ಚುನಾವಣೆಗಳನ್ನ ಎದುರಿಸಿದ್ದೇನೆ, ಈ ಐದು ವರ್ಷ ಪೂರೈಸಿ ಇನ್ನು‌ ಮುಂದೆ ಚುನಾವಣೆಗೆ ನಿಲ್ಲೋದಿಲ್ಲ, ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
Vijaya Karnataka Web Siddaramaiah


ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಪುರಸಭಾ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿದ್ಧರಾಮಯ್ಯ, ನನಗೆ 71 ವರ್ಷ ವಯಸ್ಸಾಗಿದೆ, ಹಾಗಾಗಿ ಇನ್ಮುಂದೆ ಚುನಾವಣೆಗೆ ನಿಲ್ಲೋದಿಲ್ಲ ಎಂದು ಹೇಳುವ ಮೂಲಕ ಚುನಾವಣಾ ನಿವೃತ್ತಿ ಘೋಷಿಸಿದರು.

ಅಭಿವೃದ್ಧಿ ಕೆಲಸ ಮಾಡಲು ಚುನಾವಣೆಗೆ ನಿಲ್ಲಲೇಬೇಕೆಂದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಸದ್ಯ ನಾನು ಕೂಡ ಉತ್ತರ ಕರ್ನಾಟಕದವನೇ, ಬಾದಾಮಿ ಶಾಸಕನಾಗಿರೋದ್ರಿಂದ ಉತ್ತರ ಕರ್ನಾಟಕದವನೇ ಆಗಿದ್ದೇನೆ ಎಂದ ಅವರು ಕೊನೆಯದಾಗಿ ನಾವು, ನೀವು ಬನ್ನಿ ತಗೊಂಡು ಬಂಗಾರದಿಂದ ಇರೋಣ ಎಂದು ಉತ್ತರ ಕರ್ನಾಟಕ ಸ್ಟೈಲ್‌ನಲ್ಲೇ ಕ್ಷೇತ್ರದ ಜನರಿಗೆ ದಸರಾ ಶುಭಾಶಯ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ