ಆ್ಯಪ್ನಗರ

ಪೆಟ್ರೋಲ್‌ ಕೊರತೆ ವದಂತಿ, ಮುಗಿಬಿದ್ದ ಜನ

ಬಾಗಲಕೋಟೆ: ಪ್ರವಾಹದಿಂದಾಗಿ ಇಂಧನ ಕೊರತೆಯಾಗಿದೆ ಎಂಬ ವದಂತಿ ನಂಬಿ ನಗರದಲ್ಲಿ ಜನರು ಪೆಟ್ರೋಲ್‌ ಬಂಕ್‌ಗಳಿಗೆ ಮುಗಿಬಿದ್ದ ಘಟನೆ ಶುಕ್ರವಾರ ನಡೆದಿದೆ.

Vijaya Karnataka 10 Aug 2019, 5:00 am
ಬಾಗಲಕೋಟೆ: ಪ್ರವಾಹದಿಂದಾಗಿ ಇಂಧನ ಕೊರತೆಯಾಗಿದೆ ಎಂಬ ವದಂತಿ ನಂಬಿ ನಗರದಲ್ಲಿ ಜನರು ಪೆಟ್ರೋಲ್‌ ಬಂಕ್‌ಗಳಿಗೆ ಮುಗಿಬಿದ್ದ ಘಟನೆ ಶುಕ್ರವಾರ ನಡೆದಿದೆ.
Vijaya Karnataka Web rumors of petrol shortage overcrowded people
ಪೆಟ್ರೋಲ್‌ ಕೊರತೆ ವದಂತಿ, ಮುಗಿಬಿದ್ದ ಜನ


ಉತ್ತರ ಕರ್ನಾಟಕದಲ್ಲಿ ನೆರೆ ಆವರಿಸಿರುವುದರಿಂದ ಕೆಲವು ತೈಲ ಕಂಪನಿಗಳ ಟ್ಯಾಂಕರ್‌ ಲಭ್ಯವಾಗದ ಕಾರಣ ಕೆಲವು ಬಂಕ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಲಭ್ಯವಿರಲಿಲ್ಲ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಜನರು ಬಂಕ್‌ಗಳಿಗೆ ಮುಗಿಬಿದ್ದು ವಾಹನಗಳ ಟ್ಯಾಂಕ್‌ ಭರ್ತಿ ಮಾಡಿಸಿಕೊಂಡರು. ಆದರೆ ಪೆಟ್ರೋಲ್‌ ಬಂಕ್‌ ಮಾಲೀಕರ ಸಂಘಟನೆ ಹಾಗೂ ಅಧಿಕಾರಿಗಳ ಪ್ರಕಾರ ಇಂಧನ ತೈಲದ ಕೊರತೆ ಉದ್ಭವಿಸಿಲ್ಲ.

ಬಿಪಿಸಿಎಲ್‌ ಹಾಗೂ ಎಚ್‌ಪಿಸಿಎಲ್‌ ಕಂಪನಿಗಳ ಟ್ಯಾಂಕರ್‌ಗಳು ಲಭ್ಯವಾಗದ ಕಾರಣ ನಗರದ ಕೆಲ ಬಂಕ್‌ಗಳಲ್ಲಿ ಇಂಧನ ಪೂರೈಕೆಯಾಗಿಲ್ಲ. ಈ ಬಂಕ್‌ಗಳು ಕಾರ್ಯನಿರ್ವಹಿಸದ ಕಾರಣ ಇಂಧನ ಅಭಾವ ತಲೆದೋರಿದೆ ಎಂದು ನಾಗರಿಕರು ಭಾವಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಹರಿದಾಡಿದ ಸಂದೇಶಗಳಲ್ಲಿ ಇಂಧನ ಕೊರತೆಯಿದೆ, ಈಗಲೇ ತುಂಬಿಸಿಕೊಳ್ಳಿ ಎಂದು ಪ್ರಚಾರ ಮಾಡಲಾಗಿತ್ತು. ಹೀಗಾಗಿ ಕಾರ್ಯನಿರ್ವಹಿಸುತ್ತಿದ್ದ ಬಂಕ್‌ಗಳ ಎದುರು ಜನರು ಮುಗಿಬಿದ್ದರು. ಬೇರೆ ಜಿಲ್ಲೆಗಳಿಂದ ಆಗಮಿಸಿದವರು ಮತ್ತೆ ಇಂಧನ ದೊರೆಯಲಿಕ್ಕಿಲ್ಲ ಎಂದು ಸರತಿ ಸಾಲಿನಲ್ಲಿದ್ದದ್ದೂ ಜನರ ಸಂಖ್ಯೆ ಹೆಚ್ಚಾಗಲು ಕಾರಣವಾಯಿತು. ನವನಗರದ ಬಂಕ್‌ವೊಂದರಲ್ಲಿ ಒಂದೂವರೆ ಗಂಟೆಯವರೆಗೆ ವಾಹನ ಸವಾರರು ಕಾಯಬೇಕಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲೆಯ ಪೆಟ್ರೋಲ್‌ ಬಂಕ್‌ ಮಾಲೀಕರ ಸಂಘಟನೆ ಅಧ್ಯಕ್ಷ ಶಿವಪ್ಪ ಅಕ್ಕಿಮರಡಿ 'ಕೆಲವು ಕಂಪನಿಗಳಿಂದ ಟ್ಯಾಂಕರ್‌ ಬರದ ಕಾರಣ ಬಂಕ್‌ ಬಂದ್‌ ಆಗಿರಬಹುದು. ಇಂಧನ ತೈಲಕ್ಕೆ ಯಾವುದೇ ತೊಂದರೆಯಿಲ್ಲ, ಎಲ್ಲ ಬಂಕ್‌ಗಳಲ್ಲೂ ಇಂಧನ ಲಭ್ಯವಾಗಲಿದೆ' ಎಂದು ಸ್ಪಷ್ಟಪಡಿಸಿದರು. ನೆರೆ ಪ್ರದೇಶಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲು ವಾಹನಗಳಿಗೆ ಇಂಧನ ಬೇಕಿದ್ದು , ಎಲ್ಲ ಬಂಕ್‌ಗಳಲ್ಲಿ ಸಂಗ್ರಹವಿರಬೇಕು ಎಂದು ಜಿಲ್ಲಾಧಿಕಾರಿ ಕೂಡ ಆ.9 ರಂದು ತೈಲ ಕಂಪನಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಜಲಾವೃತ ಬಂಕ್‌ಗಳನ್ನು ಹೊರತುಪಡಿಸಿ ಎಲ್ಲಿಯೂ ಇಂಧನದ ಕೊರತೆಯಾಗಿಲ್ಲ. ತೈಲ ಕಂಪನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸಾಕಷ್ಟು ಡೀಸೆಲ್‌, ಪೆಟ್ರೋಲ್‌ ಲಭ್ಯವಾಗಲಿದೆ. ವಾಹನ ಸವಾರರು ಯಾವುದೇ ವದಂತಿ ನಂಬಿ ಆತಂಕಕ್ಕೆ ಒಳಗಾಗುವುದು ಬೇಡ. ಜಿಲ್ಲೆಯಲ್ಲಿ ಇಂಧನ ತೈಲ ಲಭ್ಯವಾಗಲಿದೆ.
-ಶ್ರೀಶೈಲ ಕಂಕಣವಾಡಿ, ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ