ಆ್ಯಪ್ನಗರ

ಸಚಿವ ಸ್ಥಾನ ತ್ಯಾಗ, ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ

ಬಾಗಲಕೋಟೆ : ಬಿಜೆಪಿ ಸರಕಾರ ರಚನೆಗೆ ತಮ್ಮ ಶಾಸಕ ಸ್ಥಾನ ತ್ಯಾಗ ಮಾಡಿದವರನ್ನು ಎಂದಿಗೂ ಮರೆಯುವುದಿಲ್ಲಎಂದು ಸಚಿವೆ ಶಶಿಕಲಾ ಜೊಲ್ಲೆತಿಳಿಸಿದರು.

Vijaya Karnataka 3 Feb 2020, 5:00 am
ಬಾಗಲಕೋಟೆ : ಬಿಜೆಪಿ ಸರಕಾರ ರಚನೆಗೆ ತಮ್ಮ ಶಾಸಕ ಸ್ಥಾನ ತ್ಯಾಗ ಮಾಡಿದವರನ್ನು ಎಂದಿಗೂ ಮರೆಯುವುದಿಲ್ಲಎಂದು ಸಚಿವೆ ಶಶಿಕಲಾ ಜೊಲ್ಲೆತಿಳಿಸಿದರು.
Vijaya Karnataka Web sacrificing ministerial position committed to high command decision
ಸಚಿವ ಸ್ಥಾನ ತ್ಯಾಗ, ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ


ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್‌ ಸ್ಥಾನಕ್ಕೆ ಸವದಿಗೆ ಟಿಕೆಟ್‌ ನೀಡಿ ಆರ್‌.ಶಂಕರ್‌ ಅವರಿಗೆ ಹಿನ್ನೆಡೆ ಆಗಿರುವ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಸಿಎಂ ಬಿಎಸ್‌ವೈ ಅವರೆನ್ನಲ್ಲಕರೆದು ಚರ್ಚಿಸುತ್ತಿದ್ದಾರೆ. ಅವರೆಲ್ಲತಮ್ಮ ಸ್ಥಾನ ತ್ಯಾಗ ಮಾಡಿದ್ದರಿಂದಲೇ ನಮ್ಮ ಸರಕಾರ ಬಂದಿದ್ದು ಅದನ್ನು ನಾವು ಮರೆಯುವುದಿಲ್ಲ. ಸೋತವರಿಗೂ, ಗೆದ್ದವರಿಗೂ ಒಂದು ಹಾದಿಯನ್ನು ಸಿಎಂ ಹುಡುಕುತ್ತಾರೆ. ಅನ್ಯಾಯ ಮಾಡದೆ ತಮ್ಮ ಮಾತಿಗೆ ಬಿಎಸ್‌ವೈ ತಪ್ಪಿ ನಡೆದವರಲ್ಲ. ಒಂದಿಲ್ಲೊಂದು ನ್ಯಾಯ ಕೊಡಿಸುವ ಕೆಲಸ ಮಾಡುತ್ತಾರೆ ಎಂದರು.

ಹಿರಿಯ ಸಚಿವರು ಸ್ಥಾನ ತ್ಯಾಗ ಮಾಡಬೇಕು ಎನ್ನುವ ಯತ್ನಾಳ್‌ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಸಚಿವೆ ರಾಷ್ಟ್ರೀಯ ಹಾಗೂ ರಾಜ್ಯಾಧ್ಯಕ್ಷರು ಸೇರಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವೆಲ್ಲಬದ್ಧರಾಗಿದ್ದೇವೆ. ಈಗಾಗಲೆ ಎಲ್ಲಸಚಿವರು ಈ ಕುರಿತು ಹೇಳಿಕೆಯನ್ನೂ ನೀಡಿದ್ದಾರೆ. ಈ ವಿಚಾರದಲ್ಲಿಹೈಕಮಾಂಡ್‌ನಿಂದ ಬರುವ ಆದೇಶಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಈಗಾಗಲೆ ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಬಿಎಸ್‌ವೈ ಅವರು ಅಮಿತ್‌ಶಾ, ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ. ರಾಜ್ಯಕ್ಕೆ ಆಗಮಿಸಿ ಪ್ರಮುಖರೊಂದಿಗೆ 2 ದಿನ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಂಪುಟ ವಿಸ್ತರಣೆಯಲ್ಲಿಬೆಳಗಾವಿಯದ್ದೇ ದೊಡ್ಡ ಸಮಸ್ಯೆ ಎನ್ನುತ್ತಿದ್ದು ಅಂತಹ ಸಮಸ್ಯೆಯಿಲ್ಲ. ಸಿಎಂ ಬೆಳಗಾವಿಗೆ ಬಂದಾಗ ಎಲ್ಲರಿಗೂ ಮಂತ್ರಿ ಸ್ಥಾನ ಕೊಡುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಜತೆಗೆ ಯಾರನ್ನೂ ಕೈ ಬಿಡುವುದಿಲ್ಲಎಂದೂ ತಿಳಿಸಿದ್ದಾರೆ ಎಂದು ಹೇಳಿದರು.

ನಾನೊಬ್ಬಳು ಸಮಾಜ ಸೇವೆ ಹಾಗೂ ಪಕ್ಷ ಸಂಘಟನೆಯಿಂದ ಗುರುತಿಸಿಕೊಂಡವಳು. ನನಗೆ ಅನ್ಯಾಯ ಮಾಡುವುದಿಲ್ಲಎಂಬ ವಿಶ್ವಾಸವಿದೆ. ನಮ್ಮ ಮಂತ್ರಿ ಸ್ಥಾನ ಅಬಾಧಿತವಾಗಿದೆ. ಆದರೂ ಹೈಕಮಾಂಡ್‌ ಆದೇಶಕ್ಕೆ ಬದ್ಧಳಾಗಿದ್ದು ಪಕ್ಷ ಸಂಘಟನೆ ಮುಂದುವರೆಸುತ್ತೇನೆ. ಇರುವ ಶಾಸಕ ಸ್ಥಾನವನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ