ಆ್ಯಪ್ನಗರ

ರಾಜ್ಯಕ್ಕೆ ಮಾದರಿ ಬೊಮ್ಮನಬುದ್ನಿ ಮತದಾನ ಕೇಂದ್ರ

ಮುಧೋಳ: ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೆಚ್ಚಿಸುವ ಉದ್ದೇಶದಿಂದ ಲೋಕಸಭೆ ಚುನಾವಣೆಯಲ್ಲಿ ತಾಲೂಕಿನ ಬೊಮ್ಮನಬುದ್ನಿ ಗ್ರಾಮಸ್ಥರು ನೂರಕ್ಕೆ ನೂರಷ್ಟು ಫಲಿತಾಂಶ ಹೆಚ್ಚಿಸಿ ರಾಜ್ಯಕ್ಕೆ ಮಾದರಿ ಎನಿಸಿಕೊಂಡಿದ್ದಾರೆ.

Vijaya Karnataka 25 Apr 2019, 5:00 am
ಮುಧೋಳ: ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೆಚ್ಚಿಸುವ ಉದ್ದೇಶದಿಂದ ಲೋಕಸಭೆ ಚುನಾವಣೆಯಲ್ಲಿ ತಾಲೂಕಿನ ಬೊಮ್ಮನಬುದ್ನಿ ಗ್ರಾಮಸ್ಥರು ನೂರಕ್ಕೆ ನೂರಷ್ಟು ಫಲಿತಾಂಶ ಹೆಚ್ಚಿಸಿ ರಾಜ್ಯಕ್ಕೆ ಮಾದರಿ ಎನಿಸಿಕೊಂಡಿದ್ದಾರೆ.
Vijaya Karnataka Web sample baumanuddin voting center for the state
ರಾಜ್ಯಕ್ಕೆ ಮಾದರಿ ಬೊಮ್ಮನಬುದ್ನಿ ಮತದಾನ ಕೇಂದ್ರ


ಜಿಲ್ಲಾ ಸ್ವಿಪ್‌ ಸಮಿತಿಯ ಅಧ್ಯಕ್ಷೆ, ಸಿಇಒ ಗಂಗೂಬಾಯಿ ಮಾನಕರವರ ಸಲಹೆ ಮೇರೆಗೆ ತಾಲೂಕಿನ ಮೆಟಗುಡ್ಡ ಗ್ರಾಪಂ ವ್ಯಾಪ್ತಿಯ ಬೊಮ್ಮನಬುದ್ನಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ 174 ಮತಗಟ್ಟೆಯ ವ್ಯಾಪ್ತಿಯಲ್ಲಿ 435 ಮತದಾರರು ಇದ್ದಾರೆ. ಪುರುಷ 205 ಹಾಗೂ ಮಹಿಳೆ 230 ಇವರಿಗೆಲ್ಲ ಮತದಾನದ ಕುರಿತು ಜಾಗೃತಿ ಮಾಡಿ ಕಾಳಜಿಯಿಂದ ಮತದಾನ ಮಾಡುವಂತೆ ಪ್ರೇರಣೆ ನೀಡುವ ಕೆಲಸ ಗ್ರಾಪಂ ಸಿಬ್ಬಂದಿ ಮಾಡಿದ್ದಾರೆ.

ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಿ ಬೊಮ್ಮನಬುದ್ನಿಯನ್ನು ರಾಜ್ಯಕ್ಕೆ ಪರಿಚಯ ಮಾಡಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಪಿಡಿಒ ಕವಿತಾ ಬಾರಕೋಲ ಅವರು ಮತದಾನಕ್ಕೆ ಬಂದವರಿಗೆ ಆರತಿ ಬೆಳಗಿ ಸ್ವಾಗತಿಸಿರುವುದು ವಿಶೇಷವಾಗಿದೆ. ಐವರು ಸರಕಾರಿ ನೌಕರರು ಮತದಾನ ಮಾಡಿದ್ದಾರೆ.

ರೈತರು, ಕೃಷಿ ಕೂಲಿ ಕಾರ್ಮಿಕರು ಹಾಗೂ ಕಾರ್ಖಾನೆ ಕಾರ್ಮಿಕರು ಎಷ್ಟೋ ದೂರದ ಪ್ರದೇಶಗಳಿಂದ ಬಂದು ಮತದಾನ ಮಾಡಿ, ದೇಶದ ಪ್ರಜಾಪ್ರಭುತ್ವ ಭವಿಷ್ಯಕ್ಕೆ ಭ್ರದ ಬುನಾದಿ ಬರೆದಿದ್ದಾರೆ.

ಜಿಪಂ ಸಿಇಒ ಗಂಗೂಬಾಯಿ ಮಾನಕರ, ತಾಪಂ ಇಒ ಬಿ.ಎಲ್‌.ರಾಠೋಡ, ಸಹಾಯಕ ನಿರ್ದೇಶಕ ಭೀಮಪ್ಪ ತಳವಾರ, ಪಿಡಿ ಕವಿತಾ ಬಾರಕೋಲವರ ಪ್ರಯತ್ನದ ಫಲವಾಗಿ ನೂರಕ್ಕೆ ನೂರಷ್ಟು ಮತದಾನವಾಗಲು ಸಾಧ್ಯವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ