ಬಾಗಲಕೋಟ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮುಂದೆ ಸಿದ್ದರಾಮಯ್ಯ ಬಾಲಕ ಇದ್ದಂತೆ ಎಂದು ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಬಾಗಲಕೋಟದ ರಾಂಪುರದಲ್ಲಿ ಸುದ್ದಿಗಾರರೊಂದಿಗೆ ಶೆಟ್ಟರ್ ಮಾತನಾಡಿದರು.
ರಾಹುಲ್ ಗಾಂಧಿ, ಸೋನಿಯಾಗಾಂಧಿ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ದುರಹಂಕಾರದಲ್ಲಿದ್ದು, ಇದು ಇನ್ಮುಂದೆ ಬಹಳಷ್ಟು ಕಾಲ ಉಳಿಯೋದಿಲ್ಲ. ಸಿದ್ದರಾಮಯ್ಯ ಎಲ್ಲಿ, ಮೋದಿ, ಅಮಿತ್ ಶಾ ಎಲ್ಲಿ. ಅವರಿಗೆ ಸಿದ್ದರಾಮಯ್ಯ ಸಮಾನರಲ್ಲ ಎಂದರು.
ಮೋದಿ ಅಮಿತ್ ಶಾ ಮುಂದೆ ಸಿದ್ದರಾಮಯ್ಯ ಸಾಧನೆ ಏನು? 5 ವರ್ಷ ಆಡಳಿತವೇ ಸಾಧನೆ ಅಂತಿದ್ದಾರೆ ಸಿದ್ದರಾಮಯ್ಯ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ. ಅಮಿತ್ ಶಾ, ಮೋದಿ ನೇತೃತ್ವದಲ್ಲಿ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರವಿದೆ. ಈ ಹಿಂದೆ ರಾಹುಲ್ ಮತ್ತು ಕಾಂಗ್ರೆಸ್ ಗೆ ಮಠಮಾನ್ಯಗಳೆಂದರೆ ಅಲರ್ಜಿ ಇತ್ತು. ಈಗ ಹಿಂದುಗಳು ಕಾಂಗ್ರೆಸ್ ವಿರುದ್ದ ಆಕ್ರೋಶಗೊಂಡಿದ್ದಾರೆಂದು ಮಠಮಾನ್ಯ ಅಲೆದಾಡುತ್ತಿದ್ದಾರೆ ಎಂದು ಶೆಟ್ಟರ್ ವಿವರಿಸಿದರು.
ಧರ್ಮವನ್ನ ಒಡೆಯುವ ಆಟ ಆಡಿದ್ದಾರೆ ಸಿದ್ದರಾಮಯ್ಯ. ಇದರ ಹಿಂದಿರುವ ಬ್ರೇನ್ ಸಿಎಂ ಸಿದ್ದರಾಮಯ್ಯ. ಕರ್ನಾಟಕ ಇತಿಹಾಸದಲ್ಲೇ ಸ್ವಾಮೀಜಿಗಳನ್ನ ಬೀದಿಗೆ ತರುವಂತಹ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ರಾಜ್ಯದ ಜನರು ಇಂತವರಿಗೆ ಬುದ್ದಿ ಕಲಿಸ್ತಾರೆ ಎಂದು ಶೆಟ್ಟರ್ ಗುಡುಗಿದರು.
ಬಾಗಲಕೋಟದ ರಾಂಪುರದಲ್ಲಿ ಸುದ್ದಿಗಾರರೊಂದಿಗೆ ಶೆಟ್ಟರ್ ಮಾತನಾಡಿದರು.
ರಾಹುಲ್ ಗಾಂಧಿ, ಸೋನಿಯಾಗಾಂಧಿ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ದುರಹಂಕಾರದಲ್ಲಿದ್ದು, ಇದು ಇನ್ಮುಂದೆ ಬಹಳಷ್ಟು ಕಾಲ ಉಳಿಯೋದಿಲ್ಲ. ಸಿದ್ದರಾಮಯ್ಯ ಎಲ್ಲಿ, ಮೋದಿ, ಅಮಿತ್ ಶಾ ಎಲ್ಲಿ. ಅವರಿಗೆ ಸಿದ್ದರಾಮಯ್ಯ ಸಮಾನರಲ್ಲ ಎಂದರು.
ಮೋದಿ ಅಮಿತ್ ಶಾ ಮುಂದೆ ಸಿದ್ದರಾಮಯ್ಯ ಸಾಧನೆ ಏನು? 5 ವರ್ಷ ಆಡಳಿತವೇ ಸಾಧನೆ ಅಂತಿದ್ದಾರೆ ಸಿದ್ದರಾಮಯ್ಯ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ. ಅಮಿತ್ ಶಾ, ಮೋದಿ ನೇತೃತ್ವದಲ್ಲಿ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರವಿದೆ. ಈ ಹಿಂದೆ ರಾಹುಲ್ ಮತ್ತು ಕಾಂಗ್ರೆಸ್ ಗೆ ಮಠಮಾನ್ಯಗಳೆಂದರೆ ಅಲರ್ಜಿ ಇತ್ತು. ಈಗ ಹಿಂದುಗಳು ಕಾಂಗ್ರೆಸ್ ವಿರುದ್ದ ಆಕ್ರೋಶಗೊಂಡಿದ್ದಾರೆಂದು ಮಠಮಾನ್ಯ ಅಲೆದಾಡುತ್ತಿದ್ದಾರೆ ಎಂದು ಶೆಟ್ಟರ್ ವಿವರಿಸಿದರು.
ಧರ್ಮವನ್ನ ಒಡೆಯುವ ಆಟ ಆಡಿದ್ದಾರೆ ಸಿದ್ದರಾಮಯ್ಯ. ಇದರ ಹಿಂದಿರುವ ಬ್ರೇನ್ ಸಿಎಂ ಸಿದ್ದರಾಮಯ್ಯ. ಕರ್ನಾಟಕ ಇತಿಹಾಸದಲ್ಲೇ ಸ್ವಾಮೀಜಿಗಳನ್ನ ಬೀದಿಗೆ ತರುವಂತಹ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ರಾಜ್ಯದ ಜನರು ಇಂತವರಿಗೆ ಬುದ್ದಿ ಕಲಿಸ್ತಾರೆ ಎಂದು ಶೆಟ್ಟರ್ ಗುಡುಗಿದರು.