ಆ್ಯಪ್ನಗರ

ರೈತರ ಪ್ರತಿಭಟನೆಗೆ ಶ್ರೀಗಳು ಸಾಥ್‌

ಇಳಕಲ್‌: ದೇಶಕ್ಕೇ ಅನ್ನ ಹಾಕುವ ರೈತರ ಭೂಮಿಯನ್ನು ಕೈಗಾರೀಕರಣ ಹಾಗೂ ನಗರೀಕರಣದ ಹೆಸರಿನಲ್ಲಿ ಬೆಲೆ ಬಾಳುವ ಜಮೀನನ್ನು ರೈತರ ಒಪ್ಪಿಗೆ ಪಡೆಯದೇ ಮೂರು ಕಾಸಿಗೆ ಭೂ ಸ್ವಾಧೀನಪಡಿಸಿಕೊಳ್ಳುವ ನೀತಿಯನ್ನು ಸರಕಾರ ತಕ್ಷ ಣ ಕೈ ಬಿಡಬೇಕೆಂದು ಗುರುಮಹಾಂತ ಶ್ರೀಗಳು ಸರಕಾರವನ್ನು ಆಗ್ರಹಿಸಿದರು.

Vijaya Karnataka 11 Jun 2019, 5:00 am
ಇಳಕಲ್‌: ದೇಶಕ್ಕೇ ಅನ್ನ ಹಾಕುವ ರೈತರ ಭೂಮಿಯನ್ನು ಕೈಗಾರೀಕರಣ ಹಾಗೂ ನಗರೀಕರಣದ ಹೆಸರಿನಲ್ಲಿ ಬೆಲೆ ಬಾಳುವ ಜಮೀನನ್ನು ರೈತರ ಒಪ್ಪಿಗೆ ಪಡೆಯದೇ ಮೂರು ಕಾಸಿಗೆ ಭೂ ಸ್ವಾಧೀನಪಡಿಸಿಕೊಳ್ಳುವ ನೀತಿಯನ್ನು ಸರಕಾರ ತಕ್ಷ ಣ ಕೈ ಬಿಡಬೇಕೆಂದು ಗುರುಮಹಾಂತ ಶ್ರೀಗಳು ಸರಕಾರವನ್ನು ಆಗ್ರಹಿಸಿದರು.
Vijaya Karnataka Web shri seth for farmers protest
ರೈತರ ಪ್ರತಿಭಟನೆಗೆ ಶ್ರೀಗಳು ಸಾಥ್‌


ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರೈತ ಪರ ಹೋರಾಟ ಸಂಘಟನೆಗಳು ಜಂಟಿಯಾಗಿ ಕೈಗೊಂಡ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೇಶಾದ್ಯಮತ ಅನುಸರಿಸುವ ರೈತ ವಿರೋಧಿ ಭೂ ಸ್ವಾಧೀನ ಕಾನೂನು ನೀತಿಯ ವಿರುದ್ಧ ರಾಷ್ಟ್ರೀಯ ಹೆದ್ದಾರಿ-50 ನ್ನು ಬಂದ್‌ ಮಾಡಿ ಪ್ರತಿಭಟಿಸಿದ ಹೋರಾಟವನ್ನುದ್ದೇಶಿಸಿ ಮಾತನಾಡಿದರು.

ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ರೈತರಿಗೆ ಮರಣ ಶಾಸನವಾದ ನೀತಿಯನ್ನು ತಕ್ಷ ಣ ಸ್ಥಗಿತಗೊಳಿಸುತ್ತಿರುವುದು ಸರಿಯಾದ ಕ್ರಮವಲ್ಲ, ದೇಶದ ಅವಶ್ಯಕವಾದಂತಹ ರಕ್ಷ ಣಾ ಸೇವೆಯ ಸಂದರ್ಭದಲ್ಲಿ ರೈತರ ಪರವಾನಿಗೆ ಪಡೆಯದೇ ರೈತರ ಜಮೀನನ್ನು ವಶಪಡಿಸಿಕೊಂಡು ಆ ಕಾರ್ಯ ಮಾಡಿದರೆ ತಪ್ಪಿಲ್ಲ, ಆದರೆ ಅಭಿವೃದ್ಧಿಯ ನೆಪದಲ್ಲಿ ಜಮೀನನ್ನೇ ನಂಬಿ ಬದುಕುತ್ತಿರುವ ರೈತರ ಬದುಕನ್ನು ಬರಡಾಗಿಸಿ ಅವರ ಜಮೀನನ್ನು ಒಪ್ಪಿಗೆ ಪಡೆಯದೇ ಭೂ ಸ್ವಾಧೀನ ಪಡಸಿಕೊಳ್ಳಬಾರದು, ಅದರ ಬದಲಾಗು ಪ್ರತಿಯೊಂದು ಎಕರೆ ಜಮೀನನ್ನೂ ನೀರಾವರಿಗೊಳಪಡಿಸಿ ರೈತರ ಬದುಕನ್ನು ಹಸಿರಾಗಿಸುವ ಮೂಲಕ ದೇಶವನ್ನೇ ಹಸಿರುಮಯವನ್ನಾಗಿಸುವ ಪ್ರಯತ್ನವನ್ನು ಸರಕಾರ ಮಾಡಬೇಕೆಂದು ಕಿವಿಮಾತು ಹೇಳಿದರು.

ರೈತ ಹೋರಾಟಗಾರ ಮಹಾಂತೇಶ ಅಂಗಡಿ , ರೈತ ಸಂಘದ ಅಧ್ಯಕ್ಷ ಮಲ್ಲನಗೌಡ ತುಂಬದ, ನಾಗರಾಜ ಹೊಂಗಲ್‌, ಎಂ.ಆರ್‌.ಪಾಟೀಲ ಮತ್ತಿತರರು ಮಾತನಾಡಿ, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅವಳಿ ತಾಲೂಕುಗಳಲ್ನು ಸಂಪೂರ್ಣ ನೀರಾವರಿ ಗೊಳಪಡಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್‌ ರಿಗೆ ಮನವಿ ಅರ್ಪಿಸಿದರು.

ಭಾರತಿ ಶೆಟ್ಟರ, ಶಿವಪುತ್ರಪ್ಪ ವಡಗೇರಿ, ಪವನ ವಾಲಿ, ಕೃಷ್ಣಾ ಜಾಲಿಹಾಳ, ಚೆನ್ನಬಸಪ್ಪ ಇಳಕಲ್‌, ವಿನೋದ ಬಾರಿಗಿಡದ, ಬಸಪ್ಪ ಸಜ್ಜನ, ಗುರಪ್ಪ ಸಜ್ಜನ, ಮಹಾಂತಪ್ಪ ಹಾವರಗಿ, ನಾಗರಾಜ ಬೆಳವಣಕಿ, ನಗರಾಜ ಹೊಸಕೆರೆ, ಮಹಾಂತೇಶ ಐಹೊಳೆ, ವೀರೇಶ ಅರಳಿ, ಮಹಾಂತೇಶ ಕಾಲಗಗ್ರಿ, ಅಮರಮ್ಮ ಮಾದರ, ಬಸಮ್ಮ ಚಲವಾದಿ, ಎಂ.ಎಂ.ಬಾಗವಾನ, ಶೇಖರಗೌಡ ಗೌಡರ, ಬಸಯ್ಯ ಹಿರೇಮಠ ಬಸವರಾಜ ಮೇಟಿ ಮತ್ತಿತರರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ