ಆ್ಯಪ್ನಗರ

ಪ್ರತಿಗಾಮಿ ಮನಸ್ಸುಗಳಿಂದ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ತಪ್ಪಿದೆ

ಕೂಡಲಸಂಗಮ: ಸಮಾನತೆಯ ಪ್ರತಿಪಾದಕರಾಗಿದ್ದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಶ್ರೀಗಳು ಬಸವಣ್ಣನವರ ಅನುಯಾಯಿಗಳಾಗಿದ್ದ ಕಾರಣಕ್ಕಾಗಿಯೇ ಕೆಲ ಪ್ರತಿಗಾಮಿ ಮನಸ್ಸುಗಳು ಭಾರತ ರತ್ನ ತಪ್ಪಿಸಿರುವ ಶಂಕೆ ಇದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Vijaya Karnataka 28 Jan 2019, 5:00 am
ಕೂಡಲಸಂಗಮ: ಸಮಾನತೆಯ ಪ್ರತಿಪಾದಕರಾಗಿದ್ದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಶ್ರೀಗಳು ಬಸವಣ್ಣನವರ ಅನುಯಾಯಿಗಳಾಗಿದ್ದ ಕಾರಣಕ್ಕಾಗಿಯೇ ಕೆಲ ಪ್ರತಿಗಾಮಿ ಮನಸ್ಸುಗಳು ಭಾರತ ರತ್ನ ತಪ್ಪಿಸಿರುವ ಶಂಕೆ ಇದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
Vijaya Karnataka Web siddaganga suresh is not guilty of bharat ratna by reactionary minds
ಪ್ರತಿಗಾಮಿ ಮನಸ್ಸುಗಳಿಂದ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ತಪ್ಪಿದೆ


ಕೂಡಲಸಂಗಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಿಂದ ಆಯ್ಕೆಯಾದ ಕೇಂದ್ರ ಸಚಿವರು ಶ್ರೀಗಳ ಬಗ್ಗೆ ನಿಜವಾದ ಗೌರವ ಹೊಂದಿದ್ದರೆ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಮೂಲಕ ಶ್ರೀಗಳ ಭಕ್ತರ ಪರವಾಗಿ ನಿಲ್ಲಬೇಕು ಎಂದರು.

ರಾಜ್ಯದಿಂದ ಆಯ್ಕೆಯಾದ ಲೋಕಸಭೆ ಸದಸ್ಯರು ಸಿದ್ದಗಂಗಾಮಠದ ಪ್ರಸಾದದ ಋುಣದಲ್ಲಿ ಇದ್ದು, ಈ ಋುಣವನ್ನು ತೀರಿಸಲು ಕೇಂದ್ರ ಸರಕಾರಕ್ಕೆ ತಮ್ಮ ನಿಜಶಕ್ತಿಯ ಹಕ್ಕೊತ್ತಾಯ ಮಾಡಬೇಕು.

ಪ್ರಧಾನಿ ಮೋದಿ ಸಿದ್ಧಗಂಗಾ ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸುವ ಮೂಲಕ ಗೌರವ ಹಚ್ಚಿಸಿಕೊಳ್ಳಬೇಕು. ಇಲ್ಲವಾದರೆ ಜನರು ಮೋದಿ ಮೇಲೆ ಇಟ್ಟ ವಿಶ್ವಾಸ, ನಂಬಿಕೆ ಕಳೆದುಕೊಳ್ಳುವ ಸಂದರ್ಭ ಬರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ