ಆ್ಯಪ್ನಗರ

ಯಡಿಯೂರಪ್ಪ ರಾಜೀನಾಮೆ ನೀಡಿ ಮನೆಗೆ ಹೋಗಲಿ: ಸಿದ್ದರಾಮಯ್ಯ

ಯಡಿಯೂರಪ್ಪ ನನ್ನದೇ ವಾಯ್ಸ್ ಆಗಿದ್ರೆ ರಾಜಿನಾಮೆ ಕೊಡ್ತೀನಿ ಎಂದಿದ್ರು. ಈಗ ರಾಜಿನಾಮೆ ಕೊಡಲಿ ಪಾಪ, ಲೆಟ್ ಹಿಮ್ ಸ್ಟಿಕ್ ಟು ಹಿಸ್ ವರ್ಡ್ಸ್. ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ರಾಜಿನಾಮೆ ಕೊಟ್ಟು ಮನೆಗೆ ಹೋಗಲಿ ಎಂದರು.

Vijaya Karnataka Web 10 Feb 2019, 3:38 pm
ಬಾಗಲಕೋಟೆ: ರಾಜ್ಯದ ಜೆಡಿಎಸ್‌-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಶಾಸಕರ ಮೇಲೆ ಆಪರೇಷನ್ ಕಮಲ ಕುರಿತ ಆಡಿಯೋ ವಿಚಾರದಲ್ಲಿ ತಪ್ಪು ಒಪ್ಪಿಕೊಂಡಿರುವ ಮಾಜಿ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.
Vijaya Karnataka Web Siddrama


ಬಾಗಲಕೋಟೆ ಬಾದಾಮಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯಿಸಿದರು.

ಯಡಿಯೂರಪ್ಪ ಹೇಳಿದ್ದೇನು..?
ಯಡಿಯೂರಪ್ಪ ನನ್ನದೇ ವಾಯ್ಸ್ ಆಗಿದ್ರೆ ರಾಜಿನಾಮೆ ಕೊಡ್ತೀನಿ ಎಂದಿದ್ರು. ಈಗ ರಾಜಿನಾಮೆ ಕೊಡಲಿ ಪಾಪ, ಲೆಟ್ ಹಿಮ್ ಸ್ಟಿಕ್ ಟು ಹಿಸ್ ವರ್ಡ್ಸ್. ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ರಾಜಿನಾಮೆ ಕೊಟ್ಟು ಮನೆಗೆ ಹೋಗಲಿ ಎಂದರು.

ಹುಬ್ಬಳ್ಳಿಯಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿಯನ್ನು ಆಹ್ವಾನಿಸದೇ ಇರುವ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನರೇಂದ್ರ ಮೋದಿಗೆ ಯಾವುದೇ ಪ್ರೊಟೋಕಾಲ್ ಗೊತ್ತಿಲ್ಲ. ಬಂದು ರಾಜಕೀಯ ಭಾಷಣ ಮಾಡಲಿಕ್ಕೆ ಬರ್ತಿದ್ದಾರೆ. ಅವರನ್ನು ರಾಜಕೀಯವಾಗಿಯೇ ಎದುರಿಸೋಣ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ