ಆ್ಯಪ್ನಗರ

ಮತ್ತೆ ಸಿಎಂ ಆದ್ರೆ 10 ಕೆಜಿ ಅಕ್ಕಿ ಕೊಡ್ತೇನೆ: ಮತ್ತೊಮ್ಮೆ ಮುಖ್ಯಮಂತ್ರಿ ಆಸೆ ಬಿಚ್ಚಿಟ್ಟ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಂದು ಬಾರಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರಾ ಎಂಬ ಮಾತುಗಳು ಕೇಳಿ ಬರುತ್ತಿರುವಾಗ ಸ್ವತಃ ಅವರೇ ಮತ್ತೊಂದು ಬಾರಿ ಸಿಎಂ ಆಗುವ ಕನಸನ್ನು ಬಿಚ್ಚಿಟ್ಟಿದ್ದಾರೆ. ಬಾದಾಮಿಯಲ್ಲಿ ಮಾತನಾಡಿದ ಅವರು, ಮತ್ತೆ ನಮ್ಮ ಸರಕಾರ ಬಂದು, ನಾನು ಮುಖ್ಯಮಂತ್ರಿಯಾದ್ರೆ ನಿಮಗೆ 10 ಕೆಜಿ ಅಕ್ಕಿ ಕೊಡುತ್ತೇನೆ ಎಂದಿದ್ದಾರೆ.

Vijaya Karnataka Web 20 Oct 2020, 3:25 pm
ಬಾಗಲಕೋಟೆ: ಮತ್ತೆ ನಮ್ಮ ಸರಕಾರ ಬಂದು, ನಾನು ಮುಖ್ಯಮಂತ್ರಿಯಾದ್ರೆ ನಿಮಗೆ 10 ಕೆಜಿ ಅಕ್ಕಿ ಕೊಡುತ್ತೇನೆ ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಂದು ಬಾರಿ ರಾಜ್ಯದ ಸಿಎಂ ಆಗುವ ಆಶಯವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
Vijaya Karnataka Web siddaramaiah expresses wish to become chief minister for one more term
ಮತ್ತೆ ಸಿಎಂ ಆದ್ರೆ 10 ಕೆಜಿ ಅಕ್ಕಿ ಕೊಡ್ತೇನೆ: ಮತ್ತೊಮ್ಮೆ ಮುಖ್ಯಮಂತ್ರಿ ಆಸೆ ಬಿಚ್ಚಿಟ್ಟ ಸಿದ್ದರಾಮಯ್ಯ


ಸ್ವಕ್ಷೇತ್ರ ಬಾದಾಮಿ ವ್ಯಾಪ್ತಿಯ ಕಾತರಕಿ ಗ್ರಾಮದಲ್ಲಿ ಮಾತನಾಡಿದ ಅವರು, ಜನರು ಯಾವತ್ತೂ ಹಸಿವಿನಿಂದ ಮಲಗಬಾರದು, ಹೊಟ್ಟೆ ತುಂಬ ಊಟ ಮಾಡಬೇಕು. ಬರ, ಪ್ರವಾಹ ಏನೇ ಬಂದ್ರೂ ಹೊಟ್ಟೆ ತುಂಬ ಊಟ ಇದ್ದರೆ ಜನ ನೆಮ್ಮದಿಯಿಂದ ಇರುತ್ತಾರೆ ಎಂದು ಹೇಳಿದರು.

ಮತ್ತೊಮ್ಮೆ ನಾವು ಅಧಿಕಾರಕ್ಕೆ ಬಂದು ನಾನು ಸಿಎಂ ಆದರೆ 10 ಕೆಜಿ ಅಕ್ಕಿ ಕೊಡುತ್ತೇನೆ. ಇದೊಂದು ದುಡ್ಡಿಲ್ಲದ ದರಿದ್ರ ಸರಕಾರ, ಸಂಬಳ ಕೊಡೋಕೂ ಸರಕಾರದ ಬಳಿ ದುಡ್ಡಿಲ್ಲ. ನಾನು ಸಿಎಂ ಆಗಿದ್ದಾಗ ಖಜಾನೆ ಯಾವಾಗಲೂ ಭರ್ತಿ ಆಗಿರುತ್ತಿತ್ತು, ಈಗ ದುಡ್ಡೇ ಇಲ್ಲ ಅಂತಿದ್ದಾರೆ. ಯಡಿಯೂರಪ್ಪ ಸಿಎಂ ಆದಮೇಲೆ ಒಂದು ಪೈಸೇನೂ ಇಲ್ಲ ಎಂದು ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು.

'ಹೇ.. ಮೈಕ್ ಶೋಕಿಗೆ ಹಿಡಿದಿದಿಯಾ..?' ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಫುಲ್‌ ಕ್ಲಾಸ್..!‌

ಶ್ರೀರಾಮುಲು ಕಾಲೆಳೆದ ಸಿದ್ದು..!
ಇನ್ನು, ಮಾತಿನ ನಡುವೆ ಸಚಿವ ಶ್ರೀರಾಮುಲು ಅವರನ್ನು ಕಾಲೆಳೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದರು. ಈ ಆಸಾಮಿ ಶ್ರೀರಾಮುಲು ನನ್ನ ವಿರುದ್ಧ ಸ್ಫರ್ಧೆ ಮಾಡಿದ್ದವ. ಆತನ ಬಳಿಯೂ ಸಮುದಾಯ ಭವನ ನಿರ್ಮಾಣಕ್ಕೆ ಹಣ ಕೇಳಿದ್ದೇ. ಆದರೆ, ಅನುದಾನ ಇಲ್ಲ, ಯಡಿಯೂರಪ್ಪ ಹಣನೇ ಕೊಟ್ಟಿಲ್ಲ ಎಂದು ತಿಳಿಸಿದರು ಎಂದು ಸಿದ್ದರಾಮಯ್ಯ ಹೇಳಿದರು.

ಪ್ರವಾಹದಿಂದ ಜನ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರೂ ನೆರವಿಗೆ ಬಾರದ ಮೋದಿ: ಸಿದ್ದರಾಮಯ್ಯ ಕಿಡಿ

ನಾನು ಬಹಳ ಕಾಲದಿಂದ ರಾಜಕಾರಣದಲ್ಲಿದ್ದೇನೆ. ಈಗಲೂ ಬಿಜೆಪಿಯಲ್ಲಿರೋ ಕೆಲ ಮಂತ್ರಿಗಳು ನನ್ನ ಮಾತು ಕೇಳುತ್ತಾರೆ. ಅವರಿಗೆ ಹೇಳಿ ಕೆಲಸ ಮಾಡಿಕೊಡಬಹುದು ಅಷ್ಟೇ. ವಿ.ಸೋಮಣ್ಣಗೆ ಮನೆ ಬಗ್ಗೆ ಕೇಳಿದೆ, ಈಗಾಗಲೇ ಲಾಕ್ ಮಾಡಿಬಿಟ್ಟಿದ್ದಾರಂತೆ. ನನ್ನ ಕ್ಷೇತ್ರಕ್ಕೆ 7 ಸಾವಿರ ಮನೆಗಳನ್ನ ಕೊಡಲು ಕೇಳಿದ್ದೇ, ಕೊಡಲಿಲ್ಲ. ಸರ್ಕಾರದ ಬಳಿ ಈಗ ದುಡ್ಡೇ ಇಲ್ಲ, ಯಡಿಯೂರಪ್ಪ ಅನುದಾನ ಬಿಡುಗಡೆ ಮಾಡಿಲ್ಲ ಅಂದ್ರು ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.

ಯಡಿಯೂರಪ್ಪ ಹೆಚ್ಚು ದಿನ ಸಿಎಂ ಆಗಿರಲ್ಲ, ಈ ಬಗ್ಗೆ ಚರ್ಚೆ ನಡೀತಿರೋದು ನಿಜ: ಸಿದ್ದರಾಮಯ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ